“ಉತ್ತಮತನ ಜಗ ಎಂದೂ ಮರೆಯದು”…..

ತಂದೆ ತಾಯಿಯರಿಗೆ ಪೂಜ್ಯತೆಯಿರಲಿ
ಆರೋಗ್ಯದ ಬಗ್ಗೆ ಸ್ವಯಂ ರಕ್ಷಣೆಯಿರಲಿ
ಆಹಾರ ಸೇವನೆಯಲಿಸಮತೋಲನವಿರಲಿ
ಹಿರಿಯರಲಿ ಅನುಭವಸ್ಥರಲಿ ಗೌರವವಿರಲಿ
ಸಹೋದರತೆಯ ವಾತ್ಸಲ್ಯದಿ ಸೋಲದಿರಿ
ನೆರೆಹೊರೆಯವರಲಿ ಸಮಾದಾನವಿರಲಿ
ಪರೀಕ್ಷೆ ನಿರೀಕ್ಷೆಯಲಿ ಭರವಸೆಯಿರಲಿ
ದುಡಿಮೆಯಲಿ ನಂಬಿಕೆಯಿರಲಿ
ಸಹಾಯ ಮಾಡಿದವರಿಗೆ ಕೃತಜ್ಞತೆಯಿರಲಿ
ಗಳಕೆಯಲಿ ಉಳಿತಾಯವಿರಲಿ
ಕಾಯಕದಲಿ ಪ್ರಾಮಾಣಿಕತೆ ಇರಲಿ
ಕರುಣೆ ತೋರಿದವರಿಗೆ ಧನ್ಯತೆಯಿರಲಿ
ಅಹಂಕಾರ ತೋರಿದವರಿಗೆ ದಿಕ್ಕಾರವಿರಲಿ
ನಗುಸುವವರಿಗೆ ತಾತ್ಸರ ಮಾಡದಿರಿ
ಅಳು ತರಿಸಿದವರಿಗೆ ನೆನೆಯದಿರಿ
ನ್ಯೂನತೆ ಬೇರೆಯವರಿಗೆ ತೋರದಿರಿ
ಪರಿಸರ ಸಂರಕ್ಷಣೆ ಕಾಳಜಿಯಿರಲಿ
ಸಕಲ ಪ್ರಾಣಿಗಳಲಿ ದಯೆ ಇರಲಿ
ಒಳ್ಳೆಯತನ ಮಾಡಿ ಮಾಡದಂತಿರಿ
ಉತ್ತಮತನ ಜಗ ಎಂದೂ ಮರೆಯದು
ಜಗದ ಸಿರಿಯ ಉಂಡು ಧನ್ಯತೆಯಾಗಿರಿ

-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ..