ಸಂಭ್ರಮದಿಂದ ಸಾಗಿದ ಶರಣ ಬಸವೇಶ್ವರ – ರಥೋತ್ಸವ ಕಾರ್ಯಕ್ರಮ ಜರಗಿತು.

ಇಳಕಲ್ಲ ಮಾ.20

ನಗರದ ಕುಲಕರ್ಣಿ ಪೇಟೆಯ ಆರಾಧ್ಯ ದೈವ ಶ್ರೀ ಶರಣ ಬಸವೇಶ್ವರ ರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ.ಬರಗಾಲ ಬಂಟ, ದಾಸೋಹ ಮೂರ್ತಿ, ಕಲಬುರ್ಗಿಯ ಶ್ರೀ ಶರಣಬಸವೇಶ್ವರ 203 ನೇ. ಜಾತ್ರಾ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾ 19. ರಂದು ಇಳಕಲ್ ನಗರದ ಕುಲಕರ್ಣಿ ಪೇಟೆಯ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ರಥೋತ್ಸವವು ಸಂಭ್ರಮದಿಂದ ಸಾಗಿತು.ಯುವಕರು ಶರಣ ಬಸವೇಶ್ವರ ಮಹಾರಾಜ್ ಕಿ ಜೈ ಕಾರ ಹಾಕುತ್ತಾ ಘೋಷಣೆಗಳ ಮೂಲಕ ರಥ ಎಳೆದರು. ದೇವಸ್ಥಾನದಿಂದ ಹೊರಟ ರಥವು ಪಾದಗಟ್ಟಿಯ ವರೆಗೆ ಸಾಗಿ ಕೆಲ ಹೊತ್ತು ಅಲ್ಲಿಯೇ ತಂಗಿದ ಸಂದರ್ಭದಲ್ಲಿರಥ ಮುಟ್ಟಿ ನಮಸ್ಕರಿಸಲು ಭಕ್ತಾಧಿಗಳು ಮುಗಿಬಿದ್ದರು, ನಂತರ ಹಿಮ್ಮುಖವಾಗಿ ಹೊರಟ ರಥ ಮೂಲ ಸ್ಥಳಕ್ಕೆ ಬಂದು ಸಮಾಪನ ಗೊಂಡಿತು. ಜೋಡಿ ಮೂರ್ತಿಯರಥೋತ್ಸವಕ್ಕೆ ವನಿತೆಯರು ಹೊಸ ಮೆರಗು ನೀಡಿದರು.ಶರಣ ಬಸವೇಶ್ವರರ ಪದಗಳನ್ನು ಹಾಡುತ್ತ, ವಾದ್ಯ ಮೇಳಗಳು ಮೊಳಗಿದವು, ರಥದ ಹಿಂದುಗಡೆ ‘ಆರತಿ ತಟೆ’ ಹಿಡಿದ ಹೆಣ್ಣುಮಕ್ಕಳು ಹೆಜ್ಜೆ ಹಾಕಿದರು, ವರ್ಣಮಯ ಇಳಕಲ್ ಸೀರೆ, ಆಭರಣ ತೊಟ್ಟು, ಹಣೆಗೆ ವಿಭೂತಿ ಧರಿಸಿ ಬಂದ ಗೃಹಿಣಿಯರು ಶರಣಬಸವೇಶ್ವರರ ಪದಗಳನ್ನು ಹಾಡುತ್ತಾ ಸಾಗಿದರು. ಇದೇ ಸಂದರ್ಭದಲ್ಲಿ ಯುವಕ- ಯುವತಿ ಯರು ತಮ್ಮ ಮೊಬೈಲ್ ಮೂಲಕ ಎಳೆಯುತ್ತಿರುವ ರಥದ ಜೊತೆಗೆ ಪಟಾಕಿ ದೃಶ್ಯವನ್ನು ಸೇರೆ ಹಿಡಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button