ಸಾಧನೆಗೆ ಏಕಾಗ್ರತೆ ಮತ್ತು ಪರಿಶ್ರಮ ಬಹಳ ಮುಖ್ಯ – ಡಾ. ಬಿ.ಎ.ಗೂಳಿ.
ಹುನಗುಂದ ಡಿಸೆಂಬರ್.25

ಸಾಧನೆ ಏಕಾಗ್ರತೆ ಹಾಗೂ ಪರಿಶ್ರಮ ಬಹಳ ಪ್ರಮುಖವಾದುದು.ವಿದ್ಯಾರ್ಥಿಗಳು ಪದವಿ ಶಿಕ್ಷಣ ಮುಗಿಸುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮುದ್ದೇಬಿಹಾಳದ ಎಂ.ಜಿ.ವಿ.ಸಿ.ಮಹಾ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಎ.ಗೂಳಿ ಹೇಳಿದರು. ಪಟ್ಟಣದ ವಿ.ಎಂ.ಕೆ.ಎಸ್.ಆರ್.ವಸ್ತೃದ ಕಲಾ,ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ 2023-24ನೇ ಸಾಲಿನ ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣದ ಜೊತೆಗೆ ಒಳ್ಳೆಯ ನಡತೆ ಬೆಳೆಸಿ ಕೊಳ್ಳಲು ಪಠ್ಯ ಪೂರಕ ಚಟುವಟಿಕೆಗಳಿಗೆ ಭಾಗವಹಿಸುವುದು ಅಷ್ಟೇ ಮುಖ್ಯವಾಗಿರುತ್ತದೆ.ವಿದ್ಯಾರ್ಥಿಗಳು ಓದಿನಿಂದ ಅಪಾರ ಜ್ಞಾನವನ್ನು ಗಳಿಸಿದರೇ ಪಠೇತರ ಚಟುವಟಿಕೆಗಳಿಂದ ಅನೇಕ ಕೌಶಲ್ಯಗಳ ಕಲಿಕೆಯಾಗುತ್ತದೆ ಎಂದು ಎಚ್ಚರಿಸಿದರು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪಾ ಮಾತನಾಡಿ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸ ಬೇಕೆಂದು ಕರೆ ನೀಡಿದರು. ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಸರ್ಕಾರಿ ನೌಕರಿಗಳ ಮೇಲೆ ಅವಲಂಭಿತರಾಗದೇ ಸ್ವಯಂ ಉದ್ಯೋಗ ಕೈಗೊಳ್ಳುವುದರ ಮೂಲಕ ಸ್ವಾವಲಂಬಿ ಜೀವನ ರೂಪಿಸಿ ಕೊಳ್ಳಬೇಕೆಂದು ತಿಳಿಸಿದರು.ಇದೇ ಸಂದರ್ಭದಲ್ಲಿ ‘ಪರಿಶ್ರಮ’ ಎಂಬ ಶೀರ್ಷಿಕೆಯ ವಾರ್ಷಿಕ ಸಂಚಿಕೆಯು ಬಿಡುಗಡೆ ಗೊಂಡಿತು. ಈ ಸಂದರ್ಭದಲ್ಲಿ ವಿ.ಮ.ವಿ.ವ ಸಂಘದ ನಿರ್ದೇಶಕ ವೀರಣ್ಣ ಬಳೂಟಗಿ,ವಿಜಯ ಮಹಾಂತೇಶ ಉಚಿತ ಪ್ರಸಾದ ನಿಲಯದ ಕಾರ್ಯಾಧ್ಯಕ್ಷ ಸಂಗಣ್ಣ ಚಿನಿವಾಲರ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸಹನಾ ಕರಡಿ ಉಪಸ್ಥಿತರಿದ್ದರು.ಪ್ರಾಚಾರ್ಯ ಶಶಿಕಲಾ ಮಠ ಪ್ರಾಸ್ತಾವಿಕ ಮಾತನಾಡಿದರು.ವಿದ್ಯಾರ್ಥಿನಿ ದ್ರಾಕ್ಷಾಯಣಿ ಗೌಡರ ಪ್ರಾರ್ಥಿಸಿದರು,ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಪರಶುರಾಮ ಸಿ. ಸ್ವಾಗತಿಸಿದರು,ಕ್ರೀಡಾ ನಿರ್ದೇಶಕ ಲೆಪ್ಟಿನೆಂಟ್ ಎಸ್.ಬಿ.ಚಳಗೇರಿ ಪರಿಚಯಿಸಿದರು,ಡಾ.ಎಸ್.ಆರ್.ನಾಗಣ್ಣವರ ನಿರೂಪಿಸಿದರು, ಐಕ್ಯೂಎಸಿ ಘಟಕದ ಸಂಚಾಲಕ ಡಾ.ಎಸ್.ಆರ್.ಗೋಲಗೊಂಡ ವಂದಿಸಿದರು.ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ