“ಕರ್ನಾಟಕ ಸಾಂಸ್ಕೃತಿಕ ನಾಯಕ” ರಾದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರ ಅನಾವರಣ.
ಕೊಟ್ಟೂರು ಫೆಬ್ರುವರಿ.17

ಇಂದು ದಿನಾಂಕ 17.02.2024 ತಾಲೂಕ ಕಛೇರಿ, ಕೊಟ್ಟೂರಿನ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಸರ್ಕಾರದ ಆದೇಶದ ಮೇರೆಗೆ “ಕರ್ನಾಟಕ ಸಾಂಸ್ಕೃತಿಕ ನಾಯಕ”ರಾದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ಈ ಸಮದಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾದ ನಸರುಲ್ಲಾ ಇವರು ಜಾತಿ ರಹಿತ ಸಮಾಜ, ಪ್ರತಿಯೊಬ್ಬರು ಸತ್ಯಸುದ್ಧ ಕಾಯಕದ ಮೂಲಕ ದುಡಿತು ತಿನ್ನಲು, ಹೆಚ್ಚಿನದನ್ನು ಹಸಿದವರಿಗೆ ಹಂಚಿ ತಿನ್ನುವ ದಾಸೋಹ ಪದ್ದತಿಯನ್ನು ಜಾರಿಗೆ ತಂದಿದ್ದ, ವರ್ಗರಹಿತ ಸಮಾಜ ನಿರ್ಮಾಣದ ಕನಸು ಹೊಂದಿದ್ದ, ಮನುಕುಲದ ಏಳಿಗೆಗೆ ದಾರಿದೀಪವಾದ ಹಾಗೂ ಹೆಣ್ಣು ಗಂನಡು ಎನ್ನುವ ಭೇಧವಳಿದು ಮಹಿಳಾ ಅಸಮಾನತೆ ಮತ್ತು ಮೂಢ ನಂಬಿಕೆಗಳ ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಗೊಳಿಸುವ ಸಮಾರಂಭದಲ್ಲಿ ಭಾಗವಹಿಸಿದ್ದು ಸಂತೋಷವನ್ನು ತಂದಿದೆ ಎಂದರು. ತೆಗ್ಗಿನಕೇರಿ ಕೊಟ್ರೇಶ್, ಜಿಲ್ಲಾ ಡಿಎಸ್ಎಸ್ ಮುಖಂಡರು ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲಾ ಜಾತಿ ಜನಾಂಗದವರು ಸ್ಮರಿಸಬೇಕಿದೆ. ಎಲ್ಲಾ ಸಮುದಾಯದವರಿಗೆ ಮಾತಾಡಲು, ಚರ್ಚಿಸಲು ಮುಕ್ತ ಅವಕಾಶವನ್ನು ನೀಡಿದ್ದರು. 24,000 ವಚನಗಳ ರಚಿಸಿದ್ದು, ಅವು ಪ್ರತಿಯೊಬ್ಬರಿಗೆ ದಾರಿದೀಪಗಳಾಗಿವೆ. 12ನೇ ಶತಮಾನದಲ್ಲೇ ಇಂದಿನ ಪಾರ್ಲಿಮೆಂಟಿನ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದರು.ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಅನುಭವ ಮಂಟಪವನ್ನು ರಚಿಸಿದ್ದರು. ಡಾ.ಬಿ.ಆರ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನವು ಸಹಾ ಬಸವಣ್ಣನವರ ಆದರ್ಶವಾಗಿಟ್ಟು ರಚಿಸಿದ್ದಾರೆ.

ಹೀಗಾಗಿ ಬಸವಣ್ಣನವರ ಚಿಂತನೆಗಳು ಸಾಂಸ್ಕೃತಿಕ ರಾಯಭಾರಿತ್ವಕ್ಕೆ ಸಮರ್ಥನೀಯವಾಗಿವೆ ಎಂದರು. ಕೊಟ್ಟೂರು ತಾಲೂಕು ಡಿಎಸ್ಎಸ್ ಅಧ್ಯಕ್ಷರಾದ ಡಿ.ಹನುಮಂತಪ್ಪನವರು ಈ ದಿನ “ಸುವರ್ಣ ಯುಗ” ವಾಗಿದೆ.ಬಸವಣ್ಣನವರು ಅಂದು ಕಲ್ಯಾಣದಲ್ಲಿ ಕ್ರಾಂತಿಯ ಧೂಳನ್ನೇ ಎಬ್ಬಿಸಿದರು. ಅದು ಸಮಾನತೆಯ, ಅಕ್ಷರದ, ಅನ್ನದ ಧೂಳಾಗಿತ್ತು.ಧೀನ, ದಲಿತರು, ಮಹಿಳೆಯರು, ಶೋಷಿತರು ಹೀಗೆ ನೊಂದ ಪ್ರತಿಯೊಬ್ಬರನ್ನು ಬೆನ್ನುತಟ್ಟಿ ಮಾತಾಡಲು ಧೈರ್ಯತುಂಬಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಹಕ್ಕಿದೆ ಎಂದು ತೋಸಿದ್ದರು. ಭಾರತಕ್ಕೆ ಅತ್ಯಮೂಲ್ಯವಾದ ಸಾಂಸ್ಕೃತಿಕ ಮೌಲ್ಯವನ್ನು ಒಳಗೊಂಡಿರುವ ವಚನಗಳನ್ನು ನೀಡಿ ಮನುಕುಲದ ಏಳಿಗೆಗೆ ಶ್ರಮಿಸಿದ ಅವರನ್ನು “ಕರ್ನಾಟಕ ಸಾಂಸ್ಕೃತಿ ನಾಯಕ” ಎಂದು ಘೋಷಿಸಿರುವುದು ಅರ್ಥಪೂರ್ಣವಾಗಿದೆ ಎಂದರು. ನಾವು ಬರೀ ಭಾವಚಿತ್ರ ಪೂಜೆ ಮಾಡಿದರೆ ಸಾಲದು, ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗುವುದರ ಜೊತೆಗೆ ಮುಂದಿನ ಪೀಳಿಗೆಯವರಿಗೂ ಮುಂದುವರಿಸಿಕೊಂಡು ಹೋಗಲು ಮಾರ್ಗದರ್ಶವನ್ನು ನೀಡಬೇಕಿದೆ ಎಂದು ಪಂಚಮಸಾಲಿ ಮುಖಂಡರಾದ ಶಿವಣ್ಣ ಹೇಳಿದರು. ಬಾವಿಕಟ್ಟಿ ಶಿವಾನಂದ ವಕೀಲರು ಮಾತನಾಡಿದರು. ಈ ಸಮಯದಲ್ಲಿ ಗ್ರೇಡ್-2 ತಹಶೀಲ್ದಾರರಾದ ಲೀಲಾ ಎಸ್, ಶಿರಸ್ತೇದಾರರಾದ ಅನ್ನದಾನೇಶ ಬಿ ಪತ್ತಾರ, ತಾಲೂಕು ಪಂಚಾಯಿತಿ ಮ್ಯಾನೇಜರ್ ಪುಷ್ಪಲತಾ ಕೆ, ಹಾಲಸ್ವಾಮಿ ಕಂದಾಯ ನಿರೀಕ್ಷಕರು, ವಿಷಯ ನಿರ್ವಾಹಕ ವಿಜಯಕುಮಾರ ಪುಟಾಣಿ, ಸಿರಾಜ್ ವುದ್ದೀನ್ , ಹನುಮಂತ, ಹರೀಷ್ ಗ್ರಾ.ಆ.ಅ.ಕೊಟ್ಟೂರು, ಮಂಜಪ್ಪ, ದ್ಯಾವಮ್ಮ ಹಾಗೂ ವಿವಿಧ ಮುಖಂಡರು ಭಾಗವಹಿಸಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು