ಮಾ.26 ರಂದು ಜಕ್ಕಲಿಯಲ್ಲಿ ಕಿರಾತ ಅರ್ಜುನರ ಕಾಳಗ ಬಯಲಾಟ ಪ್ರದರ್ಶನ.
ಜಕ್ಕಲಿ ಮಾ.25

ನರೇಗಲ್ ಸಮೀಪದ ಜಕ್ಕಲಿ ಗ್ರಾಮದಲ್ಲಿ ಶ್ರೀ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 26 ರ ಬುಧವಾರ ರಾತ್ರಿ 10 ಕ್ಕೆ ಶ್ರೀ ಭುವನೇಶ್ವರಿ ರಂಗ ಮಂದಿರದಲ್ಲಿ ಶ್ರೀಲಕ್ಷ್ಮೀ ದೇವಿ ಶ್ರೀ ಬನಶಂಕರಿದೇವಿ ಬಯಲಾಟ ಸಂಘ ಹಾಗೂ ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗ ದೊಂದಿಗೆ “ಕಿರಾತ ಅರ್ಜುನರ ಕಾಳಗ ಅರ್ಥಾತ್ ಪಾಶು ಪಷಾಸ್ತ್ರ ಪಡೆದ ಪಾರ್ಥ ಎಂಬ ಸುಂದರ ಬಯಲಾಟ ಅಭಿನಯಿಸಲ್ಪಡುವುದು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಲು ಪ್ರಕಟಣೆಯಲ್ಲಿ ತಿಳಿಸಿದೆ.ರೋಣ ಶಾಸಕರು. ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಜಿ.ಎಸ್ ಪಾಟೀಲ ಉದ್ಘಾಟನೆಯನ್ನು ನೆರವೇರಿಸುವರು. ಗ್ರಾ.ಪಂ ಮಾಜಿ ಅಧ್ಯಕ್ಷ ಎಮ್.ಎಮ್ ಮೇಟಿ ಅಧ್ಯಕ್ಷತೆಯನ್ನು ವಹಿಸುವರು.ರವೀಂದ್ರನಾಥ ದೊಡ್ಡಮೇಟಿ, ಶೇಖಣ್ಣ ಮೇಟಿ, ಲಿಂಗಪ್ಪ ದೊಡ್ಡಮೇಟಿ, ಅನೀಲಕುಮಾರ ಹೊಸಮನಿ, ಶರಣಪ್ಪ ಪಟ್ಟಣಶೆಟ್ಟಿ, ಮಹೇಶ್ವರಪ್ಪ ಕೋರಿ, ಅಶೋಕಪ್ಪ ಯಾವಗಲ್ಲ, ಶರಣಪ್ಪಮಾಸ್ತಾರ ಬೂದಿಹಾಳ, ಅಡಿವೆಪ್ಪ ರೋಣದ, ಬಸವರಾಜ ಶ್ಯಾಶೆಟ್ಟಿ, ಡಾ, ಎ.ವಿ ನರೇಗಲ್ಲ ಸೇರಿದಂತೆ ಇನ್ನೂ ಅನೇಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ