ವಾಲ್ಮೀಕಿ ಶಾಲೆಯಲ್ಲಿ ವಾರ್ಷಿಕ – ಸ್ನೇಹ ಸಮ್ಮೇಳನ ನಡೆಯಿತು.
ದೇವರ ಹಿಪ್ಪರಗಿ ಮಾ.09

ಮಹರ್ಷಿ ವಾಲ್ಮೀಕಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ದೇವರ ಹಿಪ್ಪರಗಿ ಇವರು ಹಮ್ಮಿ ಕೊಂಡಿರುವ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8 ನೇ. ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ವಾಲ್ಮೀಕಿ ಉತ್ಸವ. ವಿವಿಧ ಸಾಂಸ್ಕೃತಿಕವನ್ನು ಮಾರ್ಚ್ 7. ರಂದು ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು. ಈ ಸುಂದರ ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯ ಗುರು ಮಾತೆಯರಾದ ಆರ್.ಬಿ ಪಾಟೀಲ ಅಧ್ಯಕ್ಷತೆ ಸ್ಥಾನವನ್ನು ವಹಿಸಿ ಕೊಂಡಿದ್ದರು. ಹಾಗೂ ಈ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಮಹೇಶ ಹಾದಿಮನಿ ಅರುಣ ಕೊರವಾರ್ ರಾಜು ಕುಂಬಾರ ಮಾಣಿಕೇಶ್ವರಿ ಹಾವಳಗಿ ಸುಜಾತಾ ಜಾದವ್ ಲಲಿತಾ ಸಣ್ಣಕ್ಕಿ ಹಾಗೂ ಕುಮಾರಿ ಸುಧಾ ಕುಂಬಾರ ವಹಿಸಿ ಕೊಂಡಿದ್ದರು. ಹಾಗೂ ಅಡುಗೆ ಸಿಬ್ಬಂದಿಯವರು ಊರಿನ ಹಿರಿಯರು ಮತ್ತು ಮುದ್ದು ಮಕ್ಕಳು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ