ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರ, ಸ್ಥಳೀಯ ಶಾಸಕರಾಗಿ ಕೊಟ್ಟ ಮಾತಿನಂತೆ ಕೂಡ್ಲಿಗಿ ತಾಲೂಕನ್ನು ಅಭಿವೃದ್ಧಿಯ ಮಾದರಿ ಕ್ಷೇತ್ರ ಮಾಡಲು ಮುಂದಾಗಿರುವ – ಡಾ, ಎನ್.ಟಿ ಶ್ರೀ ನಿವಾಸ್

ಗುಡೇಕೋಟೆ ಫೆ.07

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಹಾಗೂ ಗುಡೇಕೋಟೆ ಹೋಬಳಿಯಲ್ಲಿ ಬರುವ ಕೇಲವು ಗ್ರಾಮಗಳ ಸರಿ ಸುಮಾರು ವರ್ಷಗಳಿಂದ ಹಲವು ಗ್ರಾಮಗಳಲ್ಲಿ ಎಸ್/ಸಿ ಎಸ್/ಟಿ ಕಾಲೋನಿಗಳಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ಮತ್ತು ಡಾಂಬರೀಕರಣ ಕಾಣದೆ ಎಷ್ಟೋ ಹಳ್ಳಿಗಳಲ್ಲಿ ಗ್ರಾಮಸ್ಥರ ಪ್ರಮುಖ ಬೇಡಿಕೆಗಳನ್ನು ಗೆದ್ದು ಬಿಗಿದ ಶಾಸಕರನ್ನು ಕೇಳಿದರು ಎಷ್ಟೋ ಶಾಸಕರು ಬಂದುರು ಆಶ್ವಾಸನೆ ನೀಡಿದರು ಹೋದರು.ಆದರೆ ಸ್ಥಳೀಯ ಅಭ್ಯರ್ಥಿಯಾಗಿ ಗೆಲುವಿಗೆ ಕಾರಣ ರಾಗಿರುವ ಕೂಡ್ಲಿಗಿ ತಾಲೂಕಿನ ಮನೆ ಮನೆಗೂ ಮನೆಯ ಮಗನಂತೆ ಇರುವ ಜನಪ್ರಿಯ ಶಾಸಕ ಎನ್.ಟಿ ಶ್ರೀನಿವಾಸ್ ರವರು ಪ್ರತಿ ಗ್ರಾಮಗಳ ಗಲ್ಲಿ ಗಲ್ಲಿಗಳಲ್ಲಿ ಪಾದಯಾತ್ರೆ ಮಾಡುವುದರ ಮೂಲಕ ಪ್ರತಿ ಹಳ್ಳಿಗಲ್ಲಿ ಮೂಲಭೂತ ಸೌಕರ್ಯಗಳ ಕಾಣದೆ ಕುಡಿಯುವ ನೀರಿನಿಂದ ಹಿಡಿದು ವಿವಿಧ ಬಗೆಯ ಕೊರತೆಗಳನ್ನು ಪಟ್ಟಿ ಮಾಡಿಕೊಂಡು ಆಯಾ ಗ್ರಾಮಗಳ ಮುಖಂಡರು ಗಳೊಂದಿಗೆ ಚರ್ಚೆ ಮಾಡಿ ಬೇಡಿಕೆಗಳನ್ನು ಈಡೇರಿಸಲು ಜಾತಿ ಭೇದವೇನ್ನದೆ ಸಮಾನ ಮನಸ್ಸಿನಿಂದ ತಾಲೂಕಿನ ಯಾವುದೇ ಮೂಲೆ ಕಟ್ಟಿನ ಸ್ಥಳಗಲ್ಲಿ ಬರುವ 15 ರಿಂದ 25 ಕುಟುಂಬಗಳಂತೆ ಬೋಡಜ್ಜನ ಬಂಡೆಯಂತ ಕುಗ್ರಾಮದ ಜನಗಳಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ಯಾವುದೇ ಸರ್ಕಾರದ ಮೂಲಭೂತ ಸೌಕರ್ಯ ಕಾಣದೆ ಗ್ರಾಮಕ್ಕೆ ಸ್ಥಳೀಯ ಶಾಸಕರು ಆಗಿರುವುದರಿಂದ ಅಂತಃ ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲಾ ಅಲ್ಲಿನ ಕುಟುಂಬಗಳಿಗೆ ಕುಡಿಯಲು ನೀರಿಲ್ಲದ ಗ್ರಾಮಕ್ಕೆ ಶಾಸಕರು ಚುನಾವಣೆ ಸಮಯದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಪರಿಸ್ಥಿಯನ್ನು ಮನಗಂಡು ಶಾಸಕರು ಅವರ ಮನಸ್ಸಿನಲ್ಲಿ ಕೊರಗುತ್ತಿದ್ದ.

ಅಭಿವೃದ್ಧಿಯ ವಿಷಯವಾಗಿ ಒಂದಂದಾಗಿ ಸರ್ಕಾರದ ಸವಲತ್ತುಗಳನ್ನು ಆ ಗ್ರಾಮಕ್ಕೆ ಬುಧವಾರ ರಂದು ಕುಮತಿ ಯಿಂದ ಬೋಡಜ್ಜನ ಬಂಡೆಯವರೆಗೆ ರಸ್ತೆ ಇಲ್ಲದಿರುವ ದಾರಿಗೆ ಡಾಂಬರೀಕರಣ ರಸ್ತೆ ಮಾಡಲು 102 ಲಕ್ಷಗಳ ಭೂಮಿ ಪೂಜೆಯನ್ನು ಶಾಸಕರು ನೆರವೇರಿಸಿದರು.ಹಾಗೆ ಕೂಡ್ಲಿಗಿ ತಾಲೂಕಿನ ಸ್ಥಳೀಯರನ್ನು ಶಾಸಕರಾಗಿ ಮಾಡಿ ಕೊಂಡರೆ ಏನು ಉಪಯೋಗ ಎನ್ನುವುದು ಎನ್.ಟಿ ಶ್ರೀನಿವಾಸ್ ಶಾಸಕರು ಮಾಡುತ್ತಿರುವ ತಾಲೂಕಿನಾದ್ಯಂತ ಮೂಲೆ ಮೂಲೆಗಳಲ್ಲಿ ಅಭಿವೃದ್ಧಿಯ ಕೆಲಸಗಳು ಭೂಮಿ ಪೂಜೆಗಳು ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಗಳು ಸಾಕ್ಷಿಯಾಗಿವೇ ಎಂದು ಅನೇಕ ಗ್ರಾಮಸ್ಥ ಮುಖಂಡರು ಹೇಳಿಕೆಗಳಾಗಿವೆ. ಮಾನ್ಯ ಶಾಸಕರು ಒತ್ತು ನೀಡುತ್ತಿರುವ ತಾಲೂಕಿನ ಪಟ್ಟಣ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬೇಕಾಗಿರುವ ಮೊದಲ ಪ್ರಧಾನ್ಯತೆ ಶಿಕ್ಷಣಕ್ಕೆ ಪ್ರತಿ ಗ್ರಾಮಗಳಲ್ಲಿ ಶಾಲಾ ಕೊಠಡಿಗಳು, ಶಾಲಾ ವಿದ್ಯಾರ್ಥಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ, ಕೆಲ ಹಳ್ಳಿ ಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗೆ ಸ್ಥಳವಿಲ್ಲದೆ ಇರುವ ಗ್ರಾಮಗಳಲ್ಲಿ ಶಾಸಕರು ತಮ್ಮ ವ್ಯಯಕ್ತಿಕವಾಗಿ ಭೂಮಿ ಖರೀದಿ ಮಾಡಿ ಗ್ರಾಮದ ವಿದ್ಯಾರ್ಥಿಗಳ ಮನಸ್ಸು ಗೆದ್ದಿದ್ದಾರೆ, ಹಾಗೆ ತಾಲೂಕಿನಾದ್ಯಂತ ಆಸ್ಪತ್ರೆಗೆ ಸಂಬಂಧಿಸಿದಂತೆ ಅನೇಕ ಜನರಿಗೆ ಕಣ್ಣಿನ ಚಿಕಿತ್ಸೆಗಳನ್ನು ಮಾಡಿಸಿ ಇನ್ನಿತರ ಚಿಕಿತ್ಸೆಗಳನ್ನು ಮಾಡಿಸುವುದರೊಂದಿಗೆ ಮಾನವಿಯತೆ ಮೇರದಿದ್ದಾರೆ.

ಹಾಗೆ ಇದೆ ತಿಂಗಳಿನ ಕೆಲವೇ ದಿನಗಳಲ್ಲಿ ನಿರುದ್ಯೋಗ ಯುವಕರಿಗೆ ವಿವಿಧ ಕಂಪನಿಗಳಲ್ಲಿ ಉದೋಗ ನೀಡಲು ಸರ್ಕಾರದ ಮಂತ್ರಿಗಳ ನೇತೃತ್ವದಲ್ಲಿ ಉದೋಗ ಮೇಳವನ್ನು ತಾಲೂಕಿನ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ನೀಡಲು ಮುಂದಾಗಿರುವ ಶಾಸಕರು ಕೂಡ್ಲಿಗಿ ಪಟ್ಟಣದಲ್ಲಿ ಫೆಬ್ರವರಿ 23 ರಂದು ಜ್ಯೂನಿಯರ್ ಕಾಲೇಜ್ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದ್ದು ಇಂತಹ ಉದ್ಯೋಗ ಮೇಳದಲ್ಲಿ ಕೂಡ್ಲಿಗಿ ತಾಲೂಕಿನ ಯುವಕರು, ಯುವತಿಯರು ಸದುಪಯೋಗ ಪಡಿಸಿ ಕೊಳ್ಳುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕರು ತಿಳಿಸಿದ್ದರೆ. “ಶಾಸಕರು ನಡೆ ಕೂಡ್ಲಿಗಿ ತಾಲೂಕಿನ ಅಭಿವೃದ್ಧಿಯ ಕಡೆ ” ಎಂಬ ಮಾತನ್ನು ಕೊಟ್ಟ ಮಾತಿಂನಂತೆ ಕೂಡ್ಲಿಗಿ ತಾಲೂಕನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ನುಡಿದಂತೆ ನಡೆದು ಕೊಳ್ಳುತ್ತಿದ್ದಾರೆ, ಈಗೆ ಇನ್ನೂ ಹೆಚ್ಚು ಹೆಚ್ಚಾಗಿ ಕೂಡ್ಲಿಗಿ ತಾಲೂಕಿಗೆ ದೊಡ್ಡ ದೊಡ್ಡ ಕಂಪನಿಗಳ ಫ್ಯಾಕ್ಟರಿಗಳು, ಶಿಕ್ಷಣಕ್ಕೆ ಬೇಕಾಗಿರುವಂತಹ ವೈದ್ಯಕೀಯ ಹಾಗೂ ಇನ್ನಿತರ ವಿಷಯಗಳ ಅಭ್ಯಾಸ ಮಾಡಲು ಬೇಕಾಗಿರುವ ಕಾಲೇಜುಗಳು ನಿರ್ಮಾಣವಾಗಲಿ ಎನ್ನುವುದು ತಾಲೂಕಿನ ಪ್ರಜ್ಞಾವಂತರ ಕೂಗಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button