ಸಾಹಿತ್ಯದ ಮೂಲ ಬೇರು ಜನಪದ – ಹಳ್ಳಿಯ ಸೊಗಡು ಜನಪದ ಸಾಹಿತ್ಯದಲ್ಲಿದೆ.

ಹುನಗುಂದ ಡಿಸೆಂಬರ್.2

ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಅಂಟಿಕೊಂಡು ನಮ್ಮ ನೆಲೆದ ಮೂಲ ಜನಪದದ ಸೊಗಡು ಮತ್ತು ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕನ್ನಡ ಜಾನಪದ ಪರಿಷತ್ತು  ತಾಲ್ಲೂಕು ಘಟಕದ ವತಿಯಿಂದ ನಡೆದ ಕನ್ನಡ ಜಾನಪದ ವಿಕಾಸ ಕುರಿತು ನಡೆಸಿದ ಸ್ಪರ್ಧಾ ಕಾರ್ಯಕ್ರಮದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಕೆಲವು ದಶಕಗಳ ಹಿಂದೆ ಜಾನಪದ ಬದುಕು ನಾಡಿನಾದ್ಯಂತ ಪ್ರತಿಯೊಬ್ಬರ ಜೀವನದಲ್ಲಿ ಹಾಸು ಹೊಕ್ಕಾಗಿತ್ತು.ಆದರೆ ಇಂದಿನ ಆಧುನಿಕ ಬದುಕಿನಲ್ಲಿ ಎಲ್ಲೋ ಒಂದು ಕಡೆ ಜನಪದ ಜೀವನವನ್ನು ಕಳೆದು ಕೊಂಡಿದ್ದೇವೆ ಎನ್ನುವ ನೋವು ಕಾಡುತ್ತಿದೆ.ಸಾಹಿತ್ಯದ ಮೂಲ ಬೇರು ಜನ ಪದದಲ್ಲಿರುವ ಜೀವಂತಿಕೆಯ ಸೊಗಡು ಬೇರೆ ಯಾವ ಸಾಹಿತ್ಯದಲ್ಲಿ ಇಲ್ಲ. ಜನಪದ ಎನ್ನುವುದು ಒಂದು ಸಂಸ್ಕೃತಿ. ನಮ್ಮ ಬದುಕಿನ ಉದ್ದಕ್ಕೂ ಜನಪದ ಹಾಸು ಹೊಕ್ಕಿದೆ. ಕನ್ನಡ ಜಾನಪದ ಪರಿಷತ್ತು ಈ ರೀತಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆ ವಿಷಯ ಎಂದರು. ಶಿಕ್ಷಕಿ ಗಿರಿಜಾ ದರಗಾದ ಮಾತನಾಡಿ ಕಣ್ಮರೆಯಾಗುತ್ತಿರುವ ಅಂದಿನ ಹಳ್ಳಿ ಸೊಗಡಿನ ಸೋಬಾನ,ಲಾವಣಿ ಪದಗಳು ಹೆಣ್ಣು ಮಕ್ಕಳು ತವರೂರಿನಿಂದ ಗಂಡನ ಮನೆ,ಹಬ್ಬ ಹರಿದಿನಗಳ ಸೇರಿದಂತೆ ಅನೇಕ ಸಂದರ್ಭದಲ್ಲಿನ ಜನ ಪದಗಳನ್ನು ಹಾಡುತ್ತ ಮಕ್ಕಳಿಗೆ ಜನಪದ ಸಾಹಿತ್ಯದ ಕುರಿತು ತಿಳಿಸಿದರು ಅದರ ಜೊತೆಗೆ ಆಗ ಲಾಲಿ ಹಾಡಿಗೆ ಮಗು ಮಲಗಿದರೆ ಇಂದು ಮೊಬೈಲ್ ಡೀಜೆಗೆ ಮಗು ಮಲಗುತ್ತದೆ ಎಂದರು.ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಡಿ.ಚಿತ್ತರಗಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ, ಅಳಿದು ಹೋಗುತ್ತಿರುವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಕಾಲೇಜು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯನ್ಮೋಖರಾಗಬೇಕು, ಎಲೆ ಮರೆಕಾಯಿ ಆಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ ಎಂದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ  ಮಹಾಂತೇಶ ಪರೂತಿ ಮಾತನಾಡಿದರು.ಜಾನಪದ ಕಲೆ ಪ್ರದರ್ಶಿಸಿದ ಬಸವರಾಜ ಬಡಿಗೇರಿ ಹಾಗೂ ಗಿರಿಜಾ ದರಗಾದ ಅವರನ್ನು ಜಾನಪದ ಪರಿಷತ್ತು ವತಿಯಿಂದ ಸತ್ಕರಿಸಲಾಯಿತು.  ಕಾಲೇಜಿನಲ್ಲಿ ಏರ್ಪಡಿಸಿದ್ದ ಜಾನಪದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಲಕ್ಷ್ಮೀ ಉಕ್ಕಲಿ (ಪ್ರಥಮ), ಶರೀಫಾ ಬೇಗಂ (ದ್ವಿತೀಯ), ಮಂಜುಳಾ ಇದ್ದಲಗಿ, ನೀಲಮ್ಮ ಹಟ್ಟಿ (ತೃತೀಯ), ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ  ಹಾಗೂ ನಗದು ನೀಡಿ ಗೌರವಿಸಲಾಯಿತು.ಪ್ರಾಚಾರ್ಯ ಶರಣಪ್ಪ ಹೂಲಗೇರಿ, ವಿ.ಕೆ.ಶಶಿಮಠ, ಎನ್.ವೈ. ನದಾಫ್, ಸಿ.ಎಂ. ಪುರಂದರೆ, ವಿಜಯ ದಳವಾಯಿ, ಸಂಗಮೇಶ ಹೂಗಾರ, ವಿಜಯಲಕ್ಷ್ಮೀ ರಾಜೂರು, ಧರೇಶಗೌಡ ಗೌಡರ,  ಗೀತಾ ತಾರಿವಾಳ ನಿರೂಪಿಸಿದರು, ಟಿ.ಬಿ ಭಜಂತ್ರಿ ವಂದಿಸಿದರು.   

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button