ನೂತನವಾಗಿ ದಲಿತ ಸೇನೆಯ ಪದಾಧಿಕಾರಿಗಳ – ಆಯ್ಕೆ ಪ್ರಕ್ರಿಯೆ ಜರುಗಿತು.
ಮುದ್ದೇಬಿಹಾಳ ಏ.26

ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ನೂತನವಾಗಿ ದಲಿತ ಸೇನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರನ್ನಾಗಿ ಮಂಜು.ತಿಳಗೂಳ ಉಪಾಧ್ಯಕ್ಷರನ್ನಾಗಿ ಬಸವರಾಜ ಚಲವಾದಿ (ಗುಂಡಕರ್ಜಗಿ) ಪ್ರಧಾನ ಕಾರ್ಯದರ್ಶಿಯಾಗಿ ಪ್ರತಾಪ್ ಚಲವಾದಿ ಹಾಗೂ ಸಂಘಟನೆ ಕಾರ್ಯದರ್ಶಿಯಾಗಿ ಚನ್ನಬಸ್ಸು ಕಾನ್ಯಾಳ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಅಧ್ಯಕ್ಷರಾದ ಮಹೆಶ್ ಅಣ್ಣ ಜಬೂನೂರ್ ಸಿಂದಗಿ ತಾಲ್ಲೂಕಿನ ದಲಿತ ಸೇನೆ ಅಧ್ಯಕ್ಷರಾದ ಹಣಮಂತ ಎಂಟಮನ್ ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ಮುಖಂಡರಾದ ಎಂ.ಬಿ ಪಾಟಿಲ್ (ಗೊನಾಳ್) ಬಸಪ್ಪ ಮೆಲಿನಮನಿ (ಗೊನಾಳ್) ಸಿದ್ರಾಮ್ ರೊಳಿ (ಗೊನಾಳ್) ದಲಿತ ಮುಖಂಡರಾದ ಮಾಂತೆಶ್ ತಮದಡ್ಡಿ. ಯುವ ದಲಿತ ಮುಖಂಡರಾದ ತಿಪ್ಪಣ್ ದೊಡಮನಿ ಅಂಬೇಡ್ಕರ ಸೇನೆ ತಾಲೂಕ ಉಪಾಧ್ಯಕ್ಷರಾದ ಹಣಮಂತ ಗುಂಡಕರ್ಜಗಿ ಹಾಗೂ ಮುದ್ದೇಬಿಹಾಳ ತಾಲ್ಲೂಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಬಸವರಾಜ್ ತಂಗಡಗಿ (ಡಿಜಿ ಸಾಗರ್ ಬಣ) ಯುವ ಹೋರಾಟಗಾರ್ ಬಸವರಾಜ ನೀಲಪ್ಪ ಇತರರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ ಸಂಕನಾಳ ಮುದ್ದೇಬಿಹಾಳ

