ವಿನೂತನ ಕಾರ್ಯವೈಖರಿ ಮೂಲಕ ರೈತರಿಗೆ ಜಾಗೃತಿ ಮೂಡಿಸಿದ – ರೋಣ ನಗರದ ಖಾಕಿ ಪಡೆ.

ರೋಣ ಜ.16

ನಗರದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ರೈತರಿಗೆ ರಸ್ತೆ ನಿಯಮಗಳನ್ನು ಪಾಲಿಸಲು ಹಾಗೂ ಅಪಘಾತಗಳನ್ನು ತಪ್ಪಿಸಲು ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಅದುವೇ ರೈತರ ಚಕ್ಕಡಿಗಳಿಗೆ ಹಾಗೂ ಟ್ರ್ಯಾಕ್ಟರ್, ಟಂ,ಟಂ ಗಳಿಗೆ ರೇಡಿಯಂ ಅಂಟಿಸುವುದರ ಮೂಲಕ ರೈತರಿಗೆ ಜಾಗೃತಿ ಮೂಡಿಸಿದ ಖಾಕಿ ಪಡೆ ಇತ್ತೀಚಿನ ದಿನಗಳಲ್ಲಿ ರೈತರು ಮನೆಯಿಂದ ಹೊಲಗಳಿಗೆ ತೆರಳುವಾಗ ಹಾಗೂ ಹೊಲಗಳಿಂದ ಮನೆಗೆ ತೆರುಳುವಾಗ ಅಪಘಾತ ಸಂಭವಿಸಿದ್ದನ್ನು ಕಂಡಿದ್ದೇವೆ. ದ್ವಿಚಕ್ರ ವಾಹನ ಸವಾರರು ಇತರ ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸದೆ ಅಪಘಾತಕ್ಕೆ ಈಡಾಗಿದ್ದನ್ನು ಕಂಡಿದ್ದೇವೆ. ಆದರೆ ರೈತರು ಸಹ ತಮ್ಮ ಚಕ್ಕಡಿಗಳಿಗೆ ಯಾವುದೇ ಗುರುತು ಇಲ್ಲದೆ ರಾತ್ರಿಯಲ್ಲಿ ಎದುರಿಗೆ ಬರುವ ವಾಹನಗಳಿಗೆ ಚಕ್ಕಡಿ ಗುರುತು ಸಿಗಲೆಂದು ರೇಡಿಯಂ ಅಂಟಿಸಲು ನಮ್ಮ ಪೊಲೀಸ್ ಇಲಾಖೆ ನಿರ್ಧರಿಸಿರುವುದು ಸ್ವಾಗತಾರ್ಹವಾದ ಕ್ರಮ ಆಗಿದೆ ಎಂದು ಎ.ಎಸ್.ಐ ಎಸ್.ಬಿ .ಪವಾಡಿ ಅವರು ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ರೋಣ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಶಾಂತಗೇರಿ. ಬೋಮ್ಮಸಾಗರ. ಸರ್ಜಾಪುರ. ಗ್ರಾಮಗಳಲ್ಲಿ ರೈತರ ಚಕ್ಕಡಿಗಳಿಗೆ ಹಾಗೂ ಟ್ರ್ಯಾಕ್ಟರ್, ಟಂ,ಟಂ ಗಳಿಗೆ ರೇಡಿಯಂ ಅಂಟಿಸುವುದರ ಮೂಲಕ ಅಪಘಾತ ತಡೆಗಟ್ಟುವ ರಸ್ತೆ ನಿಯಮಗಳನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ, ನಾಗಪ್ಪ ಮಂಗಳೂರು ಇದ್ದರು. ರೈತರಿಗೆ ರಸ್ತೆ ನಿಯಮಗಳನ್ನು ಪಾಲಿಸಲು ರೇಡಿಯಂ ಅಂಟಿಸಿದ ಖಾಕಿ ಪಡೆಗೆ ಸಾರ್ವಜನಿಕರು ಅಭಿನಂದನೆ ಹೇಳಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎಸ್.ವಿ ಸಂಕನಗೌಡ್ರ ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button