ಸಫಾಯಿ ಕರ್ಮಚಾರಿ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ನೇರ ದಾಖಲಾತಿ ಮಾಡಿ ಕೊಳ್ಳಬೇಕು – ಉಪ ವಿಭಾಗಾಧಿಕಾರಿ ಡಾ, ಕೆ.ಜೆ ಕಾಂತರಾಜ್.
ತರೀಕೆರೆ ಏ .10

ಪೌರ ಕಾರ್ಮಿಕರ ಮತ್ತು ಸಪಾಯಿ ಕರ್ಮಚಾರಿಗಳು ವಾಸಿಸುವ ಕಾಲೋನಿಗಳಿಗೆ ಶುದ್ಧ ಗಂಗಾ ನೀರಿನ ಘಟಕ ಸ್ಥಾಪಿಸಬೇಕು ಎಂದು ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್ ಹೇಳಿದರು. ಅವರು ಬುಧವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕರೆಯಲಾಗಿದ್ದ ಸಪಾಯಿ ಕರ್ಮಚಾರಿ ಪುನರ್ವಸತಿ ಸಭೆಯಲ್ಲಿ ಮಾತನಾಡಿದರು. ಸಪಾಯಿ ಕರ್ಮಚಾರಿ ಮಕ್ಕಳನ್ನು ವಸತಿ ಶಾಲೆಗಳಲ್ಲಿ ನೇರವಾಗಿ ದಾಖಲು ಮಾಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಅಡಿ ಮನೆಗಳನ್ನು ನಿರ್ಮಿಸಬೇಕು ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸ್ವಚ್ಛತಾ ಕರ್ಮಚಾರಿಗಳಿಗೆ ಸಪಾಯಿ ಕರ್ಮಚಾರಿ ಗುರುತಿನ ಚೀಟಿ ನೀಡಬೇಕು ಎಂದು ಹೇಳಿದರು. ಸಮಿತಿ ಸದಸ್ಯರಾದ ಎಂ.ವಿ ಭವಾನಿ ರವರು ಮಾತನಾಡಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಪಾಯಿ ಕರ್ಮಚಾರಿಗಳಿಗೆ, ಭವಿಷ್ಯ ನಿಧಿ ಮತ್ತು ಇ.ಎಸ್.ಐ ಸೌಲಭ್ಯ ಒದಗಿಸಬೇಕು. ತರೀಕೆರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕಸ್ತೂರಿ ಮತ್ತು ಮಂಗಳ ಗೌರಿ ಎಂಬುವರಿಗೆ ಪುರಸಭೆ ಯಿಂದ ಸಪಾಯಿ ಕರ್ಮಚಾರಿ ಗುರುತಿನ ಚೀಟಿ ಕೊಡಿಸಿ ಕೊಡಬೇಕು ಎಂದು ಹೇಳಿದರು. ಸಭೆಯಲ್ಲಿ ತರೀಕೆರೆ ತಹಶೀಲ್ದಾರ್ ಗ್ರೇಡ್ 2 ನೂರುಲ್ಲಾ ಉದಾ, ಎನ್.ಆರ್ ಪುರ ತಹಶೀಲ್ದಾರ್ ತನುಜಾ ಸವದತ್ತಿ, ತಾಲೂಕು ಪಂಚಾಯಿತಿ ಕಾರ್ಯಾ ನಿರ್ವಹಣಾ ಅಧಿಕಾರಿಯದ ಡಾ, ದೇವೇಂದ್ರಪ್ಪ ತರೀಕೆರೆ ಪುರಸಭೆ ಮುಖ್ಯ ಅಧಿಕಾರಿಯಾದ ಹೆಚ್.ಪ್ರಶಾಂತ್, ಕಡೂರು ಪುರಸಭಾ ಮುಖ್ಯಾ ಅಧಿಕಾರಿಯಾದ ಮಂಜುನಾಥ್, ಬೀರೂರು ಪುರಸಭಾ ಮುಖ್ಯ ಅಧಿಕಾರಿ ಪ್ರಕಾಶ್, ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್, ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗಿರೀಶ್, ಎನ್.ಆರ್ ಪುರ ವೃತ್ತ ನಿರೀಕ್ಷಕರಾದ ಗುರುಕಾಮತ್, ಎನ್ ಆರ್ ಪುರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುನಾಥ್, ಅಜ್ಜಂಪುರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯದ ರಮೇಶ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು