ಶುದ್ಧತೆ ಸ್ವಚ್ಛತೆಯೇ ಉತ್ತಮ ಆರೋಗ್ಯದ ಮೂಲಾಧಾರ – ಎಸ್.ಎಸ್ ಅಂಗಡಿ.
ಬೆನಕಟ್ಟಿ ಡಿ.10

ಬಾಗಲಕೋಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಉಪ ಕೇಂದ್ರ ಬೆನಕಟ್ಟಿ ವ್ಯಾಪ್ತಿಯ ಪ್ರಗತಿ ಇಂಗ್ಲೀಷ ಮಾದ್ಯಮ ಪೂರ್ವ ಪ್ರಾಥಮಿಕ ಶಾಲೆಯಲ್ಲಿ, “ಉತ್ತಮ ಆರೋಗ್ಯಕ್ಕಾಗಿ ಮುಂಜಾಗ್ರತೆ ಕ್ರಮಗಳ ಜಾಗೃತಿ” ಆಯೋಜಿಸಲಾಗಿತ್ತು ಶಾಲಾ ಮುಖ್ಯ ಗುರು ಮಾತೆ ಪ್ರೇಮಾ ನಾಯಕ ಜಂತು ನಾಶಕ ಮಾತ್ರೆ ಮಕ್ಕಳಿಗೆ ವಿತರಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಜಾಲನೆ ನೀಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಜಂತು ಹುಳು ಬಾಧೆಯಿಂದ ಮಕ್ಕಳಲ್ಲಿ ರಕ್ತ ಹೀನತೆ, ಬೆಳವಣಿಗೆ ಕುಂಠಿತವಾಗುವುದು, ಮಕ್ಕಳ ಆರೋಗ್ಯದ ಬಗ್ಗೆ ವಯಕ್ತಿಕ ಸ್ವಚ್ಛತೆಗೆ, ಪೋಷಕಾಂಶಯುಕ್ತ ಆಹಾರ ನೀಡುವುದು ಸಮತೋಲನ ಆಹಾರ ಸೇವಿಸಲು ಕೊಡಬೇಕು ಸ್ವಚ್ಛತೆ, ಶುದ್ಧತೆ ಉತ್ತಮ ಆರೋಗ್ಯದ ಮೂಲಾಧಾರವಾಗಿದೆ ಎಂದರು ಮುಖ್ಯ ಗುರು ಮಾತೆ ಮಾತನಾಡಿ ಪ್ರತಿ ಮಕ್ಕಳ ಆರೋಗ್ಯದ ಕಾಳಜಿ ವಹಿಸಿ ಆರೋಗ್ಯ ಇಲಾಖೆಯ ಸಲಹೆ ಪಾಲನೆ ಮಾಡಲಾಗುವುದು ಎಂದರು. “ಉತ್ತಮ ಆರೋಗ್ಯಕ್ಕಾಗಿ ಮುಂಜಾಗ್ರತೆ ಕ್ರಮಗಳ ಜಾಗೃತಿ” ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಶಾಲಾ ಗುರು ಮಾತೆಯರಾದ ಗೀತಾ ಮಲ್ಲಾಡದ, ದೀಪಾ ದೊಡ್ಡಮನಿ, ಶಾಲಾ ಸಹಾಯಕಿ ಮಹಾನಂದ ಹಿರೇಹಾಳ, ಶಾಲಾ ಮುದ್ದು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.