ಕೃಷಿ ಪರಿಕರ ಮಾರಾಟಗಾರರ – ಸಭೆ.
ಕೊಟ್ಟೂರು ಮೇ.24

ತಾಲೂಕಿನ ಮಾನ್ಯ ತಹಶೀಲ್ದಾರ್ ಜಿ.ಕೆ ಅಮರೇಶ್ ರವರ ಆದೇಶದ ಮೇರೆಗೆ ತಾಲೂಕ ಆಡಳಿತ ಕಛೇರಿಯಲ್ಲಿ ಕೃಷಿ ಅದಿಕಾರಿ ಹಾಗೂ ಕೃಷಿಕ ಸಮಾಜದ ಅಧ್ಯಕ್ಷರಾದ ನಾಗೇಶ ರವರ ನೇತೃತ್ಸದಲ್ಲಿ ಸಭೆ ನಡೆಯಿತು.ಕೃಷಿ ತಾಂತ್ರಿಕಅಧಿಕಾರಿ ನೀಲಾನಾಯ್ಕ ಸ್ವಾಗತಿಸಿದರು. ಕೃಷಿ ಅಧಿಕಾರಿಯಾದ ವಾಮದೇವಪ್ಪ ಕೊಳ್ಳಿ ಮಾತನಾಡಿ ಡಿ.ಎ.ಪಿ ಗೊಬ್ಬರದ ಬೆಲೆ 1350 16,20 ಗೊಬ್ಬರದ ಬೆಲೆ 1250.ರೂ ಇದ್ದರಾದರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು ನಂತರ ರೈತ ಸಂಘದ ಮುಖಂಡ ಕೆ.ಎಸ್ ಪ್ರಕಾಶನಾಯ್ಕ ಮಾತನಾಡಿದರು. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕೃಷಿ ಅಧಿಕಾರಿ ಹಾಗೂ ತಹಶಿಲ್ದಾರರಿಗೆ ದೂರು ಕೊಡುತ್ತೇವೆ. ಎಲ್ಲಾ ಅಂಗಡಿಗಳಲ್ಲಿ ಬೋರ್ಡ ಅಳವಡಿಸಿ ಮಾರಾಟದ ಬೆಲೆ ನಮೂದಿಸ ಬೇಕು ನಿಮ್ಮ ಎಲ್ಲಾ ಸ್ಟಾಕ್ ಗೋಡಮ್ ಗಳಿಗೆ ನಿಮ್ಮಅಂಗಡಿ ಹೆಸರು ಬರೆಯಬೇಕು ಎಂದು ಹೇಳಿದರು. ನಂತರ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಭರಮಣ್ಣ ಮಾತನಾಡಿ ರೈತರಿಗೆ ಯಾವುದೇ ತೊಂದರೆ ಯಾಗದೆ ಬೀಜ ಗೊಬ್ಬರವನ್ನು ಸರಿಯಾದ ಸಮಯಕ್ಕೆ ವಿತರಿಸಬೇಕು ಎಂದು ಹೇಳಿದರು. ನಂತರ ತಹಶೀಲ್ದಾರ್ ಜಿ.ಕೆ ಅಮರೇಶ್ ಮಾತನಾಡಿ ಅಂಗಡಿ ಮಾಲೀಕರು ರೈತರಿಗೆ ತೊಂದರೆ ಆಗದ ಹಾಗೆ ನೋಡಿ ಕೊಳ್ಳಿ ರೈತರು ತಮಗೆ ದೂರು ಕೊಟ್ಟರೆ ಮುಲಾಜಿಲ್ಲದೆ ಲೈಸೆನ್ಸ್ ರದ್ದು ಮಾಡಿ ಎಂದು ಕೃಷಿ ಅಧಿಕಾರಿಗೆ ತಾಕೀತು ಮಾಡಿದರು ರೈತ ಮುಖಂಡ ಹೊನ್ನುರ್ ಸಾಬ್ ಬಾಲಾಜಿ ಅಂಗಡಿಯಲ್ಲಿ ಸ್ಟಾಕ್ ಇದ್ದರು ಇಲ್ಲವೆಂದು ಹೇಳುತ್ತಾರೆಂದು ದೂರಿದರು. ಈ ಸಭೆಯಲ್ಲಿ ಚಂದ್ರಶೇಖರ್ ದಲಿತ ಮುಖಂಡರು,ರೈತ ಮುಖಂಡರಾದ,ಪಿ ಮಂಜುನಾಥ, ಶ್ರೀಧರ, ಮರಳುಸಿದ್ದಪ್ಪ ಕೊಟ್ಟೂರು ಕೃಷಿ ಅಧಿಕಾರಿ ಶ್ಯಾಮ ಸುಂದರ್ ತಿಮ್ಮಣ್ಣ ಪರಿಕರಗಳ ಮಾರಟಗಾರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು