ಎತ್ತಿನ ಬಂಡಿ ಮುಖಾಂತರ ಶ್ರೀ ರಾಮನ ಮೆರವಣಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು.
ಹಿರೇಹೆಗ್ದಾಳ ಜನೇವರಿ.23

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಾ ಹಿರೇಹೆಗ್ಡಾಳ್ ಗ್ರಾಮದಲ್ಲಿ ನಡೆದಿರುವ ಅಯೋಧ್ಯ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಎತ್ತಿನ ಬಂಡಿಯಲ್ಲಿ ಎತ್ತುಗಳಿಗೆ ಅಲಂಕಾರ ಮಾಡಿ ತಳಿರು ತೋರಣಗಳಿಂದ ಶ್ರೀರಾಮನ ಫೋಟೋ ಪ್ರತಿಷ್ಠಾಪಿಸಿ ಬೆಳಗಿನ ಜಾವದಿಂದ ಪ್ರತಿ ದೇವಸ್ಥಾನಕ್ಕೆ ಅಭಿಷೇಕ ಪೂಜೆ ಸಲ್ಲಿಸಿ ಭಜನಾ ಮುಖಾಂತರ ಮೆರವಣಿಗೆಯು ಶ್ರೀ ಕೋಡಿಬಸವೇಶ್ವರ ದೇವಸ್ಥಾನದಿಂದ ನಡೆದು ಶ್ರೀ ಕೆಂಪೇಶ್ವರ ಹಾಗೂ ಕೆರೆಯ ಹತ್ತಿರದ ಕೊಡಿ ಬಸವೇಶ್ವರ ದೇವಸ್ಥಾನದವರೆಗೂ ಭಜನಾ ಮಂಡಳಿಯಿಂದ ಶ್ರೀ ರಾಮನ ಹಾಡುಗಳನ್ನು ಹಾಡುತ್ತಾ ಭಕ್ತಿ ಮೆರೆದರು ಹಾಗೂ ಕಲಾವಿದರು ಸ ಮ್ಯಾಳದ ವಾದ್ಯ ಗೋಷ್ಠಿಗಳೊಂದಿಗೆ ವಿಜೃಂಭಣೆ ಇಂದ ಕಾರ್ಯಕ್ರಮ ನಡೆಸುತ್ತಾ ಸಾಯಂಕಾಲ ದಿಪೋತ್ಸವ ಅನ್ನ ಸಂತರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಊರಿನ ಎಲ್ಲಾ ಮುಖಂಡರು ಭಾಗವಹಿಸಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಭಕ್ತಿ ನೆರೆದರು ಎಲ್ಲ ರೈತ ವರ್ಗದವರು ಯುವಕರು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ