ಗ್ರಾಮ ಪಂಚಾಯತಿ ಸದಸ್ಯರಿಬ್ಬರ – ಸದಸ್ಯತ್ವ ರದ್ದು.

ಉಟಕನೂರು ಜ.25

ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಕಾವೇರಿ ಹಾಗು ಹಾಲಿ ಅಧ್ಯಕ್ಷೆ ಈರಮ್ಮ ಅವರು 15 ನೇ. ಹಣಕಾಸು ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ದೂರಿನ ಆಧಾರದ ಮೇಲೆ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಎಂ.ಬಿ ನಾಯಕ ತಿಳಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ 2022-23 ನೇ. ಸಾಲಿನ 15 ನೇ. ಹಣಕಾಸು ಯೋಜನೆಯ ಸರಕಾರದ ನಿಯಮಗಳಂತೆ ಕಾಮಗಾರಿ ಮಾಡದೆ ಉಲ್ಲಂಘನೆ ಮಾಡಿದ್ದರಿಂದ ನಾವು ಹೋರಾಟ ಮಾಡಲಾಗಿತ್ತು.

ಸರಕಾರದ ಅಧಿಕಾರಿಗಳು ಕಾನೂನು ಬದ್ಧವಾಗಿ ವರದಿ ಸಲ್ಲಿಸಿದ್ದರಿಂದ ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಆದೇಶ ಹೊರಡಿಸಿದ್ದರಿಂದ ನಮಗೆ ಕಾನೂನು ಮೇಲೆ ನಂಬಿಕೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾವೇರಿ ಗಂಡ ಗೋವಿಂದಪ್ಪ ಹಾಲಿ ಸದಸ್ಯರು ಹಾಗು ಪ್ರಸ್ತುತ ಅಧ್ಯಕ್ಷೆ ಈರಮ್ಮ ಗಂಡ ಅಮರಪ್ಪ ಅವರ ಸದಸ್ಯತ್ವ ರದ್ದು ಮಾಡುವುದರ ಜೊತೆಗೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಆದೇಶ ಹೊರಡಿಸಿದ್ದಾರೆ. ಯಾವುದೇ ಪಂಚಾಯತಿ ಅಧಿಕಾರಿಗಳು ಈ ರೀತಿ ಮಾಡ ಬಾರದು ಎಂದು ಎಂ.ಬಿ ನಾಯಕ ಬಸವರಾಜು ತಿಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button