ದೇಶದ ಭವಿಷ್ಯದ ದೃಷ್ಟಿಯಿಂದ ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯ ಆಯ್ಕೆ – ಶಾಸಕ ಡಾ.ಶ್ರೀನಿವಾಸ್ ಎನ್.ಟಿ ಅಭಿಮತ.

ಕೂಡ್ಲಿಗಿ ಮಾರ್ಚ್.27

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ.‌ ಶ್ರೀನಿವಾಸ್ ಎನ್. ಟಿ. ಅವರು ಪಟ್ಟಣದ ತಮ್ಮ ಕಛೇರಿಯಲ್ಲಿ ಭಾನುವಾರ ರಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷ ದ ಮುಖಂಡರಗಳು ಸೇರಿದ್ದು ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯನ್ನು ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಡಿ. ಕೆ. ಶಿವುಕುಮಾರ ರವರು ಮತ್ತು ಪಕ್ಷದ ವರಿಷ್ಠ ರು ಇ. ತುಕಾರಾಮ್ ಅವರನ್ನು ಈ ಭಾರಿ ಅಖಂಡ ಬಳ್ಳಾರಿಯ ಲೋಕಸಭಾ ಚುನಾವಣೆಗೆ ಟಿಕೇಟ್ ನೀಡಿದ್ದಾರೆ ಎಂದು ಇ. ತುಕಾರಾಮ್ ರವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಮುಖಂಡರು ಗಳಲ್ಲಿ ತಿಳಿಸುವುದರೊಂದಿಗೆ ಈ ಭಾರೀ ಎದುರಾಳಿ ಪಕ್ಷ ಬಿಜೆಪಿಯ ಅಖಂಡ ಬಳ್ಳಾರಿ ಇಷ್ಟು ವರ್ಷ ಆಡಳಿತ ಮಾಡಿದರು ಅಭಿವೃದ್ಧಿ ಕಂಡಿಲ್ಲ ಆದ್ದರಿಂದ ಈ ಭಾರೀ ನಮ್ಮ ಪಕ್ಷ ಗೆಲುವಿನ ಪತಾಕೆ ಹಾರಬೇಕು ಎಂದು ನನಗೆ ಪಕ್ಷದ ಮುಖಂಡರು ನನ್ನನು ಗುರುತಿಸಿ ಟಿಕೇಟ್ ಕೊಟ್ಟಿರುತ್ತಾರೆ. ಆದ್ದರಿಂದ ನಾನು ಈ ದಿನವೇ ಅಭ್ಯರ್ಥಿಯ ಅಂತಿಮ ನಿರ್ಧಾರ ಮಾಡಿಕೊಂಡು ನನ್ನ ಸ್ವಂತ ಸ್ಥಳವಾದ ಸಂಡೂರುರಿಗೆ ಹೋಗುವ ದಾರಿಯಲ್ಲಿ ಖಾನಾ ಹೊಸಹಳ್ಳಿ ಯಿಂದಲೇ ಪಕ್ಷದ ಮುಖಂಡರುಗಳನ್ನು ಮಾತನಾಡಿಸಿ ಕೊಂಡು ಹಾಗೆ ಈ ಭಾರೀ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಮುಖಂಡರು ಶ್ರಮವಹಿಸಿ ಈ ದೇಶದ ಪ್ರಗತಿಯನ್ನು ಹಾಗೂ ಸಂವಿಧಾನವನ್ನು ಕಾಪಾಡುವ ಜವಾಬ್ದಾರಿ ಎಲ್ಲಾರೂ ಮೇಲಿದೆ ಎಂದು ತಿಳಿಸುತ್ತಾ, ಮಾನ್ಯ ಇ. ತುಕಾರಾಂ ರವರು “ಬುದ್ಧ ಬಸವಣ್ಣ ಹಾಗೂ ಅಂಬೇಡ್ಕರ್” ರವರನ್ನು ನೆನೆಯುತ ಆ ಮಹಾ ನಾಯಕರ ಮಾರ್ಗ ದಲ್ಲಿ ಹೋಗೋಣ ಎಂದು ತಿಳಿಸಿದರು.

ಕೂಡ್ಲಿಗಿ ಶಾಸಕರು ಅತ್ಯಂತ ಪ್ರೀತಿಯಿಂದ  ಬರ ಮಾಡಿಕೊಂಡು ಸ್ವಾಗತಿಸಿದ ಬಳಿಕ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶ ಮತ್ತು ಜಿಲ್ಲೆಯ ಪರವಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ  ಕಾಂಗ್ರೆಸ್ ಪಕ್ಷದ ವತಿಯಿಂದ ಎಲ್ಲಾ ಸಮಾಜದವರನ್ನು ಅತ್ಯಂತ ಗೌರವಯುತವಾಗಿ  ನಡೆಸಿಕೊಂಡು ಹೋಗುವಂತಹ  ಸರಳ ಮತ್ತು ಸುಸಂಸ್ಕೃತರಾದ  ಉತ್ತಮ ಅಭ್ಯರ್ಥಿಯನ್ನಾಗಿ ಇ. ತುಕಾರಾಮ್ ಅವರನ್ನು ವರಿಷ್ಠರು  ಆಯ್ಕೆ ಮಾಡಿ ಕಳಿಸಿ ಕೊಟ್ಟಿದ್ದಾರೆ. ನಮ್ಮ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮಾನ್ಯ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿ. ಕೆ.‌ ಶಿವಕುಮಾರ್, ತುಕಾರಾಮ್ ಅವರಲ್ಲಿ ಒಬ್ಬನಾಗಿ ನಾನು ನಿಮ್ಮೊಂದಿಗೆ ಮುಂದಿನ ದಿನ ಮಾನಗಳಲ್ಲಿ  ಬರಲಿದ್ದೇನೆ. ದೇಶದ ಭವಿಷ್ಯದ ದೃಷ್ಟಿಯಿಂದ ಅಭಿವೃದ್ಧಿಗಾಗಿ ಅತ್ಯಮೂಲ್ಯವಾದ ತಮ್ಮ ಮತವನ್ನು ಇ.ತುಕಾರಾಮ್ ಅವರಿಗೆ ಕೊಟ್ಟು ಹಾಗೂ ಕೊಡಿಸಿ ಗೆಲುವುಗಾಗಿ ಸಹಕರಿಸ ಬೇಕು ಎಂದೂ ಪಕ್ಷದ ಕಾರ್ಯಕರ್ತರಲ್ಲಿ ಶಾಸಕರು ಕಳಕಳಿಯಿಂದ  ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ  ಕೂಡ್ಲಿಗಿ ತಾಲೂಕಿನ ಸಮಸ್ತ ಮುಖಂಡರು ಕಾರ್ಯಕರ್ತರು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button