ಕೊಟ್ಟೂರಿನಲ್ಲಿರುವ ಪಶು ವೈದ್ಯನೋ? – ಅಥವಾ ಹುಚ್ಚನೋ…..?

ಮಲ್ಲನಾಯಕನಹಳ್ಳಿ ಏ .06

ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ಬಿತ್ತ ಮಂಜಪ್ಪನವರು ತಿಳಿಸಿದಂತೆ ನಮ್ಮ ಕುರಿ ಹಾವು ಕಡಿದು ತೀರಿಕೊಂಡಿದೆ ಎಂದು ಕೊಟ್ಟೂರಿನ ದನದ ಆಸ್ಪತ್ರೆ ಡಾ, ಚಂದ್ರ ನಾಯ್ಕ್ ರವರಿಗೆ ಫೋನ್ ಮಾಡಿದರೆ ನನಗೆ ಬರುವುದಕ್ಕೆ ಆಗುವುದಿಲ್ಲ ನಾನು ಬಂದ ಮೇಲೆನೆ ಆ ಕುರಿ ಫೋಟೋ ತೆಗೆದು ಮೇಲೆ ನಿಮಗೆ ಹಣ ಬರುತ್ತೆ ಎಂದು ಹೇಳುತ್ತಾ ಕಾಲಹರಣ ಮಾಡಿದರು. ತದನಂತರ ಮರುದಿನ ಬೇರೆಯವರನ್ನು ಕಳಿಸಿ ಪೋಟೋ ತೆಗೆದರೋ ಬಿಟ್ಟರೋ ಗೊತ್ತಿಲ್ಲ ಆದರೆ ನಮಗೆ ಎಷ್ಟರ ಮಟ್ಟಿಗೆ ನ್ಯಾಯ ದೊರಕುತ್ತದೆ ಎಂಬುದು ನಮಗೆ ತಿಳಿಯದಾಗಿದೆ.

ಮತ್ತು ಇವರನ್ನು ಕಂಡು ನಮ್ಮ ಕುರಿಗಳಿಗೆ ಔಷಧಿ ಕೊಡಿ ಸರ್ ಬಾಳ ಸಾಯುತ್ತವೆ ಎಂದು ಕೇಳಿದರೆ ಈತನ ಉತ್ತರ ನಿಮ್ಮ ಕುರಿ ಎಲ್ಲಿವೆ ನಾನು ನೋಡೇ ಇಲ್ಲ ಎಂದು ಔಷಧಿ ಕೊಡಲಿಲ್ಲ ಸುಮಾರು ಕುರಿಗಳು ನಮ್ಮವು ತೀರಿ ಕೊಂಡವು. ಆದರೆ ಈತನು ವೈದ್ಯನೋ ಹುಚ್ಚನು ಒಂದು ಗೊತ್ತಾಗುತ್ತಿಲ್ಲ ನಮಗೆ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಈತನನ್ನು ಬೇರೆ ಕಡೆ ವರ್ಗಾವಣೆ ಮಾಡಿ ನಮಗೆ ನಮ್ಮ ಕುರಿಗಳಿಗೆ ಸರಿಯಾಗಿ ಚಿಕಿತ್ಸೆ ಕೊಡುವ ವೈದ್ಯರನ್ನು ಕೊಡಬೇಕೆಂದು ಈ ಮೂಲಕ ಕೇಳಿ ಕೊಳ್ಳುತ್ತಿದ್ದೇವೆ ಎಂದು ಮಂಜಪ್ಪ ರಾಮಪ್ಪ ಮಲ್ಲನಾಯಕನಹಳ್ಳಿ ಮತ್ತಿತರು ತಿಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button