ಎನ್.ವೈ.ಗೋಪಾಲಕೃಷ್ಣ ಶಾಸಕರು ಬಡವರಿಗೆ ಮೂಲಭೂತ ಸೌಕರ್ಯಗಳು ಸರಿಯಾಗಿ ಒದಗಿಸಿಕೊಡುತ್ತಾರೆಂದು ಜನಗಳ ನಂಬಿಕೆಯಾಗಿರುತ್ತದೆ.
ಮೊಳಕಾಲ್ಮೂರು ಮೇ.25

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ 2018 ರ ಚುನಾವಣೆಯಲ್ಲಿ ಶ್ರೀರಾಮುಲು ಶಾಸಕರಾಗಿ ಗೆದ್ದು ಸಚಿವರಾಗಿ ಮೊಳಕಾಲ್ಮೂರು ಕ್ಷೇತ್ರದ ಸಾರ್ವಜನಿಕರು ಇಲ್ಲಿ ಏನು ಅಭಿವೃದ್ಧಿಯನ್ನೆ ಕಂಡೆ ಇಲ್ಲ ಅಂತ ಸಾರ್ವಜನಿಕರು ಹೇಳುತ್ತಾರೆ ಆದರೆ ಈ ಮೊಳಕಾಲ್ಮೂರು ಕ್ಷೇತ್ರದ ಜನರ ಪರಿಸ್ಥಿತಿ ಅಧೋಗತಿ ಯಾಗಿತ್ತು ಹಿಂದೆ ಕೇಳುವರೇ ಇಲ್ಲ ಏಳುವರೆ ಇಲ್ಲ ಪರಿಸ್ಥಿತಿಯಾಗಿ ಬಂದಿತ್ತು ಆದರೆ ಈಗ ಜನ ಬುದ್ಧಿವಂತರಿದ್ದಾರೆ ಒಳ್ಳೆ ಶಾಸಕರನ್ನ ನಾವು ಆಯ್ಕೆ ಮಾಡಿಕೊಳ್ಳಬೇಕು. ಎಂದು ನಿರ್ಧಾರ ಮಾಡಿ ಎನ್ ವೈ ಗೋಪಾಲಕೃಷ್ಣ ಶಾಸಕರನ್ನ ಗೆಲ್ಲಿಸಿ ಒಳ್ಳೆ ಯೋಜನೆಗಳನ್ನು ನಾವು ಪಡೆಯಬೇಕೆಂದು ಮೊಳಕಾಲ್ಮೂರು ಕ್ಷೇತ್ರದ ಜನ ಮತದಾರರು ಯಾರು ಮಾತು ಕೇಳದೆ ಸರಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಗುರುತಿಗೆ ಮತವನ್ನು ಕೊಟ್ಟು ಎನ್ ವೈ ಗೋಪಾಲಕೃಷ್ಣ ಶಾಸಕರನ್ನ ಜಯಶೀಲರನ್ನಾಗಿ ಮಾಡಿಕೊಂಡಿದ್ದೇವೆ ಇನ್ನು ಮುಂದೆ ಕಾಂಗ್ರೆಸ್ ಪಕ್ಷದಲ್ಲಿ 5 ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವಂತಹ ಯೋಜನೆಗಳನ್ನು ಜನಗಳಿಗೆ ಸರಿಯಾಗಿ ತಲಪಿಸಬೇಕೆಂದು ನಾಗರಿಕರ ಬಯಕೆಯಾಗಿರುತ್ತದೆ ಮತ್ತು ಆಂಧ್ರ ಗಡಿಭಾಗದ ತಾಲೂಕ ಆಗಿರುವುದರಿಂದ ಎನ್ ವೈ ಗೋಪಾಲಕೃಷ್ಣ ಶಾಸಕರು ಮೂಲಭೂತ ಸೌಕರ್ಯಗಳು ಅಭಿವೃದ್ಧಿಗಳನ್ನು ಹಸನಾಗಿ ಮಾಡುತ್ತಾರೆಂದು ಜನ ನಂಬಿಕೆಯಲ್ಲಿ ಇರುತ್ತಾರೆ ಮತ್ತು ಇಲ್ಲಿ ಬರಿ ಕಡುಬಡವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ ಕೂಲಿ ಮಾಡುವಂತಹ ಜನಗಳು ಜಾಸ್ತಿ ಇದ್ದಾರೆ ಇಲ್ಲಿ ಸರಿಯಾಗಿ ಬಡವರಿಗೆ ರೇಷನ್ ಕಾರ್ಡ್ಗಳು ಸಹ ದೊರಕಿಲ್ಲ ಇಂತಹ ಭ್ರಷ್ಟ ಅಧಿಕಾರಿಗಳು ಇದ್ದಾರೆ ಬಡವರ ಮೇಲೆ ಕರುಣೆ ಇಲ್ಲ ಮಮಕಾರ ಮೊದಲೇ ಇಲ್ಲ ಇಂತಹ ಅಧಿಕಾರಿಗಳು ಇದ್ದಾರೆ ಹೇಗೆ ಬಡವರು ಉದ್ದಾರ ಆಗುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು