ಸಾಹಸ ಗೈದಂತ “ಸಿಂಧೂರಿ ಆಪರೇಷನ್” ಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ – ವತಿಯಿಂದ ಅಭಿನಂದನೆಗಳು.

ಬಳ್ಳಾರಿ ಮೇ.09

ಆಪರೇಷನ್ ಸಿಂಧೂರ ಎಂಬುದು ಭಾರತವು 2025ರ ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ನಡೆಸಿದ ಸೈನಿಕ ಕಾರ್ಯಾಚರಣೆ. ಈ ಕಾರ್ಯಾಚರಣೆ, 2025ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ದಾಂನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಕೈಗೊಂಡ ಕ್ರಮವಾಗಿತ್ತು. ಆ ದಾಳಿಯಲ್ಲಿ 26 ನಾಗರಿಕರು, ಅವರಲ್ಲಿ ಹೆಚ್ಚಿನವರು ಹಿಂದೂ ಪ್ರವಾಸಿಗರು, ಬಲಿಯಾಗಿದ್ದರು. ಈ ದಾಳಿಗೆ ಲಷ್ಕರ್-ಎ-ತೊಯ್ದಾ ಸಂಘಟನೆಯ ಶಾಖೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಹೊಣೆ ಹೊತ್ತಿತ್ತು . ?ಭಾರತವು ಈ ಕಾರ್ಯಾಚರಣೆಯಲ್ಲಿ ಒಟ್ಟು 9 ಉಗ್ರ ಶಿಬಿರಗಳನ್ನು ಗುರಿಯಾಗಿಸಿ 24 ಕ್ಷಿಪಣಿಗಳನ್ನು 25 ನಿಮಿಷಗಳ ಅವಧಿಯಲ್ಲಿ ಉಡಾಯಿಸಿತು. ಈ ಶಿಬಿರಗಳು ಲಷ್ಕರ್-ಎ-ತೊಯ್ದಾ, ಜೈಷ್-ಎ-ಮೊಹಮ್ಮದ್ ಮತ್ತು ಹಿಜ್ಜುಲ್ ಮುಜಾಹಿದೀನ್ ಸಂಘಟನೆಗಳಿಗೆ ಸೇರಿದ್ದವು. ಭಾರತದ ಪ್ರಕಾರ, ಈ ದಾಳಿಯಲ್ಲಿ ಸುಮಾರು 70 ಉಗ್ರರು ನಾಶವಾಗಿದ್ದಾರೆ .ಈ “ಆಪರೇಷನ್ ಸಿಂಧೂರ” ಯಶ್ವಸಿ ಕಾರ್ಯಚರಣೆಗೆ ಅವರಿಗೆ, ಹಾಗೂ ಇದರ ನೇತೃತ್ವ ವಹಿಸಿದ್ದ ಎಲ್ಲಾ ಸೈನ್ಯದ ಮುಖ್ಯಸ್ಥರಿಗೆ, ಎಲ್ಲಾ ಕೆ ಶಂಕರ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರವರು ಹೃದಯ ತುಂಬಿದ ಅಭಿನಂದನೆಯನ್ನು ಸಲ್ಲಿಸಿದ್ದಾರೆ.ಆಪರೇಷನ್ ಸಿಂಧೂರ ಕಾರ್ಯಾಚರಣೆ ಭಾರತೀಯ ಸೇನೆಯು ಉಗ್ರರ ವಿರುದ್ಧ ಕೈಗೊಂಡ ಪ್ರಮುಖ ಕ್ರಮವಾಗಿದ್ದು, ಭಾರತವು ಉಗ್ರರ ವಿರುದ್ಧ ಕಠಿಣ ನಿಲುವು ತೆಗೆದು ಕೊಳ್ಳುತ್ತಿರುವುದನ್ನು ಪ್ರತಿ ಬಿಂಬಿಸುತ್ತದೆ. ಈ ಕಾರ್ಯಾಚರಣೆಯನ್ನು ಭಾರತವೂ ಮುಂದುವರೆಸಿ ಪಾಕಿಸ್ತಾನದ ಎಲ್ಲಾ ಉಗ್ರಗಾಮಿ ಭಯೋತ್ಪಾದನೆ ತರಬೇತಿಯನ್ನು ಶಿಬಿರಗಳನ್ನೂ ಸಂಪೂರ್ಣವಾಗಿ ನಾಶ ಮಾಡಬೇಕೆಂದು ಆಗ್ರಹಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button