ಮೊಹರಂ ಹಬ್ಬದ ಶಾಂತಿ ಸಭೆ.
ಕೊಟ್ಟೂರು ಜು.10

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರಿನ ಪೋಲಿಸ್ ಠಾಣೆಯಲ್ಲಿ ದಿ. 10 ಜುಲೈ 2024 ರಂದು ಮೋಹರಂ ಹಬ್ಬದ ಶಾಂತಿ ಸಭೆಯಲ್ಲಿ ಪಿಎಸ್ಐ ಗಿತಾಂಜಲಿ ಸಿಂಧೇ ಮಾತನಾಡಿ ಮೊಹರಂ ಹಬ್ಬದ ಆಚರಣೆಗೆ ನಮ್ಮ ಠಾಣೆಯಿಂದ ಸಾಕಷ್ಟು ಸಿಬ್ಬಂದಿ ನೇಮಿಸುತ್ತದೆ ಎಂದು ತಿಳಿಸಿದರು. ಸಿ ಪಿ ಐ ವೆಂಕಟಸ್ವಾಮಿ ಮಾತನಾಡಿ ಕೆಂಡ ತುಳಿಯುವುದನ್ನು ನಿಷೆದಿಸಲಾಗಿದೆ ಕೆಂಡ ತುಳಿಯ ಬಾರದೆಂದು ಹೇಳಿದರು.

ಇದಕ್ಕೆ ಕೆ ಎಸ್ ಜಯ ಪ್ರಕಾಶ ನಾಯ್ಕ ಮಾತನಾಡಿ ಉಜ್ಜಿನಿ ಸರ್ಕಲ್ ನಲ್ಲಿ ಸಣ್ಣ ಗುಂಡಿಯಲ್ಲಿ ಕೆಂಡ ಹಾಕಿ ಕೊಳ್ಳುತ್ತಾರೆ ಭಕ್ತರು ಹರಕೆ ಹೊತ್ತು ಕೊಂಡಿರುತ್ತಾರೆ ಉಪ್ಪು ಹಾಕಲಿಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿದರು ಮೆದಾರ ಬಸಣ್ಣ ಮಾತನಾಡಿ ಸಿಬ್ಬಂದಿ ಕೊರತೆ ಯಾಗದಂತೆ ನೋಡಿ ಕೊಳ್ಳಿ ಎಂದು ಹೇಳಿದರು. ಹಾಗೂ ಸತ್ತರ ಸಾಬ್ ಮಾತನಾಡಿ ಮೋಹರಂ ಹಬ್ಬದ ಆಚರಣೆ ಬಗ್ಗೆ ವಿವರಿಸಿದರು ಸಭೆಯಲ್ಲಿ ಕೊಟ್ಟೂರು ಹಾಗೂ ಸುತ್ತ ಮುತ್ತ ಹಳ್ಳಿಯವರು ಭಾಗವಹಿಸಿದ್ದರು. ಸಭೆಯಲ್ಲಿ ಕೆ ಎಸ್ ಜಯಪ್ರಕಾಶನಾಯ್ಕ ಮೆದಾರ ಬಸಣ್ಣ ಕೆಂಗರಾಜ ರಾಮಣ್ಣ ಸಿಬ್ಬಂದಿ ಗಳಾದ ಕೊಟ್ರಗೌಡ ಗುರು ಬಸವರಾಜ ರೇವಣಸಿದ್ದಪ್ಪ ಅನಿಲ್ ಕೃಷ್ಣನಾಯ್ಕ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್ ಕುಮಾರ್ ಸಿ ಕೊಟ್ಟೂರು.