ಕೊಟ್ಟೂರು ಬಿ.ಸಿ.ಎಂ ಹಾಸ್ಟೇಲ್ ವತಿಯಿಂದ 75.ನೇ ಗಣರಾಜ್ಯೋತ್ಸವ ಆಚರಣೆ.

ಕೊಟ್ಟೂರು ಜನೇವರಿ.27

ಕೆಲವೊಂದು ಇಲಾಖೆಗಳು ಆಚರಣೆ ಮಾತ್ರ ಸೀಮಿತವಾಗಿವೆ ಮತ್ತು ರಾಷ್ಟ್ರೀಯ ಹಬ್ಬಗಳನ್ನು ಹಾಗೂ ಜಯಂತಿಗಳನ್ನು ಆಚರಣೆ ಮಾಡುವುದು ಸಹಜವಾಗಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಹಳ್ಳಿಗಳಲ್ಲಿ ಗಣರಾಜ್ಯೋತ್ಸವ ಅಂದರೆ ತುಂಬಾ ಅದ್ದೂರಿಯಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ತದನಂತರ ಧ್ವಜಾರೋಹಣ ಮಾಡಿ ಅಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಂದ ಕೆಲ ಶಾಲೆ ಗ್ರಾಮ ಪಂಚಾಯಿತಿ ಇತರೆ ಇಲಾಖೆಗಳಲ್ಲಿ ವಿದ್ಯುತ್ ಬಲ್ಪ್ ಹಾಗೂ ಪೇಪರ್ ಕಟಿಂಗ್ ಮೂಲಕ ಬಣ್ಣ ಅಚ್ಚಿ ಅಲಂಕಾರ ಗೊಳಿಸಿ ಶುದ್ಧವಾದ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ ದೇಶಭಕ್ತಿ ಗೀತೆಗಳಿಗೆ ಕುಣಿದು ಕುಪ್ಪಳಿಸಿ ಅಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮ ಮೆರೆದು ದೇಶ ಭಕ್ತಿಯನ್ನು ಹೆಚ್ಚಿಸುವುದರಲ್ಲಿ ಕೆಲವರ ಪಾತ್ರ ಬಹು ದೊಡ್ಡದು ಇಂತಹ ದೇಶ ಭಕ್ತರಿಗೆ ನಮ್ಮ”ಸಿಹಿ ಕಹಿ” ಕನ್ನಡ ದಿನ ಪತ್ರಿಕೆ ಮತ್ತು “ಎಸ್.ಕೆ ನ್ಯೂಸ್ ಚಾನಲ್” ಸುದ್ದಿ ವಾಹಿನಿಯಿಂದ ಒಂದು ಸೆಲ್ಯೂಟ್ ಮಾಡೋಣ!

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಬಿಸಿಎಂ ಮೆಟ್ರಿಕ್ ಪೂರ್ವ ಹಾಸ್ಟಲ್ ವತಿಯಿಂದ 75.ನೇ ಗಣರಾಜ್ಯೋತ್ಸವ ಆಚರಣೆ. ಬಿಸಿಎಂ ಮೆಟ್ರಿಕ್ ಪೂರ್ವ ನಿಲಯ ಪಾಲಕರಾದ ಬಸವರಾಜ್ ಧ್ವಜಾರೋಹಣವನ್ನು ನೆರವೇರಿಸಿದರು.ಇಲ್ಲಿನ ವಿದ್ಯಾರ್ಥಿಗಳು ಹಾಸ್ಟೆಲನ್ನು ಅದ್ದೂರಿಯಾಗಿ ಅಲಂಕಾರ ಮಾಡಿ ಭಾರತ ನಕಾಶೆ ರಂಗೋಲಿ ಮೂಲಕ ಬರೆದು ಬಣ್ಣವನ್ನು ನೀಡಿ ಮಾವಿನ ತೋರಣ ಮತ್ತು ಬಣ್ಣದ ಹಾಳೆಗಳನ್ನು ಅಂಟಿಸಿ ರಾಷ್ಟ್ರ ಪ್ರೇಮ ಮೆರೆದರು. ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಸೇರಿದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button