ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನಾ ದಿನದ ಸ್ಮರಣಾರ್ಥ;ಉಚಿತ ಆರೋಗ್ಯ ತಪಾಸಣೆ…..!

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನಾ ದಿನದ ಸ್ಮರಣಾರ್ಥ ಅಂಗವಾಗಿ ಉಚಿತ ಆರೋಗ್ಯ ಸೇವಾ ಸೌಲಭ್ಯವನ್ನು ಪಡೆದುಕೊಳ್ಳಲು ಮೆಡಿಕಲ್ ಕಾಲೇಜ್ ಪ್ರಕಟಣೆ ಹೊರಡಿಸಿದೆ

ಬಾಗಲಕೋಟೆ (ಫೆ.23) : 

ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಆರಂಭಿಸಲಾದ ಉಚಿತ ಮತ್ತು ರಿಯಾಯಿತಿ ದರದ ಶಸ್ತ್ರಚಿಕಿತ್ಸಾ ಸೌಲಭ್ಯ ಮಾರ್ಚ್ 3 ರಂದು ಕೊನೆಗೊಳ್ಳಲಿದೆ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನಾ ದಿನದ ಸ್ಮರಣಾರ್ಥ ಈ ಆರೋಗ್ಯ ಸೇವಾ ಸೌಲಭ್ಯವನ್ನು ಆರಂಭಿಸಲಾಗಿತ್ತು. ಹೊರರೋಗಿಗಳಿಗೆ: ನೋಂದಣಿ, ಸಾಮಾನ್ಯ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆ, ಇ.ಸಿ.ಜಿ (ಮೊದಲನೆಯದು) ಸೇವೆಗಳು ಉಚಿತವಾಗಿವೆ. ಅಲ್ಪಾಸೌಂಡ್, ಎಕ್ಸ್-ರೇ, ಮೆಮೊಗ್ರಾಫಿ, ಇ.ಸಿ.ಜಿ ಎರಡನೆಯದು, ಇತರೆ ವಿಶೇಷ ರಕ್ತಪರೀಕ್ಷೆಗಳನ್ನು ಪ್ರತಿಶತ 50 ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

  • ಒಳರೋಗಿಗಳಿಗೆ : 

ಜನರಲ್ ವಾರ್ಡ್, ಶಸ್ತ್ರಚಿಕಿತ್ಸೆ (ಹೆರಿಗೆ ಸಹಿತ), ಸಾಮಾನ್ಯ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆ, ಅಲ್ಟಾಸೌಂಡ್ (OBG, ಇ.ಸಿ.ಜಿ (ಮೊದಲನೆಯದು) ಸೇವೆಗಳು ಉಚಿತವಾಗಿವೆ. ಅಲ್ಪಾಸೌಂಡ್ ಇತರೆ ವಿಭಾಗ, X-RAY, ಮೆಮೊಗ್ರಾಫಿ, E.C.G ಎರಡನೆಯದು, ಇತರೆ ವಿಶೇಷ ರಕ್ತಪರೀಕ್ಷೆಗಳನ್ನು ಪ್ರತಿಶತ 50 ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಔಷಧಿ ಮತ್ತು ಶಸ್ತ್ರಚಿಕಿತ್ಸಾ ಸಾಮಗ್ರಿಗಳ ವೆಚ್ಚವನ್ನಷ್ಟೇ ರೋಗಿಗಳು ಭರಿಸಿ ಈ ಉಚಿತ ಚಿಕಿತ್ಸಾ ಸೌಲಭ್ಯವನ್ನು ಪಡೆಯಬಹುದು. ಸುಪರ್ ಸ್ಪೆಷಾಲಿಟಿ, M.R.I ,C.T. ಸ್ಕ್ಯಾನ್, ಐ.ಸಿ.ಯು, ಬ್ಲಡ್ ಬ್ಯಾಂಕ್ ಸೇವೆಗಳಿಗೆ ರಿಯಾಯಿತಿ ಇರುವುದಿಲ್ಲ. ಸಾರ್ವಜನಿಕರು ಈ ಸೇವಾ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button