ಜ್ಞಾನ ಜ್ಯೋತಿ ಸಿದ್ದೇಶ್ವರ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಸಂಘದ ಗ್ರಾಮ ಅಭಿವೃದ್ಧಿ ಯೋಜನೆಯ ಪರಿಸರ ಜಾಗೃತಿ ಕಾರ್ಯಕ್ರಮ.

ಕಲಕೇರಿ ಜೂನ್.12

ತಾಳಿಕೋಟೆ ತಾಲೂಕಿನ ಕಲಕೇರಿ ವಲಯದಲ್ಲಿ ಜ್ಞಾನ ಜ್ಯೋತಿ ಸಿದ್ದೇಶ್ವರ ಶಾಲೆಯ ಆವರಣದಲ್ಲಿ ಶ್ರೀ ಧರ್ಮಸ್ಥಳ ಸಂಘದ ಗ್ರಾಮಾ ಅಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡು ಸಸಿಗಳನ್ನು ನೆಟ್ಟು ಪರಿಸರ ಬೆಳೆಸೋಣ ನಾಡು ಉಳಿಸೋಣ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೆ ಹಸಿರೇ ಉಸಿರೆನ್ನುವ ಸಂದೇಶವನ್ನು ಮಕ್ಕಳಲ್ಲಿ ಹಂಚಿ ಕೊಂಡು ಪರಿಸರದ ಕಾಳಜಿ ಮತ್ತು ಜಾಗೃತಿ ಮೂಡಿಸಲಾಯಿತು.ಸಿಂದಗಿ ತಾಲೂಕಿನ ಕೃಷಿ ಅಧಿಕಾರಿ ಸುರೇಶ್ ತಳವಾರ್.ಆಡಿಟರ ಟ ಎನ್ ಓ ಸರ್ ವಲಯದ ಮೇಲ್ವಿಚಾರಕರು.ಸಿದ್ದಲಿಂಗಪ್ಪ ಪಾಟೀಲ್. ಸೇವಾ ಪ್ರತಿನಿಧಿಗಳು ಸವಿತಾ ಮನಗೂಳಿ. ಸ್ವಪ್ನ ಮಾದರ. ಧರ್ಮಸ್ಥಳ ಸಂಘದ ವತಿಯಿಂದ ಮಕ್ಕಳಿಗೆ ನೋಟು ಬುಕ್ಕು ವಿತರಣೆ ಮಾಡಿದರು.

ಶಾಲೆಯ ಅಧ್ಯಕ್ಷರು ಬಾಬು ದೇಸಾಯಿ. ಗ್ರಾಮ ಪಂಚಾಯಿತಿಯ ಸದಸ್ಯರು ಸುಧಾಕರ್ ಅಡಿಕಿ. ಶಾಲೆಯ ಮುಖ್ಯ ಗುರುಗಳು ಶಿವಾನಂದ್ ಗಣೇಶಮಠ. ನಾನಾ ಗೌಡ ಚೌದ್ರಿ. ಪ್ರಕಾಶ್ ಯರನಾಳ. ಮಡಿವಾಳಪ್ಪ ಜಂಬಿಗಿ. ಶರಣು ಸಜ್ಜನ್. ಗಿಡಗಳನ್ನು ಬೆಳೆಸುವ ಮೂಲಕ ಹಸಿರೇ ಉಸಿರು ಆಗಲಿ ಎಂದು ಮಕ್ಕಳಲ್ಲಿ ಬುದ್ಧಿ ಚತುರ್ಯ ಆಗಲಿ ಮಕ್ಕಳಲ್ಲಿ ವಿದ್ಯಾಭ್ಯಾಸ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದು ಈ ಸಂದರ್ಭದಲ್ಲಿ ಸುಧಾಕರ್ ಅಡಿಕಿ ಮಾತನಾಡಿದರು.ಸಿಂದಗಿಯ ಕೃಷಿ ಅಧಿಕಾರಿಗಳು ಹಸಿರೇ ಉಸಿರು ನಮ್ಮ ದೇಶದ ಸಂಪತ್ತು ಗಿಡಗಳನ್ನು ನಾವು ಎಷ್ಟು ಬೆಳೆಸ್ತೀವಿ ಆ ಹಸಿರು ಉಸಿರಾಗಿ ನಮ್ಮನ್ನೆಲ್ಲ ಕಾಯುತ್ತದೆ ಎಂದು ಅದೇ ರೀತಿ ಶಾಲೆಯಲ್ಲಿ ಇದ್ದಂತ ವಿದ್ಯಾರ್ಥಿಗಳು ಬುದ್ಧಿ ಚಾತುರ್ಯದಿಂದ ಬೆಳೆಯಲಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button