ಈರುಳ್ಳಿ ಬೆಳೆಗಾರರ ಸಂಘದಿಂದ ಈರುಳ್ಳಿ ಬೆಳೆಯ ನಷ್ಟ ಪರಿಹಾರ – ನೀಡುವಂತೆ ಆಗ್ರಹ.
ಕೊಟ್ಟೂರು ನ.04

ಕರ್ನಾಟಕ ರಾಜ್ಯದಲ್ಲಿ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದಂತ ಎನ್.ಎಂ ಸಿದ್ದೇಶರವರು ಬಸ್ ಸ್ಟ್ಯಾಂಡ್ ವೃತ್ತದಲ್ಲಿ ನಾಶವಾಗಿರುವ ಈರುಳ್ಳಿ ಚೆಲ್ಲುವುದರ ಮೂಲಕ ತಶೀಲ್ದಾರರಾದ ಜಿ.ಕೆ ಅಮರೇಶ್ ರವರಿಗೆ ಅರ್ಜಿ ಮನವಿ ನೀಡುವುದರ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರಿಗೆ ಕರ್ನಾಟಕ ರಾಜ್ಯದಲ್ಲಿ ಈರುಳ್ಳಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಿ ಮತ್ತು ಈರುಳ್ಳಿ ಬೆಳೆ ನಾಶಕ್ಕೆ ಪರಿಹಾರ ನೀಡುವ ಕುರಿತು ಮನವಿ ಮಾಡಿದರು. ಕೊಟ್ಟೂರು ಹೂವಿನಹಡಗಲಿ ಹಗರಿಬೊಮ್ಮನಹಳ್ಳಿ ಹರಪನಹಳ್ಳಿ ಕೂಡ್ಲಿಗಿ ಹೊಸಪೇಟೆ ತಾಲೂಕುಗಳಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಗಾರರು ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಇದಕ್ಕೆ ಅಧಿಕಾರಿಗಳು ಎಚ್ಚರವಹಿಸಿ ಪರಿಶೀಲನೆ ಮಾಡಿ ಸೂಕ್ತವಾದ ಪರಿಹಾರ ಅಂದರೆ 25 ರಿಂದ 30 ಸಾವಿರದವರೆಗೆ ಈರುಳ್ಳಿ ಬೆಳೆ ಹಾನಿ ಪರಿಹಾರ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನ ಮಾನಗಳಲ್ಲಿ ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವು ದೆಂದು ಈರುಳ್ಳಿ ಬೆಳೆಗಾರರ ಸಂಘದ ಎನ್.ಎಂ ಸಿದ್ದೇಶ ರಾಜ್ಯಾಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಎನ್.ಭರಮಣ್ಣ ಒಂದು ಮುನ್ನೆಚ್ಚರಿಕೆ ಮಾತುಗಳನ್ನು ಸರ್ಕಾರಕ್ಕೆ ತಿಳಿಸಿದರು. ಈರುಳ್ಳಿ ನಷ್ಟ ಪರಿಹಾರ ಕೋರಿ ಮಾನ್ಯ ತಹಸೀಲ್ದಾರರಿಗೆ ಮನವಿ ಮಾಡಿ ಕೊಂಡಿದ್ದೆವು ಆದರೆ ಯಾವುದೇ ಅಧಿಕಾರಿಯು ರೈತರಿಗೆ ಸ್ಪಂದಿಸುವ ಕೆಲಸವಾಗಿಲ್ಲ ಇದು ಅಧಿಕಾರಿಗಳಿಗೆ ಸೂಕ್ತವಲ್ಲ ರೈತರನ್ನು ಕಡೆ ಗಣಿಸುವಂತೆ ಕಾಣುತ್ತಾರೆ ರೈತರನ್ನು ಪರೀಕ್ಷೆ ಮಾಡಬೇಡಿ ಇದೇ ರೀತಿ ತಾಲೂಕಿನ ಅಧಿಕಾರಿಗಳು ಎಚ್ಚರ ವಹಿಸದಿದ್ದರೆ ತಕ್ಕ ಪಾಠ ಕಲಿಸ ಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಮರುಳು ಸಿದ್ದಪ್ಪನವರು ತಿಳಿಸಿದರು. ಇದಕ್ಕೆ ಪ್ರತಿ ಉತ್ತರವಾಗಿ ಮಾನ್ಯ ದಂಡಾಧಿಕಾರಿಗಳಾದ ಜಿ.ಕೆ ಅಮರೇಶ್ ರವರು ಈಗಾಗಲೇ ತಾಲೂಕಿನ ಆದ್ಯಂತ ಅದರಲ್ಲೂ ತೂಲಹಳ್ಳಿ ಭಾಗದ ಈರುಳ್ಳಿ ಹೊಲಗಳನ್ನು ಹೋಗಿ ನೋಡಿದ್ದೇನೆ ನಷ್ಟವಾಗಿದೆ ಇದನ್ನು ಸರ್ಕಾರಕ್ಕೆ ಈ ಕೂಡಲೇ ಗಮನಕ್ಕೆ ತಂದು ರೈತರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಬಿಜೆಪಿ ಮುಖಂಡರಾದ ಬರಮನಗೌಡ ಈ ಒಂದು ಹೋರಾಟಕ್ಕೆ ಸಂಪೂರ್ಣ ಬೆಂಬಲವಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಈರುಳ್ಳಿ ಬೆಳೆಗಾರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಉಮೇಶ್ ಮಂಜಪ್ಪ ಎಲ್.ಎ ಸಿದ್ದಪ್ಪ ಮಲ್ಲಿಕಾರ್ಜುನ್ ಗೌಡ ನಿಂಗನಗೌಡ ಶಂಕ್ರಪ್ಪ ನಾಗರಕಟ್ಟಿ ಎಚ್ ರಾಮಪ್ಪ ಮತ್ತಿತರರು ರೈತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು