ಆಡಳಿತಾತ್ಮಕ ಅನುಮೋದನೆ ಜಾರಿಗೆ, ಬರ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಖಡಕ್ ಎಚ್ಚರಿಕೆ.

ಬಾಗಲಕೋಟೆ ಏಪ್ರಿಲ್.10

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದಲ್ಲಿ ವಿಫಲವಾದ ತೆರೆದ ಕೊಳವೆ ಬಾವಿಗೆ ಸಾತ್ವಿಕ ಎಂಬ ಮಗು ಬಿದ್ದಿರುವ ಘಟನೆಯ ಬೆನ್ನಲ್ಲೆ ಎಚ್ಚೆತ್ತು ಕೊಂಡಿರುವ ಬಾಗಲಕೋಟೆ ಜಿಲ್ಲಾಡಳಿತವು ಬರ ಪರಸ್ಥಿತಿ ನಿರ್ವಹಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷೆತೆಯಲ್ಲಿ ತುರ್ತು ಅಧಿಕಾರಿಗಳ ನಿರ್ವಹಣಾ ಸಭೆ ಕರೆದು ಖಡಕ್ ಸೂಚನೆ ಕೊಟ್ಟಿದ್ದಾರೆ. ಬರ ಪರಸ್ಥಿಯ ಗಂಭೀರತೆಯನ್ನು ಅರಿತ ಜಿಲ್ಲಾಡಳಿತ ನೆತ್ತಿ ಬೀರಿಯುವ ಬಿಸಿಲು, ಭೀಕರ ಬರದಲ್ಲಿ ಜನರು ಹೈರಾಣಗಿ ಜನ ಜಾನುವಾರಗಳು ಪರದಾಡುವ ಸ್ಥಿತಿ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಚ್ಚು ತೊಂದರೆ ಕಾಡುವ ಬರ ಬರಬಹುದು.

ಕ್ರಿಯಾಯೋಜನೆಯಲ್ಲಿ ಗುರುತಿಸಲಾದ ಸಮಸ್ಯಾತ್ಮಕ ಗ್ರಾಮಗಳಲ್ಲಿ ಅವಶ್ಯ ಕಾಮಗಾರಿಗಳನ್ನು ಕೈಗೊಳ್ಳಲು ಪ್ರತಿ ತಾಲೂಕಿಗೆ ಪ್ರಥಮ ಹಂತದಲ್ಲಿ 20 ಲಕ್ಷ ಎರಡನೇ ಹಂತದಲ್ಲಿ 20 ಲಕ್ಷ ಸೇರಿ ಒಟ್ಟು 40 ಲಕ್ಷ ಅನುದಾನ ಒದಗಿಸಲಾಗುವದು ಕ್ರಿಯಾಯೋಜನೆಯ ಪ್ರಕಾರ ಪ್ಲಾಸ್ಸಿಂಗ್ ರೀ ಡ್ರೀಲ್ಲಿಂಗ್ ಪೈಪಲೈನ ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿರಬೇಕು ಏಪ್ರಿಲ್ ಮಾಹೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಕಾರ್ಯ ನಿರ್ವಹಿಸಲು ಪ್ರತಿ ತಾಲೂಕಿಗೆ 14 ಲಕ್ಷ ರೂ, ನೀಡಲಾಗುತ್ತಿದ್ದೂ ಮೇ ಮಾಹೆಯಲ್ಲಿ ಆಯಾ ತಾಲೂಕಿನ ಕ್ರಿಯಾಯೋಜನೆಯನ್ನು ಮುಂಚಿತವಾಗಿ ತಯಾರಿಸಲು ಎಲ್ಲಾ ಅಧಿಕಾರಿ ವರ್ಗದವರು ಶ್ರಮಿಸಬೇಕೆಂದು ತಿಳಿಸಿದರಲ್ಲದೆ ಜಿಲ್ಲೆಯಲ್ಲಿ ಅಧಿಕಾವಾಗಿ ವಿಫಲವಾದ ತೆರೆದ ಕೊಳವೆ ಬಾವಿಗಳಿದ್ದು ಅವುಗಳನ್ನು ಮುಚ್ಚಲು ಸೂಕ್ತ ಕ್ರಮವಹಿಸ ಬೇಕೆಂದು ಸೂಚಿಸಿದರು, ಸಭೆಯಲ್ಲಿ ಜಿ ಪಂ, ಸಿ ಇ o ಶಶಿಧರ ಕುರೆರ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಅಮರನಾಥ ರೆಡ್ಡಿ, ಆಪರ ಜಿಲ್ಲಾಧಿಕಾರಿ ಪರಶುರಾಮ್ ಶಿನ್ನಾಳಕರ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಧಿಕಾರಿ ಪೂರೋಹಿತ, ತಾಲೂಕ ತಹಸೀಲ್ದಾರರು ಇದ್ದರು.

ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ.ಶಿರೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button