ಪರಂವ: ಚಿತ್ರ ವೀಕ್ಷಿಸಿ ಚಿತ್ರವು ಯಶಸ್ಸು ಕಾಣಲೆಂದು ಹಾರೈಸಿದ — ಶಾಸಕರು.

ಕೂಡ್ಲಿಗಿ ಜುಲೈ.27

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಬುಧವಾರ ರಂದು ಮಧ್ಯಾಹ್ನ 2 ಗಂಟೆಗೆ ಮಾನ್ಯ ಶಾಸಕರಾದ ಡಾಕ್ಟರ್ ಎನ್. ಟಿ. ಶ್ರೀನಿವಾಸ್ ಅವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಗುಡೆಕೋಟೆ ಹೋಬಳಿಯ ಸಿಡೇಗಲ್ಲು ಗ್ರಾಮದ ಚೊಚ್ಚಲ ಸಿನಿಮಾ ರಂಗಕ್ಕೆ ಕಾಲಿಟ್ಟಿರುವಂತಹ ಪ್ರೇಮ್ ಸಿಡೇಗಲ್ಲು ರವರ ಪರಂವ:ಚಿತ್ರವನ್ನು ಶ್ರೀ ಬಸವೇಶ್ವರ ಚಿತ್ರಮಂದಿರದಲ್ಲಿ ವೀಕ್ಷಿಸಲು ಆಗಮಿಸಿದ್ದು ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರೊಂದಿಗೆ ಕುತೂಹಲದ ಸಿನಿಮಾವನ್ನು ವೀಕ್ಷಿಸಿದರು ಮಾನ್ಯ ಶಾಸಕರು ಹಾಗೂ ಬಿಜೆಪಿಯ ಯುವ ಮುಖಂಡ ಗುಳುಗಿ ವೀರೇಂದ್ರ ಹಾಗೂ ಅತ್ತಾರು ರಾಜಕೀಯ ಮುಖಂಡರುಗಳು ಜೊತೆಯಲ್ಲಿ ಕುಳಿತುಕೊಂಡು ಕೂಡ್ಲಿಗಿಯ ಯುವ ಪ್ರತಿಭೆ ಯಾದಂತಹ ಪ್ರೇಮ್ ಸಿಡೇಗಲ್ಲು ರವರು ನಟಿಸಿರುವಂತಹ ಪರಂವ:ಚಿತ್ರವನ್ನು ವೀಕ್ಷಿಸಿ ಚಿತ್ರ ತಂದೆ ಮಗನ ಪಾತ್ರವು ಹಾಗೂ ವಿದ್ಯಾರ್ಥಿ ಜೀವನದ ಬದುಕಿನಲ್ಲಿ ಪ್ರೀತಿ -ಪ್ರೇಮ ಸ್ನೇಹಿತರ ಜೊತೆ ನಡೆಯುವಂತಹ ಕತ್ತಲು ಬೆಳಕಿನ ಸಿನಿಮಾ ಪಯಣವು ಅದ್ಭುತವಾಗಿ ನಟನೆ ಮಾಡಿರುವಂತಹ ನಮ್ಮ ಕೂಡ್ಲಿಗಿ ತಾಲೂಕಿನ ಸ್ಥಳೀಯ ಯುವಕನ ಚಿತ್ರವನ್ನು ಎಲ್ಲರೂ ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿ ಎಂದು ಮನ:ತುಂಬಿ ಹಾರೈಸಿದರು.

ಹಾಗೆ ಗುಳಗಿ ವೀರೇಂದ್ರ ರವರು ಸಹ ಪ್ರೇಮ್ ರವರ ಚೊಚ್ಚಲ ಸಿನಿಮಾದಲ್ಲಿ ಮಾಡಿರುವಂತ ನಟನೆಯ ಬಗ್ಗೆ ಅದ್ಭುತವಾದಂತಹ ಮಾತುಗಳನ್ನಾಡಿದರು ಹಾಗೆ ರಾಜ್ಯದ್ಯಂತ ಎಲ್ಲಾ ಮಲ್ಟಿ ಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ತುಂಬಾ ಚೆನ್ನಾಗಿ ಚಿತ್ರ ಯಶಸ್ಸು ಕಾಣುತ್ತಾ ಇದೆ ಎಂದರು ಆದ್ದರಿಂದ ವಿದ್ಯಾರ್ಥಿಗಳು ತಮ್ಮ ತಮ್ಮ -ತಂದೆ ತಾಯಿಯ ಆಸೆಗಳನ್ನು ಈಡೇರಿಸದೆ ಕಾಲೇಜು ದಿನಗಳಲ್ಲಿ ಎಷ್ಟೋ ವಿದ್ಯಾರ್ಥಿಗಳು ಓದುವಂತಹ: ದಿನಗಳಲ್ಲಿ ದಾರಿ ತಪ್ಪುವಂತಹ ಸನ್ನಿವೇಶ ಈ ಚಿತ್ರದಲ್ಲಿ ಕಾಣಬಹುದಾಗಿದೆ ಹಾಗೆ ಈ ಸಿನಿಮಾದಿಂದ ಒಳ್ಳೆಯ ವಿಷಯಗಳನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳ ಬಂಗಾರದಂತಹ ಜೀವನವನ್ನು ಹಾಳು ಮಾಡಿಕೊಳ್ಳದೆ ತಂದೆ ತಾಯಿ ಅಣ್ಣ ತಮ್ಮ ತಂಗಿ ಎಲ್ಲಾರೂ ಸಂಬಂಧಗಳ ಆಸೆಗಳಂತೆ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮವಾಗಿ ಓದಿಕೊಂಡು ಒಳ್ಳೆಯ ದಕ್ಷ ಆಡಳಿತ ಅಧಿಕಾರಿಯಾಗಿ ಹಾಗೂ ನಾನ ರಂಗಗಳಲ್ಲಿ ನಿಮ್ಮ ಮೇಲೆ ಇಟ್ಟಿರುವಂತಹ ನಿಮ್ಮ ಮನೆಯವರ ದೊಡ್ಡ ನಂಬಿಕೆಯ ಆಸೆಗಳನ್ನು ಈಡೇರಿಸುವಂತಹ ಮಕ್ಕಳಾಗಬೇಕು ಎನ್ನುವ *ಒಂದು ವೀರಗಾಸೆ ಹುಡುಗನಾಗಿ* ಈ ಸಿನಿಮಾರಂಗದಲ್ಲಿ ಕಾಣಬಹುದಾಗಿದೆ

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲಮನಿ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button