ಲೋಕಲ್ ಸುದ್ದಿ : ಶ್ರೀ ಸಿದ್ದಶ್ರೀ ಪ್ರಶಸ್ತಿ ಪಡೆದ ಉದ್ಯಮಿ ವಿಜಯ ಸಂಕೇಶ್ವರ, ನಟಿ ಪ್ರೇಮಾ ….!
ಬಾಗಲಕೋಟೆ :
ಬಾಗಲಕೋಟ ಜಿಲ್ಲೆಯ ಸಿದ್ಧನಕೊಳ್ಳದ ಶ್ರೀ ಸಿದ್ದೇಶ್ವರ ಶ್ರೀಗಳ ಅವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ VRL ಸಂಸ್ಥೆಯ ಮಾಲಿಕರಾದ ಶ್ರೀ ವಿಜಯ ಸಂಕೇಶ್ವರ ಮತ್ತು ಸ್ಯಾಂಡಲ್ ವುಡ್ ನ ಟ್ಯಾಲೆಂಟೆಡ್ ಚಿತ್ರನಟಿ ಪ್ರೇಮಾ ಅವರಿಗೆ ಸಿದ್ದಶ್ರೀ ಪ್ರಶಸ್ತಿಯನ್ನು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಪ್ರದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್, ಶಿವಕುಮಾರ್ ಸ್ವಾಮೀಜಿಗಳು, ಹಾಗೂ ಹುನಗುಂದ ,ಇಲಕಲ್ಲ ಹಾಗೂ ಜಿಲ್ಲೆಯ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.