ನಾಯಕನಹಟ್ಟಿ ಮತ್ತು ತಳಕು ಹೋಬಳಿಯ ಗ್ರಾಮಗಳಿಗೆ ಶಿಕ್ಷಣಕ್ಕೆ ಅತಿ ಹೆಚ್ಚು ಒಲವು ಕೊಡುವ ಶಾಸಕರು.
ಮೊಳಕಾಲ್ಮುರು ಡಿಸೆಂಬರ್.26

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಪಟ್ಟಣದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ವಿದ್ಯಾ ವಿಕಾಸ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ,ಈ ವಿದ್ಯಾರ್ಥಿ ಜೀವನವು ಶಿಸ್ತು ಮತ್ತು ಅಧ್ಯಯನವನ್ನು ಕಲಿಯಲು ನಮಗೆ ಸಹಾಯ ಮಾಡುತ್ತದೆ. ಅದರ ಹೊರತಾಗಿಯೂ, ಜೀವನವು ಸಾಕಷ್ಟು ಆನಂದ ದಾಯಕವಾಗಿದೆ ಎಂದು ತಿಳಿಸಿದರು.

ಮತ್ತು ನಾಯಕನಹಟ್ಟಿ ತಳಕು ಹೋಬಳಿಯ ನನ್ನ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಗೆ ಬರುವಂತ ಈ ಗ್ರಾಮಗಳು ಶಿಕ್ಷಣ ವೆಂಬುದು ಮಹತ್ವದ ವಿಷಯವಾಗಿದೆ ಯಾವುದೇ ಗ್ರಾಮದಲ್ಲಾಗಲಿ ಒಂದು ಮನೆಯಲ್ಲಿ ಒಬ್ಬ ವಿದ್ಯಾರ್ಥಿ ವಿದ್ಯಾವಂತನಾದರೆ ಆ ಕುಟುಂಬವೇ ವಿದ್ಯಾವಂತ ರಾಗುವಂತೆ ಜ್ಞಾನದ ಅರಿವು ಮೂಡಿಸಿ ದಂತಾಗುತ್ತಾನೆ ಆ ಮನೆಯ ತಂದೆ ತಾಯಂದಿರಿಗೂ ಕುಟುಂಬಕ್ಕೂ ಆ ಮನೆಯ ಒಬ್ಬ ವಿದ್ಯಾರ್ಥಿ ಜ್ಞಾನದ ಹಾದಿಯಲ್ಲಿ ನಡೆಯುವಂತಾಗುತ್ತದೆ ಅದೇ ರೀತಿಯಾಗಿ ಶಾಸಕರು ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡಿ ಶಾಲೆ ಬಿಲ್ಡಿಂಗ್ ಗಳು ಆಗಿರಬಹುದು ಶೌಚಾಲಯ ಆಗಿರಬಹುದು ಕಾಂಪೌಂಡ್ ಆಗಿರಬಹುದು ಶಿಕ್ಷಣಕ್ಕೆ ಒಂದು ಶಿಸ್ತಿನ ಸಿಪಾಯಿಯಂತೆ ಎಲ್ಲಾ ಗ್ರಾಮಗಳಲ್ಲಿ ಶಾಲೆ ಬಿಲ್ಡಿಂಗ್ ಗಳು ಉಪಯೋಗಿಸ ಬೇಕೆಂದು ಎನ್ ವೈ ಗೋಪಾಲಕೃಷ್ಣ ಶಾಸಕರ ಮುಂದಾಳತ್ವ ಎಂದು ತಿಳಿಯಬಹುದು.

ಏಕೆಂದರೆ ಶಾಸಕರು ಒಬ್ಬ ಗುರುವಿನ ಮಗ ಗುರುವಾಗಿ ಬೆಳೆದಂತ ಶಾಸಕರು ಅದೇ ರೀತಿಯಾಗಿ ಎಲ್ಲಾ ಗ್ರಾಮಗಳಲ್ಲಿ ಶಾಲೆಗೆ ಹೋಗುವಂತ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಚೆನ್ನಾಗಿ ಓದಿ ವಿದ್ಯಾವಂತರಾಗಿ ಅವರ ತಂದೆ ತಾಯಿಗೆ ಹೆಸರು ಬರುವ ಹಾಗೆ ಮತ್ತು ಸರ್ಕಾರದ ಕೆಲಸಗಳು ಹಾಗೂ ಸೌಕರ್ಯಗಳು ಪಡೆಯಬಹುದು ಮತ್ತು ನಾಯಕನಹಟ್ಟಿ ಪಟ್ಟಣಕ್ಕೆ ಸಾರ್ವಜನಿಕರ ಬಸ್ಸು ನಿಲ್ದಾಣಗಳನ್ನು ಮತ್ತು ವ್ಯಾಪಾರ ವಹಿವಾಟಿನ ಮಳಿಗೆಗಳನ್ನು ಮತ್ತು ಒಳ ಮಠದ ಹತ್ತಿರ ಸೇತುವೆ ನಿರ್ಮಾಣ ಸಹ ರೂಪಿಸಿದ್ದಾರೆ ಮಾನ್ಯ ಶಾಸಕರು ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಜನ ಮತದಾರರು ನಮ್ಮ ಕ್ಷೇತ್ರಕ್ಕೆ ಒಳ್ಳೆ ಶಾಸಕರು ತಂದಿದ್ದಾರೆ ಏನೇ ಮಾಡಿದರೆ ಕೆಲಸ ಮಾಡಿ ತೋರಿಸುತ್ತಾರೆ ವೇಸ್ಟ್ ಆಗಿ ಎಂದು ಅವರು ಮಾತನಾಡುವುದಿಲ್ಲ ಅವರ ಕೆಲಸಗಳೇ ಮಾತನಾಡುತ್ತವೆ ಎಂದು ಹೇಳುವ ಮಾತುಗಳಾಗಿವೆ ಈ ಸಂದರ್ಭದಲ್ಲಿಸಂಸ್ಥೆ ಮುಖ್ಯಸ್ಥರು ಸ್ಥಳೀಯ ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು