ಕಲ್ಲಡ್ಕ ಪ್ರಭಾಕರ್ ಭಟ್ ಅವಹೇಳನಕಾರಿ ಹೇಳಿಕೆ – ದೂರು ಸಲ್ಲಿಸಿದ ವುಮೆನ್ ಇಂಡಿಯಾ ಮೂವ್ಮೆಂಟ್ ಸದಸ್ಯರು.
ಹುನಗುಂದ ಡಿಸೆಂಬರ್.28

ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದಲ್ಲಿ ಇತ್ತೀಚಿಗೆ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವುಮೆನ್ ಇಂಡಿಯಾ ಮೂವ್ಮೆಂಟ್ (ಡಬ್ಲ್ಯೂಐಎಂ)ನ ಜಿಲ್ಲಾ ಸಮಿತಿ ಸದಸ್ಯರು ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಪಿಎಸ್ಐ ಚನ್ನಯ್ಯ ದೇವೂರು ಅವರಿಗೆ ದೂರು ಸಲ್ಲಿಸಿದರು.ಈ ವೇಳೆ ವುಮೆನ್ ಇಂಡಿಯಾ ಮೂವ್ಮೆಂಟ್ನ ಜಿಲ್ಲಾ ಸಮಿತಿ ಸದಸ್ಯೆ ರುಬಿನಾಬೇಗಂ ನದಾಫ್ ಮಾತನಾಡಿ ಮುಸ್ಲಿಂ ಮಹಿಳೆಯರಿಗೆ ಪ್ರಧಾನಿ ಮೋದಿ ಬರುವ ಮುಂಚೆ ದಿನಕೊಬ್ಬ ಗಂಡ ಇರತ್ತಿದ್ದರೂ ಮೋದಿ ಬಂದಾಗಿನಿಂದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಾಶ್ವತ ಗಂಡ ಸಿಕ್ಕಿದ್ದು.ಮುಸ್ಲಿಂ ಯುವಕರು ಮಾತ್ರವಲ್ಲ ಮುಸ್ಲಿಂ ಮಹಿಳೆಯರು ಮೋಸ ಮಾಡುತ್ತಿದ್ದಾರೆ. ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡುತ್ತಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ಟ ಅವರು ಅತ್ಯಂತ ಕೀಳಾಗಿ ಬಹಿರಂಗವಾಗಿ ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದು,ಇದು ಕೋಮು ಗಲಭೆಯನ್ನು ಪ್ರಚೋಧಸುವ ಹೇಳಿಕೆಯಾಗಿದ್ದು. ಒಂದು ಸಮುದಾಯ ಮತ್ತು ವ್ಯಕ್ತಿಗತ ಗೌರವಕ್ಕೆ ದಕ್ಕೆ ಬಂದಾಗ ಸುಪ್ರೀಂ ಕೋರ್ಟ್ ಆದೇಶದಂತೆ ಪೊಲೀಸ್ರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸ ಕೊಳ್ಳಬೇಕಿತ್ತು ಆದರೆ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಪೊಲೀಸ್ರು ಸುಮೋಟೋ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಬಹಿರಂಗ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜೈನಬ್ ಭನ್ನು, ಶಮಶಾದ್ ಖಾಜಿ, ಹುಸೇನಬಿ ವಾಲಿಕಾರ, ಉಮ್ಮೆ ಬೈತುಲ್ಲಾ ಛಾವಣಿ, ಸ್ವಾಲಿಹಾ ನಧಾಪ್, ರೇಷ್ಮಾ ಚೌದ್ರಿ, ಮಾಲನಬಿ ಲಾಲಕೋಟಿ, ಝುಲೇಖಾ ಕಲ್ಬುರ್ಗಿ, ದಿಲ್ಶಾದ್ ಬಂಗಾರಗುಂಡ್, ಆಶಾ ಪರ್ವಿನ್ ಕಲ್ಬುರ್ಗಿ, ಸುಲ್ತಾನಾ ಲಾಹೋರ್ ಇದ್ದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ