ದತ್ತ ಜಯಂತಿ ಪ್ರಯುಕ್ತ ಪೊಲೀಸ್ – ರೂಟ್ ಮಾರ್ಚ್.
ತರೀಕೆರೆ ಡಿ.11

ದತ್ತ ಜಯಂತಿ ಮಾಲಾಧಾರಿಗಳು ಶಾಂತಿಯಿಂದ ತಮ್ಮ ಕಾರ್ಯಕ್ರಮಗಳನ್ನು ನೆರವೇರಿಸಲು ಪಟ್ಟಣದಲ್ಲಿ ಪೊಲೀಸ್ ಉಪ ಅಧೀಕ್ಷಕರಾದ ಹಾಲುಮೂರ್ತಿ ರಾವ್ ರವರ ನೇತೃತ್ವದಲ್ಲಿ ಪೋಲಿಸ್ ರೂಟ್ ಮಾರ್ಚ್ ಮಾಡಲಾಯಿತು. ಸುಮಾರು 160 ಜನ ಪೊಲೀಸ್ ಸಿಬ್ಬಂದಿಗಳು, ಗೃಹ ರಕ್ಷಕ ದಳ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಒಟ್ಟು 200 ಜನ ರೂಟ್ ಮಾರ್ಚ್ ನಲ್ಲಿ ಭಾಗವಹಿಸಿದ್ದರು. ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯಕ್, ವೀರೇಂದ್ರ, ಗಿರೀಶ್ ಹಾಗೂ 10 ಜನ ಪೊಲೀಸ್ ಉಪ ನಿರೀಕ್ಷಕರು ಹಾಜರಿದ್ದು. ದತ್ತ ಮಾಲ ಕಾರ್ಯಕ್ರಮದ ಸೂಕ್ತ ಬಂದೋಬಸ್ತಿಗಾಗಿ ಎಂಟು ಚೆಕ್ ಪೋಸ್ಟ್ಗಳನ್ನು ರಚಿಸಿ ದಿನಾಂಕ 12 -12 -2024 ರಂದು ಚೆಕ್ ಪೋಸ್ಟ್ ಗಳು ಕಾರ್ಯ ಪ್ರವೃತ್ತವಾಗಲಿವೆ ದಿನಾಂಕ 14 -12 -2024 ರಂದು ನಡೆಯಲಿರುವ ದತ್ತ ಜಯಂತಿ ಕಾರ್ಯಕ್ರಮವು ಸುಸೂತ್ರವಾಗಿ ನೆರವೇರಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಡಿಎಸ್ಪಿ ಹಾಲುಮೂರ್ತಿರಾವ್ ಪತ್ರಿಕೆಗೆ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೇರೆ.ಚಿಕ್ಕಮಗಳೂರು