ದೇವೇಗೌಡ. ವಾಜಪೇಯಿ ಕೆಲಸ ಸ್ಮರಣೆ. ಮೋದಿಯ ಗುಣಗಾನ ಮಾಡಿದ ಶಾಸಕ — ಕೆ.ನೇಮಿರಾಜ್ ನಾಯ್ಕ್.
ಕೊಟ್ಟೂರು ಆಗಷ್ಟ.15

ಸರ್ಕಾರಿ ಪ್ರೌಢ ಶಾಲಾ ಮೈಧಾನದಲ್ಲಿ ತಾಲೂಕು ಆಡಳಿತ ಮತ್ತು ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ ದಿನೋತ್ಸವದ ಕಾರ್ಯಕ್ರಮದಲ್ಲಿ ಪೋಲೀಸ್, ಗೃಹರಕ್ಷಕ ದಳ, ಸೇರಿದಂತೆ ಶಾಲಾ ಮಕ್ಕಳ ಪಥ ಸಂಚಲನ ಗೌರವ ಸ್ವೀಕರಿಸಿ ನಂತರ ಮಾತನಾಡಿದರು.ನಮ್ಮ ರಾಷ್ಟ್ರದ ಅತ್ತ್ಯುನ್ನತ ಪ್ರಧಾನ ಮಂತ್ರಿ ಹುದ್ದೆಗೇರುವ ಮೂಲಕ ಹೆಚ್.ಡಿ.ದೇವೆಗೌಡರು ಭಾರತದ ರಾಜಕಾರಣದಲ್ಲಿ ಕನ್ನಡಿಗರ ಪರವಾಗಿ ಬಹುದೊಡ್ಡ ಸಾಧನೆಯ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದು ಪ್ರತಿಯೋಬ್ಬ ಕನ್ನಡಿಗರು ಹೆಮ್ಮೆ ಪಡುವ ವಿಚಾರವೆಂದು ಶಾಸಕ ಕೆ.ನೇಮಿರಾಜ್ ನಾಯ್ಕ್ ಮಾಜಿ ಪ್ರಧಾನಿಗಳ ರಾಜಕಾರಣವನ್ನುಶಾಸಕರಾಗಿ, ಸಚಿವರಾಗಿ, ಸಿಎಂ, ಪ್ರಧಾನಿ ಆಗಿ ಕರ್ನಾಟಕ ರಾಜ್ಯದ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ದೇವೆಗೌಡರು ನೀಡಿರುವ ಕೊಡುಗೆ ಆಪಾರವಾಗಿದೆ ಎಂದು ಮಾಜಿ ಪ್ರಧಾನಿಗಳ ಕಾರ್ಯಗಳನ್ನು ಕೊಂಡಾಡಿದರು.ಹಾಗೇನೆ ಇನ್ನೋರ್ವ ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರು ಗ್ರಾಮ್ ಸಡಕ್ ಹಾಗು ಚತುಷ್ಪಥ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಗ್ರಾಮೀಣ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ವಲಯಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಈ ಮೂಲಕ ದೇಶದ ಪ್ರತಿ ದಿಕ್ಕಿಗೂ ಸಂಚಾರ ಕ್ಷೇತ್ರದ ಬೆಳವಣಿಗೆಗೆ ಸಾಕ್ಷಿಯಾದರು ಎಂದು ವಾಜಪೇಯಿ ಆಡಳಿತದ ನೆನಪುಗಳನ್ನು ನೇಮಿರಾಜ್ ನಾಯ್ಕ್ ಮೆಲುಕು ಹಾಕಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹತ್ತು ವರ್ಷ ಅವಧಿಯ ನಿರಂತರ ಆಡಳಿತದಲ್ಲಿ ದೇಶ ಪ್ರಗತಿಯ ನಾಗಲೋಟದಲ್ಲಿ ಮುನ್ನೆಡೆದಿದೆ. ಅಮೇರಿಕಾ, ಚೀನಾ, ರಷ್ಯಾದಂತಹ ವಿಶ್ವದ ಬಲಿಷ್ಠಗಳಿಗೆ ನೇರ,ನೇರಾ ಪೈಪೋಟಿ ಕೊಡುವಷವಷ್ಟು ಪ್ರಸ್ತುತ ಭಾರತ ಬಲಿಷ್ಠವಾಗಿದೆ. ಇದಕ್ಕೆ ಮೋದಿಯವರ ದಕ್ಷ ಆಡಳಿತವೇ ಕಾರಣ ಎಂದು ತಮ್ಮ ಭಾಷಣದಲ್ಲಿ ಮೋದಿಯವರ ಆಡಳಿತದ ಬಗ್ಗೆ ಜೆಡಿಎಸ್ ಪಕ್ಷದ ಶಾಸಕರು ಆಗಿರುವ ನೇಮಿರಾಜ್ ನಾಯ್ಕ್ ಗುಣಗಾನ ಮಾಡಿದ್ದು ವಿಶೇಷ ಎನಿಸಿತು.ಈ ಸಲದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯ್ಕ್ ಮಾಡಿದ ಭಾಷಣ ಅತ್ಯಂತ ವಿಭಿನ್ನವಾಗಿತ್ತು. ಚೊಕ್ಕದಾಗಿ, ಮೌಲ್ಯಾಧಾರಿತ ಅಂಶಗಳನ್ನು ಒಳಗೊಂಡಿತ್ತು.ಕೇಳುಗರಲ್ಲಿ ಆಸಕ್ತಿ ಮೂಡಿಸಿತೇ ಹೊರತು .

ಅಂದರೇ ಗಂಟೆಗಟ್ಟಲೆಯ ಕೊರೆತವಾಗಲಿ, ವೈಯುಕ್ತಿಕ ಸ್ವಕುಚ್ಛ ಮರ್ದನವಾಗಿರಲಿಲ್ಲ ಸತತ ಹತ್ತು ವರ್ಷಗಳಿಂದ ಒಂದೇ ತರಹದ ಭಾಷಣ ಕೇಳುವ ಮರ್ಜಿಯಿಂದ ಸಾರ್ವಜನಿಕರು, ಮಕ್ಕಳನ್ನು ಸ್ವಾತಂತ್ರ್ಯ ಗೊಳಿಸಿದ್ದಂತು. ರಾಷ್ಟ್ರ ಧ್ವಜವನ್ನು ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಅಮರೇಶ್ ಜಾಲಿಹಾಳ್ ಜಿ.ಕೆ. ರಾಷ್ಟ್ರದ ಹಿರಿಯರ ತ್ಯಾಗ ಬಲಿಧಾನಕ್ಕೆ ಎಂದು ಲೋಪ ಬರದಂತೆ ಪ್ರತಿಯೊಬ್ಬರು ಮುನ್ನೆಡೆಯಬೇಕು ಎಂದರು ಬಾಹ್ಯಾಕಾಶದಂತಹ ರಂಗದಲ್ಲಿ ವಿಶ್ವದಲ್ಲಿಯೇ ದೊಡ್ಡ ಮಟ್ಟದ ಸಾಧನೆ ತೋರುವತ್ತ ರಾಷ್ಟ ಮುಂದಾಗಿರುವುದು ನಾವು ಗಳಿಸಿದ ಸ್ವಾತಂತ್ರೋತ್ಸವದ ಸಾಧನೆಗೆ ಸಾಕ್ಷಿಯಾಗಿದೆ ಎಂದರು.ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪರಮೇಶ್ವರ, ಸರ್ಕಲ್ ಇನ್ಸ್ಪೆಕ್ಟರ್ ವೆಂಕಟಸ್ವಾಮಿ, ಸಬ್ಇನ್ಸ್ಪೆಕ್ಟರ್ ಗೀತಾಂಜಲಿ ಶಿಂಧೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ. ಪ.ಪಂ ಸದಸ್ಯರುಗಳಾದ ಬಾವಿಕಟ್ಟಿ ಶಿವಾನಂದ, ಜಿ.ಸಿದ್ದಯ್ಯ, ಮರಬದ ಕೊಟ್ರೇಶ್,ವೀಣಾ ವಿವೇಕಾನಂದ ಗೌಡ, ಕೆಂಗರಾಜ್, ಬೋರ್ವೆಲ್ ತಿಪ್ಪೇಸ್ವಾಮಿ, ಡಿಶ್, ಮಂಜುನಾಥ, ಮುಖಂಡರುಗಳಾದ ವೈ.ಮಲ್ಲಿಕಾರ್ಜುನ, ಕೊಟ್ರೇಶ್ ಕಾಮಶೆಟ್ಟಿ, ಮರಬದ ನಾಗರಾಜ, ಬೂದಿ ಶಿವಕುಮಾರ್, ಕಾ.ಸ.ಪ ಅಧ್ಯಕ್ಷ ಡಿ.ಕೊಟ್ರೇಶ್, ಹೆಚ್.ಗುರುಬಸವರಾಜ,ಸಿ.ಆರ್.ಪಿ. ಅಜ್ಜಪ್ಪ, ಮೈದೂರು ಶಶಿಧರ್ ಮತ್ತಿತರರು ಪಾಲ್ಗೊಂಡಿದ್ದರು.ಸ್ವಾತಂತ್ರೋತ್ಸವದ ನಿಮಿತ್ಯ ಸಾಧನೆಗೈದ ಪತ್ರಕರ್ತರು, ಎಸ್ ಪ್ರಕಾಶ್,ಬದ್ದಿ ಮಂಜುನಾಥ್, ಪರಶುರಾಮ್ ಸುಲೇಕೆ, ಸನ್ಮಾನಿಸಲಾಯಿತು.ಮತ್ತು ನಿವೃತ್ತ ಸ್ವಾತಂತ್ರ ಹೋರಾಟಗಾರರು ಮತ್ತಿತರರನ್ನು ಶಾಸಕರು ಸನ್ಮಾನಿಸಿ ಅಭಿನಂದಿಸಿದರು. ನಂತರ ವಿವಿದ ಶಾಲಾ ಮಕ್ಕಳಿಂದ ರಾಷ್ಟ ಪ್ರೇಮದ ಸಂಕೇತ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆದವು ಉಪಪಚಾರ್ಯರಾದ ಸಿ.ಬಸವರಾಜ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಜಿ.ಎಂ.ಮನೋಹರ ಸ್ವಾಮಿ ನಿರೂಪಿಸಿದರು.
ತಾಲೂಕ ವರದಿಗಾರರು: ಪ್ರದೀಪ್.ಕುಮಾರ್.C ಕೊಟ್ಟೂರು