ತಹಶಿಲ್ದಾರ ಕಾರ್ಯಾಲಯದಲ್ಲಿ ಒನಕೆ ಓಬವ್ವ ನವರ – ಜಯಂತಿ ಆಚರಣೆ.
ದೇವರ ಹಿಪ್ಪರಗಿ ನ.11

ಪಟ್ಟಣದ ತಹಶಿಲ್ದಾರರ ಕಾರ್ಯಾಲಯದಲ್ಲಿ ವೀರ ವನತೆ ಒನಕೆ ಓಬವ್ವ ನವರ ಜಯಂತ್ಯೋತ್ಸವ ಆಚರಣೆ ಮಾಡಿದರು ಈ ಕಾರ್ಯಕ್ರಮದ ತಹಶಿಲ್ದಾರರಾದ ಪ್ರಕಾಶ ಸಿಂದಗಿ ಯವರು ಅಧ್ಯಕ್ಷತೆಯನ್ನು ವಹಿಸಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅರುಣ ಕೋರವಾರ ಶಿಕ್ಷಕರು ಹಾಗೂ ಸಿದ್ದು ಮೇಲಿನಮನಿ ಪ್ರಕಾಶ ಗುಡಿಮನಿ ಜಿ.ಪಿ ಬಿರಾದಾರ ಇವರು ವೀರ ವನಿತೆ ಒನಕೆ ಓಬವ್ವ ನವರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ಹಾಗೂ ಬಸವರಾಜ ತಳಕೇರಿ ಬಸು ಇಂಗಳಗಿ ಪಿಂಟು ಶಿರಸ್ತೇದಾರರಾದ ಸುರೇಶ ಮ್ಯಾಗೇರಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಾದ ರಮಾನಂದ ಚಕ್ಕಡಿ ಹಾಗೂ ಅನಿಲ ರಾಠೋಡ,ತಹಶಿಲ್ದಾರರ ಕಾರ್ಯಾಲಯದ ಸಿಬ್ಬಂದಿಯಾದ ಚನಬಸು ಹೊಸಮನಿ ಈ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ ವೀರ ವನಿತೆ ಒನಕೆ ಓಬವ್ವನವರ ಕುರಿತು ಪ್ರಭಂಧ ಸ್ಪರ್ದೆಯ ಏರ್ಪಡಿಸಿದರು ಅದರಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಅಕ್ಷತಾ ಬಿರಾದಾರ ಶೀವಲಿಲಾ ಮುತ್ತಗಿ ಕುಮಾರ ಆಕಾಶ ಕರಿಗೌಡ ಇವರಿಗೆ ಡಿಕ್ಷನರಿ ಪುಸ್ತಕ ಕೊಡುವ ಮುಖಾಂತರ ಪ್ರೋತ್ಸಾಯಿಸ ಲಾಯಿತು. ಕಾರ್ಯಕ್ರಮದ ಸ್ವಾಗತ ಮತ್ತು ವಂದನಾರ್ಪಣೆ ಸುರೇಶ ಮ್ಯಾಗೇರಿ ಶಿರಸ್ತೇದಾರರು ನೇರವೇರಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

