ಕೂಡ್ಲಿಗಿ:ಬಾಣದ ವಂಶಸ್ಥ ಕುಟುಂಬ ದವರಿಂದ ಶ್ರೀ ಊರಮ್ಮ ದೇವಿಗೆ – ಶ್ರಾವಣ ಪರ್ವ ಪ್ರಸಾದ ಸೇವೆ.
ಕೂಡ್ಲಿಗಿ ಆ.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಗ್ರಾಮ ದೇವತೆ ಶ್ರೀಊರಮ್ಮ ದೇವಿಗೆ, ಶ್ರಾವಣ ಮಾಸದ ಮಂಗಳವಾರ ಪ್ರಯುಕ್ತ ಪ್ರಸಾದ ಪರ್ವ ಜರುಗಿತು. ಪಟ್ಟಣದ 16 ನೇ. ವಾರ್ಡ್ ನಿವಾಸಿಗಳಾದ ವಾಲ್ಮೀಕಿ ಸಮುದಾಯದ” ಬಾಣದ ಮನೆತನದ” ಕುಟುಂಬಸ್ಥರಿಂದ, ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹ ಯೋಗದೊಂದಿಗೆ. ಶ್ರೀಊರಮ್ಮ ದೇವಿಗೆ ಶ್ರಾವಣ ಪರ್ವ ವಿಶೇಷ ಪೂಜೆ, ಪರ್ವ ಪ್ರಸಾದ ಸೇವೆ ನೆರವೇರಿಸಲಾಯಿತು. ಬಾಣದ ವಂಶಸ್ಥ ಕುಟುಂಬದವರು, ಹಲವು ವರ್ಷಗಳಿಂದ ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಸಾರ್ವಜನಿಕರಿಗೆ ಪರ್ವ ಪ್ರಸಾದ ಸೇವೆ ಜರುಗಿಸುತ್ತಾರೆ.

ವಾಲ್ಮೀಕಿ ಸಮುದಾಯದ ಬಾಣದ ವಂಸ್ಥರ ಕುಟುಂಬದವರು ಸಾಮೂಹಿಕವಾಗಿ ಸಹ ಭಾಗಿತ್ವದೊಂದಿಗೆ, ಪ್ರತಿ ವರ್ಷದ ಶ್ರಾವಣ ಮಾಸದ ಮಂಗಳವಾರ ದಂದು. ಶ್ರೀಊರಮ್ಮದೇವಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಪರ್ವ ಪ್ರಸಾದ ಸೇವೆ ನೆರವೇರಿಸುತ್ತಿದ್ದಾರೆ, ಅಂತೆಯೇ ಇಂದು ಶ್ರವಣ ಮಾಸದ ಮಂಗಳವಾರ ದಂದು (ಆ13), ಗ್ರಾಮ ದೇವತೆ ಶ್ರೀಊರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ. ವಿಶೇಷ ಪರ್ವ ಪ್ರಸಾದ ಸೇವೆ ಏರ್ಪಡಿಸಲಾಗಿತ್ತು, ಪ್ರಸಾದ ಸಂದರ್ಭದಲ್ಲಿ ಪಟ್ಟಣದ ನೂರಾರು ಭಕ್ತರು ಸೇರಿದಂತೆ. ಸುತ್ತ ಮತ್ತಲಿನ ಕೆಲವು ಗ್ರಾಮಗಳಲ್ಲಿನ ನೂರಾರು ಭಕ್ತರು, ನಾಗರೀಕರು ಹಿರಿಯರು ಮಹಿಳೆಯರು ಮಕ್ಕಳು. ಶ್ರೀಊರಮ್ಮ ದೇವಿಯ ದರ್ಶನ ಪಡೆದು ನಂತರ, ದೇವಸ್ಥಾನದ ಆವರಣದಲ್ಲಿನ ಪರ್ವದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಬಾಣದ ಮನೆತನದ ಕುಟುಂಬಸ್ಥರು ಎಲ್ಲಾ ಹಿರಿಯರು, ಅವರ ನೆಂಟರು ಬಂಧು ಬಳಗ ಸ್ನೇಹಿತರು ಹಿತೈಷಿಗಳು. ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹ ಯೋಗದೊಂದಿಗೆ, ಪ್ರಸಾದ ಪರ್ವದಲ್ಲಿ ಸಕ್ತೀಯವಾಗಿ ಪಾಲ್ಗೊಂಡು, ಪರ್ವ ಪ್ರಸಾದ ಸೇವೆ ಕಾರ್ಯಕ್ರಮ ಯಶಸ್ವಿ ಗೊಳಿಸಲಾಗಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ ಬಿ. ಸಾಲುಮನೆ. ಕೂಡ್ಲಿಗಿ.