ಅನ್ನದಾತರಿಗೆ ನೀರು ಬಿಡುಗಡೆ ಬಂದ ಕರೆ – ಹಿಂಪಡೆದ ಹೋರಾಟಗಾರರು.
ಇಂಡಿ ಮೇ.05

ಇಂಡಿ ಉಪವಿಭಾಗ ಅಧಿಕಾರಿಗಳು ಶ್ರೀಮತಿ ಅನುರಾಧ ವಸ್ತ್ರದ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು ಸರ್ಕಾರ ನೀರು ಬಿಡುಗಡೆ ಗೊಳಿಸಿದೆ ಅದರಿಂದ ನೀವು ಹೋರಾಟ ಹಿಂದೆ ತೆಗೆದುಕೊಳ್ಳಿ ಅಂತ ವಿನಂತಿಸಿದರು. ಹೋರಾಟಗಾರರು ನಾವು ನಮ್ಮ ಹೋರಾಟ ಅನ್ನದಾತರ ಪರವಾಗಿದ್ದು ನೀರು ಬಿಡುಗಡೆ ಗೊಳಿಸಿದ ಸಂತಸದ ವಿಷಯ ನಾವು ನಮ್ಮ ಬಂದ್ ಕರೆಯನ್ನು ಹಿಂದೆ ಪಡೆಯುತ್ತೇವೆ.ಈ ದೇಶದಲ್ಲಿ ಹೋರಾಟವಿಲ್ಲದೇ ಯಾವುದೂ ಸುಲಭವಾಗಿ ದಕ್ಕುವುದಿಲ್ಲ. ಒಂದು ಹಸಿಗೂಸು ಸಹ ತನ್ನ ಹಸಿವನ್ನು ನೀಗಿಸಿಕೊಳ್ಳ ಬೇಕಾದರೂ ಅಳ ಬೇಕಾಗುತ್ತದೆ . ಹಾಗೆಯೇ ಜಿಡ್ಡುಗಟ್ಟಿದ ಈ ಆಡಳಿತ ವ್ಯವಸ್ಥೆ ಕಣ್ಣು ತೆರೆಯ ಬೇಕಾದರೆ ಹೋರಾಟಗಳು, ಸತ್ಯಾಗ್ರಗಳು ಅವಶ್ಯವಿರುತ್ತವೆ. ಕಳೆದ ತಿಂಗಳಲ್ಲಿ ಇಂಡಿ ಮುಖ್ಯ ಕಾಲುವೆಗೆ ನೀರು ಹರಿಸಬೇಕು ಹಾಗೂ ನಷ್ಟ ಆದ ತೂಗರಿ ಪರಿಹಾರ ನೀಡಬೇಕು ಹಾಗೂ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ ಸರ್ಕಾರದ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು. ಇಂತಹ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಇಂಡಿಯ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರೈತರು, ವಿವಿಧ ಸಂಘಟನೆಗಳ ಬೆಂಬಲ ದೊಂದಿಗೆ ನಿರಂತರವಾಗಿ ನಾಲ್ಕಾರು ದಿನಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ 109 ಗಂಟೆ ನಡೆಸಿದ್ದು ಈಗ ಇತಿಹಾಸ. ಧರಣಿ ಮಾಡುವ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ಉಪ ವಿಭಾಗಾಧಿಕಾರಿಗಳು ಕಾಲ ಮಿತಿಯಲ್ಲಿ ನೀರು ಬಿಡುಗಡೆ ಗೊಳಿಸಲು ಕ್ರಮ ತೆಗೆದು ಕೊಳ್ಳುವುದಾಗಿಯೂ, ತಾವು ಧರಣಿ ಸತ್ಯಾಗ್ರಹವನ್ನು ಅಂತ್ಯ ಗೊಳಿಸ ಬೇಕೆಂದು ವಿನಂತಿಸಿದ್ದರು.

ಅವರ ಮೇಲೆ ಸಂಪೂರ್ಣ ಭರವಸೆ ಇರಿಸಿ, ಇಂಡಿ ಇತಿಹಾಸದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಥಮ ಬಾರಿಗೆ ನಮ್ಮ ಹೋರಾಟ ಅಂತ್ಯ ಗೊಳಿಸಿದ್ದೆವು. ನಮ್ಮ ಹೋರಾಟಕ್ಕೆ ಮಣಿದು ರೈತರ, ಜನ ಜಾನುವಾರುಗಳ ಪಕ್ಷಿಗಳ ಹಿತ ದೃಷ್ಟಿಯಿಂದ ಈಗ ಕಾಲುವೆಗೆ ನೀರು ಹರಿಸುತ್ತಿದ್ದಾರೆ ಹಾಗೂ. ಸಮಸ್ತ ರೈತರ ಪರವಾಗಿ ಜಿಲ್ಲೆಯ ಜನ ಪ್ರತಿನಿಧಿಗಳಿಗೆ ಹಾಗೂ “ಸರ್ಕಾರಕ್ಕೆ” ಅಧಿಕಾರಿಗಳಿಗೆ ಧನ್ಯವಾದಗಳು. ಗ್ರಾಮೀಣ ಪಿಎಸ್ಐ ಸೋಮಶೇಖರ್ ಗೆಜ್ಜೆ ಬಾಳು ಮುಳಜಿ ಕರವೇ ಅಧ್ಯಕ್ಷರ ಇಂಡಿ ಸುನೀಲಗೌಡ ಬಿರಾದಾರ ಮಹೇಶ ಹೂಗಾರ ಧರ್ಮರಾಜ ಸಾಲೋಟಗಿ ಅಶೋಕ್ ಅಕಲಾದಿ ಪ್ರಶಾಂತ್ ಲಾಳಸಂಗಿ ಮಲ್ಲು ಗುಡ್ಲ ಸಚಿನ್ ನಾವಿ ಸಿದ್ದು ಡಂಗಾ ಶಿವಾನಂದ ಮಡಿವಾಳ ಶಿವಾನಂದ ಲಕ್ಕುಂಡಿಮಠ ಮಂಜು ದೇವರ ಶ್ರೀಕಾಂತ್ ಬಡಿಗೇರ ಗಿರೀಶ ಪಾಟೀಲ್ ಅಶೋಕಗೌಡ ಬಿರಾದರ N k ಪೂಜಾರಿ ಕಲ್ಲು ಮೂಸಲಗಿ ಗದಗಯ ಹಿರೇಮಠ ಆದಿತ್ಯ ಶಿಂದೆ ಅರವಿಂದ್ ಪಾಟೀಲ ಅಪ್ಪು ಚಂಡಕೆ ವಿಜಯಕುಮಾರ್ ರಾಥೋಡ ವಿವಿಧ ಗ್ರಾಮಗಳಿಂದ ರೈತರ ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ