ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ವಾತ್ಸಲ್ಯ ಮನೆ ರಚನೆ – ಕಾರ್ಯಕ್ರಮದ ಭೂಮಿ ಪೂಜೆ.
ನರೇಗಲ್ ಜ.03

ರೋಣ ತಾಲೂಕಿನ ನರೇಗಲ್ ವಲಯದ ಕೊಚಲಾಪುರ ಕಾರ್ಯ ಕ್ಷೇತ್ರದಲ್ಲಿ ಲಕ್ಷ್ಮಮ್ಮ ಮುಂಡರಗಿ ಇವರಿಗೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ರಚನೆ ಕಾರ್ಯಕ್ರಮದ ಭೂಮಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾ ಅಧಿಕಾರಿಗಳಾದ ಮಹಾಬಲೇಶ್ವರ್ ಸರ್ ಉಪಸ್ಥಿತರಿದ್ದು ಮಾತೋಶ್ರೀ ಹೇಮಾವತಿ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮದ ಕಲ್ಪನೆಯನ್ನು ತಿಳಿಸಿದರು. ಕುಟುಂಬದ ಕಟ್ಟ ಕಡೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಅವರ ದಿನ ನಿತ್ಯದ ಊಟ ಮತ್ತು ಬಟ್ಟೆಗೆ ಅನುಕೂಲ ವಾಗುವಂತೆ ಮಾಶಾಸನವನ್ನು ಕೊಡುವುದಲ್ಲದೆ ಅವರ ಪರಿಸ್ಥಿತಿಯನ್ನು ಗುರುತಿಸಿ ಕೊಂಡು ಮನೆ ಇಲ್ಲದವರಿಗೆ ಮನೆಯನ್ನು ನಿರ್ಮಿಸಿ ಕೊಡುವ ಕಾರ್ಯಕ್ರಮ ರಾಜ್ಯದ್ಯಂತ ಮಾಡುತ್ತಿದ್ದು ನೊಂದ ಜೀವಿಗಳಿಗೆ ಆಸರಿಯಾಗುವ ಕಾರ್ಯಕ್ರಮವಾಗಿದೆ ಎಂದು ವಿವರವಾಗಿ ತಿಳಿಸಿದರು.

ಜೊತೆಗೆ ಯೋಜನೆಯಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಶರಣಪ್ಪ ಅಯ್ಯನಗೌಡ ಪ್ರಕಾಶ್ ರೆಡ್ಡಿರ ಕಳಕಪ್ಪ ಮಾಲ್ಗಿತ್ತಿ ಮಠ ಕಾಸಿಂ ಸಾಬ್ ನರಗುಂದ ಜ್ಞಾನ ವಿಕಾಸ ಸಮನ್ವ ಅಧಿಕಾರಿಯಾದ ಅಶ್ವಿನಿ.ಪಿ ಎಂ ವಲಯದ ಮೇಲ್ವಿಚಾರಕರಾದ ಸುಮಾ ಹಿರೇಮಠ್ ಸೇವಾ ಪ್ರತಿ ನಿಧಿಯಾದ ಆಶಾ ಗೌರಿಮಠ ಬಸಮ್ಮ ಮಾಲಗಿತ್ತಿ ಮಠ ಸ್ವ ಸಹಾಯ ಸಂಘದ ಸದಸ್ಯರು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ