ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ಏಳನೇ ತರಗತಿ ವಿದ್ಯಾರ್ಥಿ ಯಿಂದ ಹಾಗೂ 10 ನೇ. ತರಗತಿ ವಿದ್ಯಾರ್ಥಿಗಳಿಂದ – ಶುಭ ಕೋರುವ ಸಮಾರಂಭ ಜರುಗಿತು.
ಕಲಕೇರಿ ಫೆ.22

ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಕಲಕೇರಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ಏಳನೇ ತರಗತಿ ವಿದ್ಯಾರ್ಥಿಯಿಂದ ಹಾಗೂ 10 ನೇ. ತರಗತಿ ವಿದ್ಯಾರ್ಥಿಗಳಿಂದ ಶುಭ ಕೋರುವ ಸಮಾರಂಭ ನಡೆಯಿತು. ಸಾನಿಧ್ಯ ಶ್ರೀ ಷ.ಬ್ರ ಸಿದ್ಧರಾಮ ಶಿವಾಚಾರ್ಯ ಸಂಸ್ಥಾನ ಹಿರೇಮಠ ಇವರು ಆಶೀರ್ವಚನ ನೀಡಿದರು. ಮಕ್ಕಳು ಬೆಳೆಯೋದಿಕ್ಕೆ ಕಾರಣರು ತಾಯಿ ತಂದೆ ಅಂದರೆ ಮಕ್ಕಳಿಗೆ ತಾಯಿ ತಂದೆ ದಾರಿ ದೀಪವಾಗಬೇಕು ಮೊದಲನೇ ಗುರು ತಾಯಿ ಎರಡನೇ ಗುರು ಶಿಕ್ಷಕರು ಎಂಬುದನ್ನು ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಿ.ಎಸ್ ಹಿರೇಮಠ ದಂಪತಿಗಳು. ಎಸ್. ಎಸ್ ಕಲಶೆಟ್ಟಿ ದಂಪತಿಗಳು. ನಿವೃತ್ತಿ ಹೊಂದಿರುವ ಇವರಿಗೆ ಈ ಶಾಲೆಯ ಶಿಕ್ಷಕರಿಂದ ಗೌರವ ಸನ್ಮಾನ ನಡೆಯಿತು. ಅಧ್ಯಕ್ಷರು ಜೆ.ಬಿ ಗುಮಶೆಟ್ಟಿ ಮುಖ್ಯ ಗುರುಗಳು ಎಸ್.ಬಿ ಪಾಟೀಲ್ ಸಂಸ್ಥೆಯ ಅಧ್ಯಕ್ಷರು. ಎಸ್.ಎಲ್ ನಾಯ್ಕೋಡಿ ಬಿ.ಆರ್.ಪಿ ಅಧಿಕಾರಿಗಳು. ಎಸ್.ಜಿ ಝಳಕಿ. ಎಸ್. ಎಸ್ ಮಠ. ಡಿ.ಎಮ್ ಗುಮಶೆಟ್ಟಿ. ಜಿ.ಎಮ್ ಗುಮಶೆಟ್ಟಿ. ಊರಿನ ಹಿರಿಯರಾದ ಸಂಗಾರೆಡ್ಡಿ ದೇಸಾಯಿ. ಆದರ್ಶ ಶಿಕ್ಷಣ ಸಂಸ್ಥೆಯ ಮುನ್ನ ಸಿರಸಗಿ. ಶಾಲೆಯ ಸಿಬ್ಬಂದಿ ವರ್ಗ ಎಸ್.ಎಸ್ ಕೋರವಾರ್. ವ್ಹಿ.ಎಮ್ ಸಿಂದಗಿ. ಎಸ್. ಆರ್ ಹರಿಜನ್. ವ್ಹಿ.ಟಿ ಜಾನಮಟ್ಟಿ. ಎಸ್.ಎಸ್ ಬಿರಾದಾರ್. ಶ್ರೀಮತಿ ಎಸ್.ಎಸ್ ಭಜಂತ್ರಿ. ಕೆ.ಎಸ್ ದೇಸಾಯಿ ಶ್ರೀಮತಿ ತಬಸುಮ್ ದುಂಡಸಿ. ಎಸ್.ಕೆ ಗುಂಡುಕನಾಳ. ಶ್ರೀಮತಿ ಎಸ್.ಎಸ್ ಪತ್ತಾರ್. ಶ್ರೀಮತಿ ಬಿ.ಎಮ್ ಉಸ್ತಾದ್. ಶ್ರೀಮತಿ ಎನ್. ಜೆ. ಸುಲೇಗಾವಿ. ಶ್ರೀಮತಿ ಡಿ.ಆರ್ ಹವಾಲ್ದಾರ್. ಶ್ರೀಮತಿ ಪಿ.ಆರ್ ಮಣೊರ. ವ್ಹಿ.ಎಮ್ ನಂದಿಮಠ. ಎಸ್.ಪಿ ರಾಣಗಟ್ಟಿ. ಬಿ.ಎಸ್. ದೇವರಮನೆ ಮುಖ್ಯ ಗುರುಗಳು ಪ್ರಾಥಮಿಕ ಶಾಲೆ ವಿಭಾಗ ಕಲಕೇರಿ. ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಶಾಲೆಯ ಎಲ್ಲಾ ಮುಖ್ಯಗುರುಗಳು ಶಿಕ್ಷಕರು ಗುರು ಮಾತೆಯರು ಅವರು ಶಾಲೆಯ ವಿದ್ಯಾರ್ಥಿಗಳು ಎಲ್ಲಾ ಪಾಲಕರು ಊರಿನ ಎಲ್ಲಾ ಸಾರ್ವಜನಿಕರು ಸೇರಿದಂತೆ ಈ ಸಮಾರಂಭ ಅದ್ದೂರಿಯಿಂದ ವಿದ್ಯಾರ್ಥಿಗಳಿಂದ ಅನೇಕ ಕಾರ್ಯಕ್ರಮಗಳು ನಡೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ