ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ — ತಹಶೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿಕೆ.
ಹುನಗುಂದ ಆಗಷ್ಟ.8

ತಾಲೂಕಾಡಳಿತದ ವತಿಯಿಂದ ಆಗಷ್ಟ ೧೫ ರಂದು ಪಟ್ಟಣದ ಟಿಸಿಎಚ್ ಕಾಲೇಜ ಮೈದಾನದಲ್ಲಿ ೭೭ ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಹಶೀಲ್ದಾರ ನಿಂಗಪ್ಪ ಬಿರಾದಾರ ಸೂಚಿಸಿದರು.ಮಂಗಳವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ಈ ಸುದಿನವನ್ನು ಪ್ರತಿ ವರ್ಷಕ್ಕಿಂತ ಈ ವರ್ಷ ವಿಶೇಷವಾಗಿ ಆಚರಿಸಬೇಕು.ಪೊಲೀಸ್ ಪಡೆ ಎನ್.ಎನ್.ಸಿ,ಸ್ಕೌಟ್ಸ್ ಆ್ಯಂಡ್ ಗೈಡ್ಸ್ಯಿಂದ ಪಥಸಂಚಲನ,ಪ್ರಾಥಮಿಕ ಶಾಲಾ ಮಕ್ಕಳಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ವಿವಿಧ ಇಲಾಖೆಯ ಅಧಿಕಾರಿಗಳ ತಂಡವನ್ನು ರಚಿಸಿ ಅವರಿಗೊಂದೊಂದು ಜವಾಬ್ದಾರಿಯನ್ನು ನೀಡಿ ತಮಗೆ ಕೊಟ್ಟ ಜವಾಬ್ದಾರಿಗಳನ್ನು ಪರಸ್ಪರು ಸಮನ್ವಯದಿಂದ ಸಮರ್ಪಕವಾಗಿ ನಿರ್ವಹಿಸಿವ ಮೂಲಕ ಕಾರ್ಯಕ್ರಮದಲ್ಲಿ ಯಾವದೇ ಲೋಪ ದೋಷವಾಗದಂತೆ ಎಚ್ಚರಿಕೆ ವಹಿಸುವಂತೆ ನೋಡಿಕೊಳ್ಳಬೇಕು.ಇನ್ನೂ ವಿವಿಧ ಇಲಾಖೆಯಿಂದ ಹಲವಾರು ಯೋಜನೆಗಳ ಫಲಾನುಭವಿಗಳಿಗೆ ಪರಿಕರ ಮತ್ತು ಚೆಕ್ ವಿತರಣೆ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮದ ಬಗ್ಗೆ ಎರಡು ದಿನಗಳಲ್ಲಿ ತಾಲೂಡಳಿತದ ಗಮನಕ್ಕೆ ತಂದು ಅದರ ವಿವರವನ್ನು ಕೊಡಬೇಕು.ಇನ್ನು ಪೂರ್ವಭಾವಿ ಸಭೆಗೆ ಬರದೇ ಇರುವ ಅಬಕಾರಿ,ಹೆಸ್ಕಾಂ,ಪಿಡಬ್ಯುಡಿ,ಸರ್ಕಾರಿ ಆಸ್ಪತ್ರೆ,ಪಶು ಆಸ್ಪತ್ರೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಶೀಲ್ದಾರರು ಸೂಚಿಸಿದರು.ಈ ಸಂದರ್ಭದಲ್ಲಿ ಶಿರಸ್ತೆದಾರರಾದ ಈಶ್ವರ ಗಡ್ಡಿ,ಶ್ರವಣ ಮುಂಡೇವಾಡಿ,ಕಂದಾಯ ನಿರೀಕ್ಷಕ ನಾಗರಾಜ ಹುನಗುಂಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಮ್. ಬಂಡರಗಲ್ಲ