ಇಂಡಿ ತಾಲೂಕಾ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ
ಇಂಡಿ ಏ.18
ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ಶ್ರೀ ನಿಂಗರಾಯ ದೇವರ ದೇವಾಲಯದಲ್ಲಿ ಮಂಗಳವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಭೆಯಲ್ಲಿ ಜಿಲ್ಲಾ ಅತಿಥಿ ಶಿಕ್ಷಕರ ಅಧ್ಯಕ್ಷರಾದ ದಾನೇಶ ಕಲಕೇರಿ ಮಾತನಾಡಿ ಅತಿಥಿ ಶಿಕ್ಷಕರೆಲ್ಲರೂ ರಾಜ್ಯ ಸಂಘಕ್ಕೆ ಬದ್ದರಾಗಿದ್ದರೆ ನಿಮ್ಮ ಹಕ್ಕುಗಳನ್ನು ನ್ಯಾಯಾಂಗದ ಮೊರೆ ಹೊಗಿ ನ್ಯಾಯ ಒದಗಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.

ಅದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಬಿ ಎಸ್ ಹೊಸೂರ ಪ್ರದೀಪ ದೊಡಮನಿ ಹಾಗೂ ಆಲಮೇಲ ತಾಲೂಕಿನ ಅಧ್ಯಕ್ಷರಾದ ಶರಣಗೌಡ ಬಿರಾದಾರ ಸಂಘಟನೆಯ ರೂಪರೇಷೆಗಳನ್ನು ಕುರಿತು ಮಾತನಾಡಿದರು.ಅದೇ ಸಂದರ್ಭದಲ್ಲಿ ಇಂಡಿ ತಾಲೂಕಿನ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕುಮಸಗಿ.ಗೌರವ ಅಧ್ಯಕ್ಷರಾಗಿ ಸತ್ಯಶ್ರೀ ಕಾಳೆ.ಉಪಾಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಕುಂಬಾರ.ಪ್ರಧಾನ ಕಾರ್ಯದರ್ಶಿರಾಗಿ ಗಂಗಪ್ಪ ಹರಿಜನ. ಖಜಾಂಚಿಯಾಗಿ ಶ್ರೀಮತಿ ನಿಲಾಂಬಿಕೆ ಗುರುಕಾರ. ಸಂಘಟನಾ ಕಾರ್ಯದರ್ಶಿಗಳಾಗಿ ಮಾಂತಪ್ಪ ಹೊಸೂರ. ಸಂಚಾಲಕರಾಗಿ ಶ್ರೀಮತಿ ಸುನೀತಾ ಪೂಜಾರಿ. ನಿರ್ದೇಶಕರಾಗಿ ಕುಬೇರ ಜಾಗೀರದಾರ. ಕುಮಾರಿ ಸವಿತಾ ಸಾತಲಗಾಂವ. ಪ್ರವೀಣಕುಮಾರ ವಾಗಮೋರೆ. ಮಹೇಶ ಪಾಟೀಲ ಇವರನ್ನು ನೇಮಿಸಲಾಯಿತು ಈ ಸಭೆಯಲ್ಲಿ ತಾಲೂಕಿನ ಅತಿಥಿ ಶಿಕ್ಷಕರಾದ ಸಂಗಮೇಶ .ಮುತ್ತುಸ್ವಾಮಿ. ಲಲಿತಾಬಾಯಿ.ಸೇರಿದಂತೆ ಮುಂತಾದ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು: ಬೀ. ಎಸ್. ಹೊಸೂರ್.ವಿಜಯಪುರ