ಹೈಕೋರ್ಟ್ ತಡೆಯಾಜ್ಞೆ, ಪ. ಪಂ ಯಿಂದ ನಿಜವಾದಂತಹ ನಿರ್ಗತಿಕರಿಗೆ ಖಾಲಿ ನಿವೇಶನ & ವಸತಿ – ಸಿಗಲಿ ಗುನ್ನಳ್ಳಿ ರಾಘವೇಂದ್ರ.

ಕೂಡ್ಲಿಗಿ ಮೇ.10

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಸಿಐಟಿಯು ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಇವರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಕಾರಣ, ಈ ಹಿಂದೆ ಪಟ್ಟಣ ಪಂಚಾಯತಿ ಯಿಂದ ಸರ್ಕಾರ ದಿಂದ ಪಟ್ಟಣದಲ್ಲಿ ಕಡು ಬಡವರಿಗೆ, ಅಂಗವಿಕಲ ಚೇತನರಿಗೆ, ವಿಧವೆಯರಿಗೆ, ನಿರಾಶ್ರಿತರಿಗೆ, ದೇವದಾಸಿ ಮಹಿಳೆಯರಿಗೆ, ಕಾರ್ಮಿಕರಿಗೆ, ಖಾಲಿ ನಿವೇಶನ ಹಾಗೂ ಮನೆಗಳನ್ನು ಸರ್ಕಾರದಿಂದ ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ 2021-22ನೇ. ಸಾಲಿನಲ್ಲಿ ಜಾಗ ಮತ್ತು ಮನೆಗಳಿಲ್ಲದೆ ಭವನ, ಗುಡಿಸಲುಗಳಲ್ಲಿ ಮಲಗುವ ಪರಿಸ್ಥಿತಿ ಇದ್ದು, ಸುಮಾರು ಜನ ಮಹಿಳೆಯರು ಸಿಐಟಿಯು ಹಾಗೂ ದಲಿತ ಮುಖಂಡರ ಸಮ್ಮುಖದಲ್ಲಿ ಮನವಿ ಪತ್ರ ಕೊಡುವುದರ ಮೂಲಕ ಅಂಗವಿಕಲರು ಹಾಗೂ ವಿಧವೆಯರು ತಮ್ಮ ಅಳಲನ್ನು ಶಾಸಕರ ಮುಂದೆ ಹೇಳಿಕೊಂಡಿದ್ದರು, ಆ ಸಂದರ್ಭದಲ್ಲಿ ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ಮನವಿಯನ್ನು ಸ್ವೀಕರಿಸಿ, ಮುಖಂಡರರುಗಳಾದ ಗುನ್ನಳ್ಳಿ ರಾಘವೇಂದ್ರ, ಮಾಜಿ ಸೈನಿಕರಾದ ರಮೇಶ್ ಮತ್ತು ಸಾಲುಮನೆ ರಾಘವೇಂದ್ರ, ಹಾಗೂ 50 ಕ್ಕೂ ಹೆಚ್ಚು ಮಹಿಳೆಯರ ಸಮ್ಮುಖದಲ್ಲಿ ನಿಜವಾದಂತ ಫಲಾನುಭವಿಗಳಿಗೆ ಯಾರಾರಿದ್ದರೋ ಅಂತ: ಫಲಾನುಭವಿಗಳ ಅರ್ಜಿಗಳನ್ನು ಪಟ್ಟಣ ಪಂಚಾಯತಿಗೆ ಕೊಡುವುದಾಗಿ ತಿಳಿಸಿ ಖಾಲಿ ಜಾಗ ಮತ್ತು ಮನೆ ಕೊಡುವುದಾಗಿ ಆಶ್ವಾಸನೆ ನೀಡಿದರು.

ಆ ಸಂದರ್ಭದಲ್ಲಿ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ರವರು ಗೋಪಾಲಕೃಷ್ಣ ಶಾಸಕರಿಗೆ 20 ವಾರ್ಡಿನ ಸದಸ್ಯರಿರುವಾಗ ನೇರವಾಗಿ ನಿಮ್ಮ ಮೂಲಕ ಖಾಲಿ ಜಾಗ ಮನೆಗಳು ಸಿಗುವುದಿಲ್ಲ ಸರ್ ಎಂದು ಪ್ರಶ್ನಿಸಿದರು, ಆ ಸಂದರ್ಭದಲ್ಲಿ ಗೋಪಾಲಕೃಷ್ಣ ಶಾಸಕರು ಮುಖಂಡರುಗಳಿಗೆ ನಿಜವಾದಂತಹ ಕಡು ಬಡವರಿಗೆ ದೊರಕ ಬೇಕಾಗಿರುವಂತಹ ಸರ್ಕಾರದ ಸೌಲಭ್ಯಗಳು ನಾನು ದೊರಕಿಸಿ ಕೊಡುತ್ತೇನೆ ಎಂದು ಶಾಸಕರು ಹಾಗೂ ಮುಖಂಡರ ಮದ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಈ ವಿಷಯ ಕುರಿತು ಜನರಿಗಾಗಿ ಖಾಲಿ ಜಾಗ ಮತ್ತು ವಸತಿಯನ್ನು ಮಾನ್ಯ ಗೋಪಾಲಕೃಷ್ಣ ಶಾಸಕರು ಪಟ್ಟಣದಲ್ಲಿ ಸಾಕಷ್ಟು ಬಡ ಜನರಿಗೆ ಖಾಲಿ ಜಾಗ ಮತ್ತು ಮನೆಗಳ ಬೇಡಿಕೆಗಳ ಅವಶ್ಯಕತೆಗಳನ್ನು ಅರ್ಥ ಮಾಡಿಕೊಂಡು ನನ್ನ ಅವಧಿಯ ಒಳಗೆ ಪಟ್ಟಣದ ಪಕ್ಕದಲ್ಲಿ 10 ಎಕ್ಕರೆ ಜಮೀನನ್ನು ಸುಮಾರು 392 ಖಾಲಿ ನಿವೇಶನ ಮತ್ತು ವಸತಿಗಾಗಿ ಕಾಯ್ದಿರಿಸಿ ಬಡ ಜನರಿಗಾಗಿ ಖಾಲಿ ನಿವೇಶನ ಮತ್ತು ಮನೆಗಳಿಗೆ ಪ ಪಂ ಯಿಂದ ಅರ್ಜಿ ಕರೆದ ಸಂದರ್ಭದಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಪಟ್ಟಿಯನ್ನು ಗೋಪಾಲಕೃಷ್ಣ ಶಾಸಕರು ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ಪಟ್ಟಿ ಮಾಡಿದ್ದರು, ಆದರೆ ಆ ಪಟ್ಟಿಯನ್ನು ತಯಾರಿಸಿದ ಸಂದರ್ಭದಲ್ಲಿ ಆ ಪಟ್ಟಿಯಲ್ಲಿ ನಿಜವಾದಂತ ಕಡು ಬಡವರ ಪಾಲಿಗೆ ಈ ನೆಲದ ಮಣ್ಣಿನ ಪ್ರಕಾರ ನ್ಯಾಯಯುತವಾಗಿ ಖಾಲಿ ನಿವೇಶನ ಮತ್ತು ಮನೆಗಳು ನಿಜವಾದಂತ ಬಡವರಿಗೆ ಸಿಗುತ್ತವೆ ಎಂಬ ಬರವಸೆ ನಮ್ಮ ಸಂಘಟನೆಯ ಮುಖಂಡರುಗಳ ಆಶಯವಾಗಿತ್ತು. ಗೋಪಾಲ್ ಕೃಷ್ಣ ಶಾಸಕರ ತಯಾರಿಸಿದ ಪಟ್ಟಿಯನ್ನು ಕೈ ಬಿಟ್ಟು ಈಗ ತಿರುಚಿ 2024 ರ ಎರಡನೇ ತಿಂಗಳಿನ ಸಮಯದಲ್ಲಿ ಕಡು ಬಡವರಿಗೆ ಹಾಗೂ ನಿರ್ಗತಿಕರಿಗೆ ಆಯ್ಕೆ ಮಾಡಿದಂತ ಪಟ್ಟಿಯು ತಿರುಚಿ.

ಸರ್ಕಾರ ದಿಂದ ನಿರ್ಮಿಸಲಾಗುವ ನಿವೇಶನ ಮತ್ತು ವಸತಿಯ ಪಟ್ಟಿಯನ್ನು ತಿರುಚಿ ಸ್ಥಿಥಿವಂತರು ಮಾನವನ ಜೀವನಕ್ಕೆ ಬೇಕಾಗಿರುವಂತಹ ಜಾಗ, ಮನೆ, ಜಮೀನು, ಉತ್ತಮ ಕೆಲಸಗಳಲ್ಲಿ ಇದ್ದು ಸಂಬಳ ತೆಗೆದುಕೊಳ್ಳುವಂತವರು ಮತ್ತು ಅಂತಹ ಕುಟುಂಬದವರು ಈಗ ತಯಾರಿಸಿರುವ ಪಟ್ಟಿಯಲ್ಲಿ ಹೆಸರುಗಳು ಹೆಚ್ಚಾಗಿ ಕಾಣುವಂತಹ ಪಟ್ಟಿಯನ್ನು ಅರಿತು ತಕ್ಷಣವೇ ಈ ಅನ್ಯಾಯವನ್ನು ಸಿಐಟಿಯು ಮುಖಂಡರಾದ ಗುನ್ನಳ್ಳಿ ರಾಘವೇಂದ್ರ, ವಾಲ್ಮೀಕಿ ಮುಖಂಡರಾದ ಪಂಪಣ್ಣ. ತಾಲೂಕು ಅಧ್ಯಕ್ಷ ಕರಿಯಣ್ಣ, ಡಿ ಎಚ್ ಎಸ್, ಅಧ್ಯಕ್ಷತುಂಬುರುಗುದ್ದಿ ಚಂದ್ರು, ಜನವಾದಿ ಮಹಿಳಾ ಸಂಘದ ತಾಲೂಕ ಅಧ್ಯಕ್ಷ ಭಾಗ್ಯಮ್ಮ, ಸದಸ್ಯ ನಬಿ, ಸಹ ಕಾರ್ಯದರ್ಶಿಯಾದ ಮರಳು ಸಿದ್ದಪ್ಪ ಆಚಾರಿ ಇನ್ನು ಅನೇಕ ಮುಖಂಡರುಗಳು ಪತ್ರಿಕೆ ಗೋಷ್ಠಿಯಲ್ಲಿದ್ದು,ಈ ಪಟ್ಟಿಯ ವಿಚಾರವಾಗಿ ನಿಜವಾದಂತಹ ನಿರ್ಗತಿಕರಿಗೆ ಬಡವರಿಗೆ ಖಾಲಿ ನಿವೇಶನ ಮತ್ತು ಮನೆಗಳು ಸಿಗಲಿ ಎಂಬ ಉದ್ದೇಶವನ್ನು ಮನಗಂಡು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ಸಮ್ಮುಖದಲ್ಲಿ ಮುಖಂಡರುಗಳು ಚರ್ಚಿಸಿದರು ಪ್ರಯೋಜನಕ್ಕೆ ಬಾರದಿದ್ದಾಗ ನಂತರ ಪಟ್ಟಿಯನ್ನು ತೆಗೆದುಕೊಂಡು ಹೈಕೋರ್ಟ್ ಮೂಲಕ ತಾತ್ಕಾಲಿಕ ತಡೆಯಾಜ್ಞೆ ಆದೇಶವನ್ನು ಹೈಕೋರ್ಟ್ ಹೊರಡಿಸಿದೆ.

ಆದ್ದರಿಂದ ಈಗಲಾದರೂ ಮಾನ್ಯ ಶಾಸಕರು ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ನಿಜವಾದಂತ ನಿರ್ಗತಿಕರು, ಅಂಗವಿಕಲರು, ವಿಧವೆಯರು, ನಿರಾಶ್ರಿತರಿಗೆ, ಕಡುಬಡವರಿಗೆ, ಖಾಲಿ ನಿವೇಶನ ಮತ್ತು ಮನೆಗಳು ಸಿಗಲಿ ಎಂಬ ಉದ್ದೇಶ ನಮ್ಮ ಅಭಿಪ್ರಾಯವಾಗಿದೆ ಎಂದು ಗುನ್ನಳ್ಳಿ ರಾಘವೇಂದ್ರ ರವರು ತಮ್ಮ ಅಭಿಪ್ರಾಯವನ್ನು ಸುದ್ದಿಗೋಷ್ಠಿ ಮೂಲಕ ತಿಳಿಸಿದರು, ಈ ಸಂದರ್ಭದಲ್ಲಿ ಪತ್ರಿಕ ಮಾಧ್ಯಮದವರ ಕೆಲವಾರು ಪ್ರಶ್ನೆಗಳಿಗೆ ಮುಖಂಡ ಗುನ್ನಳ್ಳಿ ರಾಘವೇಂದ್ರ ಉತ್ತರಿಸುತ್ತಾ ನಿಜವಾದಂತಹ ಬಡವರಿಗೆ ಖಾಲಿ ನಿವೇಶನ ಹಾಗೂ ವಸತಿ ಸೌಲಭ್ಯಗಳು ಸಿಗುವವರೆಗೂ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು,

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button