🚨 BREAKING NEWS, ಬ್ರಹ್ಮಾವರದ ‘ಆಶ್ರಯ’ ಹೋಟೆಲ್‌ನಲ್ಲಿ ಸಾವಿನ ಸರಣಿ – ತನಿಖೆ ಯಾವಾಗ..?🚨

ಬ್ರಹ್ಮಾವರ ಏ.27

ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಇರುವ ‘ಹೋಟೆಲ್ ಆಶ್ರಯ’ ಇಂದು ಸಾಮಾನ್ಯ ತಂಗುದಾಣವಾಗಿ ಉಳಿದಿಲ್ಲ, ಬದಲಾಗಿ ಅಕ್ರಮಗಳ ಅಖಾಡ ಹಾಗೂ ಸಾವಿನ ಸಂಚಿನ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಸಾರ್ವಜನಿಕ ವಲಯದಲ್ಲಿ ಎದ್ದಿರುವ ಆಕ್ರೋಶದ ರಣ ಕಹಳೆ ಈಗ ಜಿಲ್ಲಾಡಳಿತದ ಬಾಗಿಲು ಬಡಿಯುತ್ತಿದೆ.

🛑 ಹೆದ್ದಾರಿಯ ಪಕ್ಕದಲ್ಲೇ ಸಾವಿನ ಸದ್ದು: –

ನಿಯಮಗಳು ಗಾಳಿಗೆ! ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ತೀರಾ ಹತ್ತಿರದಲ್ಲಿ ಬಾರ್ ಮತ್ತು ಹೋಟೆಲ್ ನಡೆಸಲು ಪರವಾನಗಿ ನೀಡಿದ್ದು ಹೇಗೆ?

ಅಪಘಾತದ ಭೀತಿ:-

ಅವೈಜ್ಞಾನಿಕ ಪಾರ್ಕಿಂಗ್‌ನಿಂದಾಗಿ ಹೆದ್ದಾರಿಯಲ್ಲಿ ಚಲಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ.

ಬಾರ್ ಹಾವಳಿ:-

ರಸ್ತೆ ಪಕ್ಕದಲ್ಲೇ ಇರುವ ಈ ಬಾರ್‌ನಿಂದಾಗಿ ಕುಡುಕರ ಮತ್ತು ಕಿಡಿಗೇಡಿಗಳ ಅಟ್ಟಹಾಸ ಮಿತಿ ಮೀರಿದೆ. ಮಹಿಳೆಯರು ಮತ್ತು ಪಾದಚಾರಿಗಳು ಈ ದಾರಿಯಲ್ಲಿ ಸಂಚರಿಸಲು ಭಯ ಪಡುವಂತಾಗಿದೆ.

🔥 ಅಕ್ರಮ ಚಟುವಟಿಕೆಗಳ ಕಾಶಿ:-

ಪ್ರಭಾವಿಗಳ ರಕ್ಷಣೆ ಇದೆಯೇ..?

ಕೇವಲ ಲಾಡ್ಜಿಂಗ್ ಹೆಸರಿನಲ್ಲಿ ಇಲ್ಲಿ ನಡೆಯುತ್ತಿರುವುದು ಬೇರೆಯದೇ ಕರಾಳ ದಂಧೆಗಳು ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

🎰 ಓಸಿ/ಮಟಕಾ ಮತ್ತು ಬೆಟ್ಟಿಂಗ್:-

ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಅಕ್ರಮ ಮಟಕಾ ದಂಧೆಗೆ ಇದು ಸುರಕ್ಷಿತ ತಾಣವಾಗಿದೆ. .

🔞 ವೇಶ್ಯಾವಾಟಿಕೆ ಜಾಲ:-

ವಸತಿ ಗೃಹದ ಮರೆಯಲ್ಲಿ ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ.

👊 ಪ್ರಭಾವಿಗಳ ಅಟ್ಟಹಾಸ:-

ಇಲ್ಲಿ ನಡೆಯುವ ಅಕ್ರಮಗಳಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ ಇರುವುದರಿಂದಲೇ ಪೋಲೀಸ್ ಇಲಾಖೆ ಮೌನಕ್ಕೆ ಶರಣಾಗಿದೆಯೇ ಎಂಬ ಅನುಮಾನ ಮೂಡಿದೆ.

🔍 ತನಿಖೆ ಯಾವಾಗ..?

ಸಾರ್ವಜನಿಕರ ಐದು ನೇರ ಪ್ರಶ್ನೆಗಳು..!

ಹೋಟೆಲ್ ಆಶ್ರಯದ ಈ ಕರಾಳ ಮುಖದ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ಕೊಳ್ಳುವುದು ಯಾವಾಗ..?

ಕಳೆದ ಹಲವು ದಶಕಗಳಿಂದ ಇಲ್ಲಿ ಸಂಭವಿಸುತ್ತಿರುವ ಸರಣಿ ಸಾವುಗಳ ಹಿಂದಿನ ಸತ್ಯ ಹೊರ ಬರುವುದು ಯಾವಾಗ..?

ಇತ್ತೀಚಿಗೆ ನಡೆದ ಉದ್ಯಮಿಯ ಆತ್ಮ ಹತ್ಯೆ ಪ್ರಕರಣದ ಆಳವಾದ ತನಿಖೆ ನಡೆಯುವುದೇ..?

ಹೆದ್ದಾರಿ ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಬಾರ್ ಪರವಾನಗಿ ರದ್ದಾಗುವುದು ಯಾವಾಗ..?

ಸಿಸಿಟಿವಿ ದೃಶ್ಯಾವಳಿ ಮತ್ತು ಗ್ರಾಹಕರ ರಿಜಿಸ್ಟರ್ ದಾಖಲೆಗಳನ್ನು ಜಾಲಾಡುವುದು ಯಾವಾಗ..?

ಈ ಅಕ್ರಮ ತಾಣಕ್ಕೆ ಬೀಗ ಜಡಿದು ಬ್ರಹ್ಮಾವರದ ಮಣ್ಣಿಗೆ ಅಂಟಿದ ಶಾಪ ವಿಮೋಚನೆ ಮಾಡುವುದು ಯಾವಾಗ?

📢 ಜನಾಕ್ರೋಶದ ಕಿಚ್ಚು:-

“ಆಶ್ರಯದ ಹೆಸರಿನಲ್ಲಿ ಅವಿತಿದೆ ಸಾವಿನ ದೆವ್ವ, ಸರತಿಯಲ್ಲಿ ಬೀಳುತ್ತಿವೆ ಸಾಲು ಸಾಲು ಜೀವ!

ಬಾರ್ ಅಮಲಲಿ ತೂರಾಡುವ ಕಿಡಿಗೇಡಿಗಳ ಅಟ್ಟಹಾಸ,

ಬ್ರಹ್ಮಾವರದ ಮಣ್ಣಿಗೆ ಹತ್ತಿದೆಯೇ ಈ ಹೋಟೆಲ್‌ನ ಶಾಪ?

ಕೊನೆಯ ಮಾತು:-

ಇದು ಕೇವಲ ಒಂದು ಹೋಟೆಲ್ ವಿರುದ್ಧದ ಸುದ್ದಿಯಲ್ಲ, ಬದಲಾಗಿ ಅಕ್ರಮಗಳ ವಿರುದ್ಧ ನಾಗರಿಕರು ಹೂಡಿರುವ ಸಮರ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಮಧ್ಯ ಪ್ರವೇಶಿಸಿ, ಈ ಹೋಟೆಲ್‌ನ ಪ್ರತಿಯೊಂದು ಇಂಚು ಜಾಗವನ್ನು ತನಿಖೆಗೆ ಒಳ ಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ತನಿಖೆ ವಿಳಂಬವಾದರೆ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಲಾಗಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ ‌

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button