ಮಳೆಗಾಲದಲ್ಲಿ ಮಕ್ಕಳನ್ನೇ ಟಾರ್ಗೆಟ್!: ಪೋಷಕರೇ ಎಚ್ಚರ:ಕಣ್ಣು ಕೆಂಪಾಗಿಸುತ್ತಿದೆ ಮದ್ರಾಸ್ ಐ.

ಕೊಟ್ಟೂರು ಆಗಷ್ಟ.6

ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದರ ಪರಿಣಾಮ ಪೋಷಕರು ಬಹಳ ಆತಂಕಕ್ಕೆ ಒಳಗಾಗಿದ್ದಾರೆ.ಕಳೆದೊಂದು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರೋ ಮಳೆಗೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಜೋರು ಮಳೆ ಮಧ್ಯೆ ರಾಜ್ಯದಲ್ಲಿ ಮದ್ರಾಸ್‌ ಐ ಸಮಸ್ಯೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ಹಲವು ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಿದ್ದು, ಪೋಷಕರು ಎಚ್ಚರ ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಹೌದು, ರಾಜ್ಯಾದ್ಯಂತ ಮಳೆಯ ಅಬ್ಬರದ ಮಧ್ಯೆಯೂ ಎಲ್ಲಿ ಕೇಳಿದರೂ ಒಂದೇ ಸುದ್ದಿ. ಅದು ಮದ್ರಾಸ್‌ ಐ ಸಮಸ್ಯೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರೋ ಕಾರಣ ಈ ಮದ್ರಾಸ್ ಐ ಕಾಣಿಸಿಕೊಂಡಿದೆ. ಇದನ್ನು ಪಿಂಕ್ ಐ ಎಂದು ಕರೆಯಲಾಗುತ್ತದೆ.ಪ್ರತಿದಿನ 100 ರಿಂದ 150 ಸೊಂಕಿತರು ಕೊಟ್ಟೂರು ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಆಗಮಿಸುತ್ತಿದ್ದು. ಆಸ್ಪತ್ರೆಗೆ ಮದ್ರಾಸ್‌ ಐ ರೋಗಿಗಳಿಗೆ ಚಿಕಿತ್ಸೆಯ ಎಲ್ಲಾ ರೀತಿಯ ಔಷಧಿ ಲಭ್ಯವಾಗಿರುತ್ತದೆ. ಮಳೆಗಾಲದಲ್ಲಿ ಹೆಚ್ಚಿನ ತೇವಾಂಶ ಇರುವುದರಿಂದ ಮದ್ರಾಸ್ ಐ ಬರುವ ಸಾಧ್ಯತೆ ಹೆಚ್ಚು ಜಾಗೃತಿಯಾಗಿ ವಹಿಸಬೇಕೆಂದು ತಾಲೂಕು ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದರು.ಏನಿದು ಮದ್ರಾಸ್ ಐ?ಮಳೆಗಾಲದಲ್ಲಿ ಮದ್ರಾಸ್‌ ಐ ಕಾಣಿಸಿಕೊಳ್ಳುತ್ತದೆ. ಮಕ್ಕಳ ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದೇ ಮದ್ರಾಸ್ ಐ. ಇದಕ್ಕೆ ಕಂಜಂಕ್ಟಿವಿಟಿಸ್‌ ಎಂದೂ ಕರೆಯುತ್ತೇವೆ.

ಅದರಲ್ಲೂ ಮಳೆಗಾಲದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣ ಬ್ಯಾಕ್ಟೀರಿಯಾ. ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಾಗ ಕಣ್ಣುಗಳು ಕೆಂಪಾಗುತ್ತವೆ. ಕಣ್ಣುಗಳು ಊದಿಕೊಳ್ಳುವುದು, ನೀರು ಸೋರುವುದು, ತುರಿಕೆ ಉಂಟಾಗುವುದು; ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿವೆ.ಇದು ಗಂಭೀರ ಕಾಯಿಲೆ ನಿರ್ಲಕ್ಷ ಮಾಡಿದರೆ ಕಣ್ಣು ಕಳೆದುಕೊಳ್ಳುವ ಅಪಾಯವಿರುತ್ತದೆ.ಮದ್ರಾಸ್ ಐ ತಡೆಗಟ್ಟಲು ಏನು ಮಾಡಬೇಕು?ಪಿಂಕ್ ಐ ಕಾಣಿಸಿಕೊಂಡವರು ಬಟ್ಟೆಗಳು, ಟವಲ್, ಕರವಸ್ತ್ರಗಳನ್ನು ಎಂದು ಹಂಚಿಕೊಳ್ಳಬೇಡಿ, ಮದ್ರಾಸ್ ಐ ಕಾಣಿಸಿಕೊಂಡಿರುವವರು ಕನ್ನಡಕ ಧರಿಸುವುದು ಒಳ್ಳೆಯದು, ಶಾಲೆಯಲ್ಲಿ ಮಕ್ಕಳಿಗೆ ಮದ್ರಾಸ್ ಐ ಹರಡುತ್ತಿದ್ದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ನಾಲ್ಕೈದು ದಿನಗಳ ನಂತರ ಸೋಂಕು ಹೊರಡುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ನಂತರ ಮಕ್ಕಳನ್ನು ಶಾಲೆಗೆ ಕಳಿಸಬೇಕು. ನೀವು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡದ ಬಿಟ್ಟರೆ ಗಂಭೀರವಾದ ಕಣ್ಣಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ರೀತಿಯ ಸೊಂಕುಗಳು ಕಂಡು ಬಂದರೆ ಕೂಡಲೇ ಹತ್ತಿರದ ಕೊಟ್ಟೂರು ಆರೋಗ್ಯಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿಗಳು ಪ್ರದೀಪ್ ಕುಮಾರ್ ಸಾರ್ವಜನಿಕರಲ್ಲಿ ವಿನಂತಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button