ಉಮೇಶ್ ನಾಯಕ್ ಅವರ ಸಂಗೀತ ಸಾಹಿತ್ಯ ಕಲೆಯನ್ನು ಮೆಚ್ಚಿ – ತುಂಬು ಹೃದಯದಿಂದ ಅಭಿನಂದಿಸಿ ಗೌರಿವಿಸಿ ಸನ್ಮಾನಿಸಿದರು.
ಚಿತ್ರದುರ್ಗ ಜೂ.01

ತನು ಶ್ರೀ ಪ್ರಕಾಶನ ಸಂಸ್ಥೆ ರಾಜ್ಯ ಸಂಚಾಲಕರ ಹಾಗೂ ಹೊಸದುರ್ಗ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿಯಾದ ಗಿರೀಶ್ ತೊಣಚೇನಹಳ್ಳಿ ಅವರು ಜಾನಪದ ಗಾಯಕರಾದ ಉಮೇಶ್ ನಾಯಕ್ ಅವರ ಸಂಗೀತ ಸಾಹಿತ್ಯ ಮತ್ತು ಕಲೆಯನ್ನು ಮೆಚ್ಚಿ ತುಂಬು ಹೃದಯದಿಂದ ಅಭಿನಂದಿಸಿ ಗೌರವ ಸನ್ಮಾನವನ್ನು ಮಾಡಿರುತ್ತಾರೆ ಅವರು ಅಂಬೇಡ್ಕರ್ ಕ್ರಾಂತಿಕಾರಿ ಗೀತೆಯ ಮೂಲಕ ಮತ್ತಷ್ಟು ಮನಗಳನ್ನು ತಲುಪಲಿ ಎಂದು ಹಾರೈಸಿದ್ದಾರೆ.

