ಕರುಣೇಶ್ವರ ಸಂಸ್ಥಾನ ಮಠಕ್ಕೆ ಸಾಮೂಹಿಕವಾಗಿ ದೇಣಿಗೆ ಸಂಗ್ರಹಿಸಿ – ಕಾಣಿಕೆಯನ್ನು ಮಠಕ್ಕೆ ಅರ್ಪಿಸಿದ ಸದ್ಭಕ್ತ ಮಂಡಳಿ.

ಇಜೇರಿ ನ.08

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸುಕ್ಷೇತ್ರ ಆಂದೋಲ ಗ್ರಾಮದ ಆರಾಧ್ಯ ದೈವ ಶ್ರೀ ಕರುಣೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯಾ ಸಾನಿಧ್ಯದಲ್ಲಿ ನಡೆಯಲಿರುವ ದಿನಾಂಕ:12-11-2024 ರಿಂದ 14 -11-2024 ವರೆಗೆ ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರ, ಸಂತ ಸಮಾವೇಶ, ಹಾಗೂ ಸಾಮೂಹಿಕ ವಿವಾಹ ಮತ್ತು ಅಶ್ವರೂಡ ವಿಶ್ವ ಗುರು ಬಸವಣ್ಣ ನವರ ಪುತ್ಥಳಿ ಪ್ರತಿಷ್ಠಾಪನೆಯ ಆಂಗವಾಗಿ ಇಜೇರಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕಧ್ಯಕ್ಷರಾದ ಶ್ರೀ ಶ್ರವಣಕುಮಾರ ಡಿ.ನಾಯಕ್ ರವರ ನೇತೃತ್ವದಲ್ಲಿ ಒಂದು ತಂಡ ರಚಿಸಿ ಈ ಸಮಾವೇಶಕ್ಕೆ ದೇಣಿಗೆ ಸಂಗ್ರಹಿಸುವುದನ್ನು ಪ್ರಾರಂಭಿಸಿ ಹಿಂದೂ ಸಂಘಟನೆಗಳ ಪರ ಇರುವ ಕಾರ್ಯಕರ್ತರನ್ನು ಒಗ್ಗೂಡಿಸಿ ಮನೆ ಮನೆಗೂ ಹೋಗಿ ದೇಣಿಗೆ ಸಂಗ್ರಹಿಸಿ ₹55,920 ರೂಪಾಯಿಗಳನ್ನು ಇಂದು ಆಂದೋಲದ ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದು ನಮಸ್ಕರಿಸಿ ಆಶೀರ್ವಾದ ಪಡೆದು ತಾವುಗಳು ಸಂಗ್ರಹಿಸಿದ ದೇಣಿಗೆಯನ್ನು ಪೂಜ್ಯ ಶ್ರೀಗಳಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಶ್ರವಣಕುಮಾರ್.ಡಿ ನಾಯಕ್, ದೌಲತ್ರಾಯ.ಎನ್ ನೀಲಕೋಡ್, ನಿಂಗಣ್ಣ ಚಿಗರಲ್ಲಿ, ವೆಂಕಟೇಶ್ ಕ್ಯಾಸಪಲ್ಲಿ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ.ಎನ್.ನೀಲಕೋಡ್.ಜೇವರ್ಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button