ಶ್ರೀಮತಿ ನಾಗವೇಣಿ ಅಮ್ಮನವರದು ಋಷಿ ಸದೃಶ ಜೀವನ – ಪೂಜ್ಯ.ವೈ ನರಹರಿ.

ಚಳ್ಳಕೆರೆ ಏ.08

ಬ್ರಹ್ಮಶ್ರೀ ಸಿಂಹಾದ್ರಿ ಗುರುಗಳ ಧರ್ಮಪತ್ನಿ ಶ್ರೀಮತಿ ನಾಗವೇಣಿ ಅಮ್ಮನವರದು ಋಷಿ ಸದೃಶ ಜೀವನವಾಗಿತ್ತು ಎಂದು ನರಹರಿ ಸದ್ಗುರು ಆಶ್ರಮದ ಗುರುಗಳಾದ ಪೂಜ್ಯ.ವೈ ನರಹರಿ ಅಭಿಪ್ರಾಯ ಪಟ್ಟರು. ತಾಲೂಕಿನ ನರಹರಿ ನಗರದ ಶ್ರೀನರಹರೇಶ್ವರ ದೇವಸ್ಥಾನದಲ್ಲಿ ನರಹರಿ ಮಹಿಳಾ ಸಂಘದಿಂದ ನಾಗವೇಣಿ ಅಮ್ಮನವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಅವರ ಬಗ್ಗೆ ಮಾತನಾಡಿದರು. ಸಿಂಹಾದ್ರಿ ಗುರುಗಳು ಯಾಜ್ಞವಲ್ಕ್ಯರಂತೆ ಇದ್ದರೆ ನಾಗವೇಣಿ ಅಮ್ಮನವರು ಕಾತ್ಯಾಯಿನಿ ಮತ್ತು ಮೈತ್ರೇಯಿಯ ರೀತಿ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿ ಕೊಂಡು ಅರವತ್ತ ಮೂರು ವರ್ಷಗಳ ಕಾಲ ಪರಮ ಪವಿತ್ರ ಜೀವನ ನಡೆಸಿದವರು ಅವರಾಗಿದ್ದರು ಎಂದು ತಿಳಿಸಿದರು.

ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಮಾತನಾಡಿ ನರಹರಿ ಸದ್ಗುರು ಪರಂಪರೆಗೆ ಗುರು ಪತ್ನಿಯಾಗಿ ನಾಗವೇಣಿ ಅಮ್ಮನವರ ಕೊಡುಗೆ ಅಪಾರ ಇದ್ದು ಅವರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲ ಮುನ್ನೆಡು ಮಾನವ ಜನ್ಮವನ್ನು ಸಾರ್ಥಕ ಮಾಡಿ ಕೊಳ್ಳಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಈ ಸತ್ಸಂಗ ಕಾರ್ಯಕ್ರಮದಲ್ಲಿ ರಾಜೇಶ್ವರಿ ರಾಜಾರಾಮ್, ಪದ್ಮಶ್ರೀ ನರಹರಿ, ಏಳುಕೋಟಿರಾವ್, ರಾಮಚಂದ್ರಪ್ಪ, ರೇವಣಸಿದ್ದಪ್ಪ, ಪ್ರೇಮಲೀಲಾ, ಸರಸ್ವತಮ್ಮ, ಯತೀಶ್ ಎಂ ಸಿದ್ದಾಪುರ, ಐಶ್ವರ್ಯ ಸೇರಿದಂತೆ ನರಹರಿ ಸದ್ಗುರು ಪರಂಪರೆಯ ಸದ್ಭಕ್ತರು ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button