ವಿಜೃಂಭಣೆಯಿಂದ ಜರುಗಿದ ಶ್ರೀ ಕಲ್ಲೇಶ್ವರ ರಥೋತ್ಸವ.
ಅಂಬಳಿ ಏಪ್ರಿಲ್.23
![](https://i0.wp.com/sknewskannada.in/wp-content/uploads/2024/04/IMG-20240423-WA0051.jpg?resize=692%2C779&ssl=1)
23 /04/2024 ರಂದು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಅಂಬಳಿ ಗ್ರಾಮದಲ್ಲಿ ಶ್ರೀ ಕಲ್ಲೇಶ್ವರ ರಥೋತ್ಸವವು ಬಹಳ ಅದ್ದೂರಿಯಾಗಿ ಇಂದು ಜರಗಿತು.ಕಲ್ಲೇಶ್ವರ ದೇವಸ್ಥಾನವು ಭಾರತದ ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯ ಅಂಬಲಿ ಪಟ್ಟಣದಲ್ಲಿದೆ. ಸಭಾ ಮಂಟಪದಲ್ಲಿ ಇರಿಸಲಾಗಿರುವ ಹಳೆಯ ಕನ್ನಡ ಶಾಸನದ ಪ್ರಕಾರ, ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ರಾಜ ವಿಕ್ರಮಾದಿತ್ಯ VI ರ ಆಳ್ವಿಕೆಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ರಕ್ಷಿಸಲಾಗಿದೆ. ಶ್ರೀ ಕಲ್ಲೇಶ್ವರ ರಥೋತ್ಸವ ಎಳೆಯುವುದಕ್ಕಿಂತ ಮೂರು ದಿವಸ ಮುಂಚಿತವಾಗಿ ಪ್ರತಿದಿನ ಹುಚ್ಚಾಯನನ್ನು ಎಳೆಯಲಾಗುತ್ತದೆ. ಮೂರನೇ ದಿನ ಸಾಯಂಕಾಲ ಶ್ರೀ ಕಲ್ಲೇಶ್ವರನ ರಥೋತ್ಸವವನ್ನು ಎಳೆಯಲಾಗುತ್ತದೆ. ರಥೋತ್ಸವ ಹೇಳುವುದಕ್ಕಿಂತ ಮುಂಚಿತವಾಗಿ ಊರಿನ ಬಣಕಾರ ಬಸವರಾಜರವರ ಮನೆಯಿಂದ ರಥೋತ್ಸವಕ್ಕೆ ಎಡೆಯನ್ನು ತರಲಾಗುತ್ತದೆ. ಎಡೆಯನ್ನು ನಾಲ್ಕು ಗಾಲಿಗಳಿಗೆ ಹಾಕಿ, ಶ್ರೀ ಕಲ್ಲೇಶ್ವರನಿಗೆ ನೈವೇದ್ಯ ಮಾಡಿದ ನಂತರ, ಎಲ್ಲಾ ಭಕ್ತರು ರಥೋತ್ಸವದ ಗಾಲಿಗೆ ತೆಂಗಿನಕಾಯಿಯನ್ನು ಹೊಡೆಯುವ ಮೂಲಕ ತಮ್ಮ ಭಕ್ತಿಯನ್ನು ಸಮಪಿ೯ಸುತ್ತಾರೆ. ದಲಿತ ಮಹಿಳೆಯು ಕಳಸವನ್ನು ಕಲ್ಲೇಶ್ವರನಿಗೆ ಮತ್ತು ರಥೋತ್ಸವದ ಮುಂಭಾಗಕ್ಕೆ ಬೆಳಗುತ್ತಾರೆ, ನಂತರ ಕಲ್ಲೇಶ್ವರ ರಥೋತ್ಸವದ ಪಟಾಕ್ಷೀಯ ಸವಾಲ್ ಕೂಗುತ್ತಾರೆ.ಪಟಾಕ್ಷೀಯ ಸವಾಲು ಮುಗಿದ ಕೆಲವೇ ಕ್ಷಣಗಳಲ್ಲಿ, ಭಕ್ತರು ಕಲ್ಲೇಶ್ವರ ಘೋಷಣೆಯನ್ನು ಭಕ್ತಿಯಿಂದ ಕೂಗುತ್ತಾ ಮುನ್ನಡೆಸುತ್ತಾರೆ.ರಥೋತ್ಸವವನ್ನು ಶ್ರೀ ಕಲ್ಲೇಶ್ವರ ದೇವಸ್ಥಾನದ ಪೂಜಾರಿಗಳು ಮತ್ತು ಸ್ವಾಮಿಗಳು ಏರುತ್ತಾರೆ.ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಎ ಷಡಕ್ಷರಿ, ಎಂ ದೇವೇಂದ್ರಗೌಡ, ಎಂ ಚನ್ನಬಸಪ್ಪ, ಟಿ ಪ್ರಕಾಶ್ ಗೌಡ, ಎಂ ಮಂಜುನಾಥ, ಪೂಜಾರ ನಾಗೇಶ್, ಇತರೆ ಊರಿನ ಮುಖಂಡರು ಉಪಸ್ಥಿತರಿದ್ದು, ರಥೋತ್ಸವದ ಕಾರ್ಯವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್.ಪ್ರದೀಪ್.ಕುಮಾರ್.ಸಿ. ಕೊಟ್ಟೂರು.