ದೇವರ ದಾಸಿಮಯ್ಯನವರ ವೇಷ ಧರಿಸಿ ಜಯಂತಿ ಆಚರಣೆ.

ಇಂಡಿ ಏಪ್ರಿಲ್.13

ಕನ್ನಡ ನಾಡಿನ ಶಿವಶರಣರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಬಾಳಿ ಬದುಕಿದ ಶರಣರು. ಆದ್ಯ ವಚನಕಾರ, ಜನಪದ ಜಗದ್ಗುರು ಎಂಬ ಬಿರುದಾಂಕಿತ ದೇವರ ದಾಸಿಮಯ್ಯನವರ ವಚನಗಳಲ್ಲಿ ವೀರಶೈವ ನಿಷ್ಠೆ, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಔಚಿತ್ಯಪೂರ್ಣವಾದ ದೃಷ್ಟಾಂತಗಳ ಸಂಪತ್ತಿಯ ಗುಣಗಳು ಎದ್ದು ಕಾಣುತ್ತವೆ. ಅವರು ವಿಶ್ವದ ಪ್ರಥಮ ವಚನಕಾರ. ರಾಮನಾಥ ಎಂಬ ಅಂಕಿತನಾಮದಲ್ಲಿ 176 ವಚನಗಳನ್ನು ರಚಿಸಿದ್ದಾರೆ. ದೇವರ ದಾಸಿಮಯ್ಯನವರು ತಮ್ಮ ಆಧ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ನಮಗಾಗಿ ಜೀವನದ ಸನ್ಮಾರ್ಗವನ್ನು ತಿಳಿಸಿದ್ದಾರೆ. ಇವುಗಳನ್ನು ಅನುಸರಿಸಿ ನಡೆದರೆ, ನಮ್ಮ ಬಾಳು ಬೆಳಕಾಗುವುದು. ಅವರ ಜಯಂತಿ ಆಚರಣೆ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ದೇವರ ದಾಸಿಮಯ್ಯನವರ ವೇಷ ಧರಿಸಿ ಜಯಂತಿ ಆಚರಿಸಿದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button