ಸರ್ಕಾರ ಜಿಂದಾಲ್ ಜೊತೆ ಸೇರಿ ಭ್ರಷ್ಟಾಚಾರ ಮಾಡುತ್ತಿದೆ – ಆರ್.ಪಿ.ಐ ಆರೋಪ.
ಹೊಸಪೇಟೆ ಆ.30

ಸುಮಾರು 11 ಸಾವಿರ ಕೋಟಿ ಸ್ಕ್ಯಾಮ್ ಮಾಡಲು ಸರ್ಕಾರ ಮುಂದಾಗಿದೆ ಆರ್ಪಿಐ ಪಕ್ಷದ ಜೆಸಿ ವೆಂಕಟರಮನಪ್ಪ ಆರೋಪ. ಸರ್ಕಾರ ಜಿಂದಾಲ್ ಕಂಪನಿ ಜೊತೆ ಸೇರಿ ಭ್ರಷ್ಟಾಚಾರದಲ್ಲಿ ಮುಳುಗಿದೆ ರೈತರ 3,677 ಎಕರೆ ಭೂಮಿಯನ್ನೂ ಎಕರೆಗೆ ಕೇವಲ 1.25 ಲಕ್ಷಕ್ಕೆ ಕೊಡಲು ಮುಂದಾಗಿ ಸುಮಾರು 11 ಸಾವಿರ ಕೋಟಿ ಸ್ಕ್ಯಾಮ್ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಇದನ್ನು ಆರ್.ಪಿ.ಐ. ಪಕ್ಷ ಖಂಡಿಸುತ್ತಾ ಸರ್ಕಾರದ ಸ್ಕ್ಯಾಮ್ ಮಾಡಲು ಮುಂದಾಗಿರುವುದನ್ನು ತಡೆದು ಇಲ್ಲಿನ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು.ಆರ್.ಪಿ.ಐ ಪಕ್ಷದಿಂದ ಮತ್ತು ಸಮತಾ ಸೈನಿಕ ದಳ ಸಂಘಟನೆಯಿಂದ ರಾಜ್ಯ, ಸ್ಥಳೀಯ ಮತ್ತು ಸುತ್ತ ಮುತ್ತಲಿನ ಜಿಲ್ಲೆಯ ನಾಯಕರ ನಿಯೋಗ ಜಿಂದಾಲ್ ಗೆ ಕೊಡ ಮಾಡುವ ಭೂಮಿಯ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು. ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಆರ್.ಪಿ.ಐ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಸಿ. ವೆಂಕಟರಮಣಪ್ಪ ಮಾತನಾಡಿ ಇಲ್ಲಿನ ಸರ್ಕಾರಿ ಭೂಮಿಯಲ್ಲಿ ಸುಮಾರು ಜನ ರೈತರು ಬೆಳೆಗಳ ಇಟ್ಟುಕೊಂಡು ಜೀವನ ನಡೆಸುತ್ತಿರುತ್ತಾರೆ. ಆದರೆ ಇದನ್ನು ಪರಿಗಣನೆಗೆ ತೆಗೆದು ಕೊಳ್ಳದೆ ಸರ್ಕಾರ ಸುಮಾರು 3667 ಎಕರೆ ಭೂಮಿಯನ್ನು ಜಿಂದಾಲ್ ಕಂಪನಿಗೆ ಕೊಡಲು ತೀರ್ಮಾನ ಮಾಡಿದ್ದು, ಸದರಿ ಸ್ಥಳದಲ್ಲಿ 1 ಎಕರೆ ಭೂಮಿ ಬೆಲೆ ಸುಮಾರು 3 ಕೋಟಿ ಇದ್ದು, ಇದರ ಮೊತ್ತ ಸುಮಾರು 11,000 ಕೋಟಿ ಯಾಗುತ್ತದೆ. ಅಭಿವೃದ್ಧಿ ಪಡಿಸಲಾದ ಮೊತ್ತ ಶೇಕಡ 40% ಕಳೆದರೂ ಇದರ ಮೌಲ್ಯ 7 ಸಾವಿರ ಕೋಟಿಗಳು ಆಗುತ್ತದೆ. ಆದರೆ ಸರ್ಕಾರ ಈಗ 1667 ಎಕರೆಗೆ ಕೇವಲ 1.20 ಲಕ್ಷದಂತೆ 24.40 ಕೋಟಿ ನಿಗದಿ ಪಡಿಸಿದೆ. ಉಳಿದ 2000 ಎಕರೆಗೆ ಕೇವಲ 1.05 ಲಕ್ಷದಂತೆ ಸುಮಾರು 25 ಕೋಟಿ ನಿಗದಿ ಪಡಿಸಿದೆ. ಒಟ್ಟು 50 ಕೋಟಿಗೂ ಕಡಿಮೆ ದರಕ್ಕೆ ಮಾರಾಟ ಮಾಡಲು ನಿರ್ಧರಿಸಿರುವ ಕಾಂಗ್ರೆಸ್ ಸರ್ಕಾರದ ಗುಟ್ಟೇನು ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ಸ್ಥಳಗಳಲ್ಲಿ ಉಳಿಮೆ ಮಾಡಿ ಕೊಂಡು ಜೀವನ ಮಾಡುತ್ತಿರುವ ರೈತರು ಸರ್ಕಾರಕ್ಕೆ ಒಂದು ಎಕರೆಗೆ 5 ಲಕ್ಷ ರೂಪಾಯಿಗಳು ಕೊಡುತ್ತೇವೆ. ನಮಗೆ ಕೊಟ್ಟು ಜೀವನ ಮಾಡಲು ಅವಕಾಶ ಕೊಡಿ ಎಂದರು ಸಹ ರೈತರಿಗೆ ನೀಡದೇ, ಜಿಂದಾಲ್ ಕಂಪನಿಗೆ ಅತೀ ಕಡಿಮೆ ಬೆಲೆಗೆ ಸರ್ಕಾರಿ ಜಮೀನು ಮಾರಾಟ ಮಾಡಿ ಇದರಲ್ಲಿ ಕನಿಷ್ಠ 11 ಸಾವಿರ ಕೋಟಿ ಸ್ಕ್ಯಾಮ್ ಮಾಡಲು ಹೊರಟಿದೆ. ಈ ಭಾಗದ ಎನ್.ಎಂ.ಡಿ.ಸಿ ಮತ್ತು ಲಕ್ಷ್ಮಿ ಮಿತ್ತಲ್ ಕಂಪನಿಯವರು 1 ಎಕರೆಗೆ 24 ಲಕ್ಷ ರೈತರಿಗೆ ಬೆಂಬಲ ಬೆಲೆ ಕೊಟ್ಟಿರುತ್ತಾರೆ. ಆದರೆ ಸರ್ಕಾರ 1 ಎಕರೆಗೆ ಕೇವಲ 1.25 ಲಕ್ಷಕ್ಕೆ ನಿಗದಿ ಮಾಡಿ ಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಈಗಾಗಲೇ ಈ ಕಂಪನಿಗೆ ಸರ್ಕಾರದ ವತಿಯಿಂದ 14 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನೂ ಕೊಡಲಾಗಿದೆ, 15 ಸಾವಿರ ಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಅದರಲ್ಲಿ ಸ್ಥಳೀಯರಿಗೆ ಬೆರಳಣಿಕೆಯಲ್ಲಿ ಮಾತ್ರ ಇದ್ದು. ಅವರು ಡಿ ಗ್ರೇಡ್ ಉದ್ಯೋಗಿ ಗಳಾಗಿದ್ದಾರೆ ಎಂದು ಮಾಹಿತಿ ಇದೆ. ರೈತರ ಭೂಮಿಯನ್ನೂ ರೈತರಿಗೆ ಕೊಡಬೇಕು ಇಲ್ಲವಾದಲ್ಲಿ ಜಿಂದಾಲ್ ಕಾರ್ಖಾನೆಯನ್ನು ರೈತರೊಂದಿಗೆ, ವಿವಿಧ ಸಂಘಟನೆ ಗಳೊಂದಿಗೆ ಮುತ್ತಿಗೆ ಹಾಕಿ ಇಲ್ಲಿಂದಲೇ ವಿಧಾನ ಸೌಧದವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಪಕ್ಷದ ರಾಜ್ಯಾಧ್ಯಕ್ಷ ಆರ್.ಪಿ.ಐ ಸತೀಶ್ ಮಾತನಾಡಿ ರೈತರ ಭೂಮಿಗೆ ನಿಗದಿ ಮಾಡಿರುವ ಬೆಲೆ ಕೇಳಿದರೆ ನಾಚಿಕೆಗೇಡಿನ ಸರ್ಕಾರ ಎಂದು ಹೇಳಬಹುದು. ರೈತರು ಜೋಳ, ತೆಂಗು, ಮೆಕ್ಕೆಜೋಳ, ತೋಟ ಮಾಡಿದ್ದಾರೆ, ಇಂತಹ ಪಲವತ್ತಾದ ಭೂಮಿಯನ್ನೂ ರೈತರೇ 5 ಲಕ್ಷ ಎಕರೆಗೆ ಕೊಂಡು ಕೊಳ್ಳುತ್ತೇವೆ ಎಂದು ಮುಂದೆ ಬಂದರೆ ಸರ್ಕಾರ ರೈತರಿಗೆ ಕೊಡದೆ ಜಿಂದಾಲ್ ನೊಂದಿಗೆ ಏನೇನೋ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಗೊತ್ತಿಲ್ಲ, ರೈತರಿಗೆ ಕೇವಲ 1.25 ಸಾವಿಕ್ಕೆ ಕೊಡುತ್ತಿದ್ದೀರಾ ಎಂದರೆ ನಿಮ್ಮಂತ ಮೂರ್ಖ ಮುಖ್ಯಮಂತ್ರಿ ಮತ್ತು ಸರ್ಕಾರವನ್ನ ಖಂಡಿಸುತ್ತೇವೆ. ಉದ್ಯೋಗ ಸೃಷ್ಟಿ ಮಾಡಬೇಕೆಂದು ಬಹು ರಾಷ್ಟ್ರೀಯ ಕಂಪನಿಗಳಿಗೆ ಭೂಮಿಯನ್ನೂ ಕೊಡುತ್ತಿದ್ದೀರಿ ಆದರೆ ಈ ಕಂಪನಿಗಳು ಸ್ಥಳೀಯ ಕರ್ನಾಟಕದ ಭೂಮಿ, ನೀರು, ವಿದ್ಯುತ್ ತೆಗೆದು ಕೊಂಡು ಇವತ್ತು ಕರ್ನಾಟಕದ ಜನರಿಗೆ ಕನ್ನಡಿಗರಿಗೇ ಉದ್ಯೋಗ ಕೊಡುತ್ತಿಲ್ಲ, ಇಂದು ಕರ್ನಾಟಕ ದತ್ತ ಎಲ್ಲೂ ಹುಡುಕಿದರೂ 1. 25 ಲಕ್ಷಕ್ಕೆ 1 ಎಕರೆ ಅಲ್ಲ ಒಂದು ಗುಂಟೆ ಕೂಡ ಸಿಗುತ್ತಿಲ್ಲ. ಈ ಹಿಂದೆ 30 ರಿಂದ 60 ಲಕ್ಷಕ್ಕೆ ಹಲವು ಕಂಪನಿಗಳಿಗೆ ಮಾರಾಟ ಮಾಡಿದ್ದೀರಿ ಆದರೆ ಇಂದು 1.25 ಲಕ್ಷಕ್ಕೆ ಮಾರಾಟ ಮಾತ್ತಿದ್ದೀರಿ ಎಂದರೆ ಇದರಲ್ಲಿ ದೊಡ್ಡ ಅವ್ಯವಹಾರ ಭ್ರಷ್ಟಾಚಾರ ಸಿದ್ದರಾಮಯ್ಯ ಸರ್ಕಾರದ ಮೇಲೆ ಇದೆ ಅದರಲ್ಲೂ ಸರ್ಕಾರದ ಶಾಸಕರ ಸಚಿವರ ಮತ್ತು ಮುಖ್ಯ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ, ಕಣ್ಣಿಗೆ ಕಾಣುವಂತೆ ಇಂದು ಭ್ರಷ್ಟಾಚಾರ ಮಾಡುತ್ತಿದ್ದೀರಲ್ಲ ಇದನ್ನ ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ರೈತರನ್ನು, ದಲಿತ ಸಂಘಟನೆಗಳನ್ನು, ಕೂಲಿ ಕಾರ್ಮಿಕರ ಸಂಘಗಳನ್ನು ಮತ್ತು ಇತರೆ ಸಂಘದವರನ್ನು ಸಂಪರ್ಕಿಸಿ ಸಂಘಟಿಸಿ ಜಿಂದಾಲ್ ಚಲೋ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು ಎಂದು ಹೇಳಿದರು. ಸರ್ಕಾರವು ರೈತರಿಗೆ ಅತಿ ಕಡಿಮೆ ಬೆಲೆ ಕೊಡುತ್ತಿರುವುದನ್ನು ಖಂಡಿಸಿ ಬಳ್ಳಾರಿ ಜಿಲ್ಲೆಯ ಆರ್.ಪಿ.ಐ ಪಕ್ಷದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಎರಿಸ್ವಾಮಿ, ವಿಜಯನಗರ ಜಿಲ್ಲೆಯ ಆರ್.ಪಿ.ಐ ಪಕ್ಷದ ಅಧ್ಯಕ್ಷರಾದ ಮಾಬು ಸುಬಾನಿ, ಇತರರು ಮಾತನಾಡಿದರು.ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ವಿರೂಪಾಕ್ಷಪ್ಪ, ಜಿಲ್ಲಾ ಮುಖಂಡರಾದ ಹೇಮಂತ್ ರಾಜ್, ಎಸ್.ಟಿ ಘಟಕದ ಜಿಲ್ಲಾಧ್ಯಕ್ಷರು ವೀರೇಶ್, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ರಾಜು, ಆಟೋ ಚಾಲಕ ಸಂಘದ ನಾಗು, ನಗರಾಧ್ಯಕ್ಷರಾದ ಹೇಮಂತ್ ರಾಜ್, ಧೂಪದಳ್ಳಿ ನಾಗಪ್ಪ, ಕೊಟ್ರೇಶ್, ಚಂದ್ರಶೇಖರ್ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ