ತಹಸೀಲ್ದಾರ್ ಕಾರ್ಯಾಲಯದ ಮುಂದೆ ಶವ ಇಟ್ಟು ಸ್ಮಶಾನಕ್ಕಾಗಿ ಜಾಂಭವ ಯುವ ಸೇನಾ ಸಂಘಟನೆಯಿಂದ ಪ್ರತಿಭಟನೆ.

ಬೆಂಗಳೂರು ಫೆಬ್ರುವರಿ.1

ಸ್ಮಶಾನಕ್ಕೆ ಜಾಗ ಗುರುತಿಸಿ ಕೊಡಬೇಕು ಎಂದು ಆಗ್ರಹಿಸಿ ಜಾಂಭವ ಯುವ ಸೇನಾ ಸಂಘಟನೆಯವರು ಹಾಗೂ ಬೆಂಗಳೂರು ನಗರದ ಮಂಡೂರು ಪಂಚಾಯತಿ ರಘುನಹಳ್ಳಿ ಗ್ರಾಮದ ನಿವಾಸಿಗಳು ಬುಧವಾರ ಕೆ ಆರ್ ಪುರಂ ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿ ಆವರಣಕ್ಕೆ ಮೃತ ಶವ ತಂದು ಪ್ರತಿಭಟನೆ ನಡೆಸಿದರು.ರಘುನಹಳ್ಳಿ ಗ್ರಾಮದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಜಾಂಭವ ಯುವ ಸೇನಾ ಸಂಘಟನೆ ರಾಜ್ಯಾಧ್ಯಕ್ಷರಾದ ಡಾ, ರಮೇಶ ಚಕ್ರವರ್ತಿ ಸಂಗಡಿಗರು ರಘುನಳ್ಳಿ ನಿವಾಸಿಗಳು ಮತ್ತು ಸಂಬಂಧಿಕರು, ಶವವನ್ನು ತಾಲ್ಲೂಕು ಕಚೇರಿ ಮುಂಭಾಗಕ್ಕೆ ತಂದು, ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಭೂಮಿ ನೀಡುವಂತೆ ಆಗ್ರಹಿಸಿದರು.

ಬೆಂಗಳೂರು ನಗರದ ಮೀಸಲು ಕ್ಷೇತ್ರ ಆದಂತ ಮಹಾದೇವಪುರ ಮಂಡೂರು ಪಂಚಾಯತಿ ರಘುನ ಹಳ್ಳಿ ಗ್ರಾಮಕ್ಕೆ ಸೇರಿರುವಂತ ಸರಕಾರಿ ಜಮೀನು ಒಂದು ಎಕರೆ 18 ಗುಂಟೆ ಸರ್ವೇ ನಂಬರ್ 71 ಇದ್ದರೂ ಮಂಜೂರು ಮಾಡದೆ ಅಧಿಕಾರಿಗಳು ಮೀನಾಮೇಷ ಮಾಡುತ್ತಿದ್ದಾರೆ. ಜಾಂಭವ ಯುವ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ಡಾಕ್ಟರ್ ರಮೇಶ್ ಚಕ್ರವರ್ತಿ ಗ್ರಾಮಸ್ಥರು ಆರೋಪಿಸಿದ್ದಾರೆ.ತಹಶೀಲ್ದಾರ್ ರವಿ, ಹಾಗೂ ಪೊಲೀಸರು ಅವರು ಡಾಕ್ಟರ್ ರಮೇಶ ಚಕ್ರವರ್ತಿ ರಘುನಹಳ್ಳಿ ನಿವಾಸಿಗಳೊಂದಿಗೆ ಚರ್ಚಿಸಿ, ಶವ ಸಂಸ್ಕಾರಕ್ಕೆ ಅನುವು ಮಾಡಿಕೊಡುವ ಭರವಸೆ ನೀಡಿದರು. ಬಳಿಕ ಸಂಬಂಧಿಕರು ಮತ್ತು ನಿವಾಸಿಗಳು ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ದರು.ಅಂತ್ಯ ಸಂಸ್ಕಾರ ಮಾಡಿದರು.ಈ ಸಂಧರ್ಭದಲ್ಲ್ಲಿ JYS ತಾಲೂಕ ಅಧ್ಯಕ್ಷ ಕುಮಾರ್ ರಘುನಹಳ್ಳಿ ಗ್ರಾಮಸ್ಥರು ಶಿಡ್ಲಘಟ್ಟ ಜಾಂಭವ ಯುವ ಸೇನಾ ಪದಾಧಿಕಾರಿಗಳು ಇತರರು ಇದ್ದರು.

ಮಹಾಂತೇಶ. ಹಾದಿಮನಿ. ವಿಜಯಪುರ.

ಜಿಲ್ಲಾ ಅಧ್ಯಕ್ಷರು ಜಾಂಭವ ಯುವ ಸೇನಾ ಸಮಿತಿ,

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button