ಮನರೇಗಾ ಯೋಜನೆಯಡಿ ಸ್ವಾವಲಂಬಿ ಬದುಕು – ವೃದ್ಧ ದಂಪತಿಯ ಶ್ರಮಗಾಥೆ.

ಮುಂಡವಾಡ ಏ.26

ಇಳಿ ವಯಸ್ಸಿನ ವೃದ್ಧ ದಂಪತಿಗೆ ಮನರೇಗಾ ಯೋಜನೆಯು ಬದುಕಲು ಆಧಾರವಾಗಿದೆ. ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರಾಗಿ ಭಾಗವಹಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸಿ ಈ ದಂಪತಿ ಯುವಕರನ್ನು ಇಳಿ ವಯಸ್ಸಿನ ವೃದ್ಧ ದಂಪತಿಗೆ ಮನರೇಗಾ ಯೋಜನೆಯು ಬದುಕಲು ಆಧಾರವಾಗಿದೆ. ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರಾಗಿ ಭಾಗವಹಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸಿ ಈ ದಂಪತಿ ಯುವಕರನ್ನು ನಾಚಿಸುವಂತೆ ದುಡಿಮೆ ಮಾಡಿ ಗಟ್ಟಿ ನೆಲೆ ಕಂಡು ಕೊಂಡಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಹಳ್ಳಿ ಪಂಚಾಯತಿಯ ಮುಂಡವಾಡ ಗ್ರಾಮದಲ್ಲಿ ವಾಸವಾಗಿರುವ 82 ವರ್ಷದ ಶಂಕರಪ್ಪ ಕೂಬಿಹಾಳ ಮತ್ತು 74 ವರ್ಷದ ಶಂಕರಮ್ಮ ಕೂಬಿಹಾಳ ದಂಪತಿ, ತಮ್ಮ ಇಳಿ ವಯಸ್ಸಿನಲ್ಲೂ ಶ್ರಮ ಜೀವಿಗಳಾಗಿ ಬದುಕು ಕಟ್ಟಿ ಕೊಂಡಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಈ ದಂಪತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಕೈಜೋಡಿಸಿ ದುಡಿಯುವುದರೊಂದಿಗೆ ಸಹ ಜೀವನ ನಿರ್ವಹಿಸುತ್ತಿದ್ದಾರೆ.ಸಮುದಾಯ ಬದು ನಿರ್ಮಾಣ, ನಾಲಾ ಮತ್ತು ಕೆರೆ ಹೂಳೆತ್ತುವಂತಹ ಶ್ರಮ ಪೂರ್ಣ ಕಾರ್ಯಗಳಲ್ಲೂ ಯುವಕರ ಸಮಾನಾಗಿ ಕೆಲಸ ಮಾಡುತ್ತಾರೆ. ಯಾರ ಸಹಾಯವೂ ಇಲ್ಲದೇ ಶ್ರಮವನ್ನಷ್ಟೇ ನಂಬಿ ಬದುಕುತ್ತಿರುವ ಇವರ ಹಠ ಇಂದಿನ ಪೀಳಿಗೆಗೆ ಒಂದು ಜೀವನ ಪಾಠವಾಗಿದೆ. ಈ ಅಜ್ಜ ಅಜ್ಜಿ ಯುವ ಜನತೆ ನಾಚುವಂತೆ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿಯಲ್ಲಿ ಉದ್ಯೋಗ ಪಡೆದು ಕೆಲಸ ಮಾಡುತ್ತಿದ್ದಾರೆ.

ಬಂದ ಕೂಲಿ ಮೊತ್ತದಿಂದ ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮ ಎರಡು ಎಕರೆ ಕುಷ್ಕ ಕೃಷಿ ಭೂಮಿಯಲ್ಲಿ ಮತ್ತು ಬೇರೆ ರೈತರ ಜಮೀನುಗಳಲ್ಲಿ ದುಡಿಯುವ ಈ ದಂಪತಿ, ಬೇಸಿಗೆ ಕಾಲದಲ್ಲಿ ಮನರೇಗಾ ಕಾಮಗಾರಿಗಳಲ್ಲಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಹಳ್ಳಿ ಪಂಚಾಯತಿಯ ಮುಂಡವಾಡ ಗ್ರಾಮದಲ್ಲಿ ವಾಸವಾಗಿರುವ 82 ವರ್ಷದ ಶಂಕರಪ್ಪ ಕೂಬಿಹಾಳ ಮತ್ತು 74 ವರ್ಷದ ಶಂಕರಮ್ಮ ಕೂಬಿಹಾಳ ದಂಪತಿ, ತಮ್ಮ ಇಳಿ ವಯಸ್ಸಿನಲ್ಲೂ ಶ್ರಮ ಜೀವಿಗಳಾಗಿ ಬದುಕು ಕಟ್ಟಿ ಕೊಂಡಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಈ ದಂಪತಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಕೈಜೋಡಿಸಿ ದುಡಿಯುವುದರೊಂದಿಗೆ ಸಹ ಜೀವನ ನಿರ್ವಹಿಸುತ್ತಿದ್ದಾರೆ. ಸಮುದಾಯ ಬದು ನಿರ್ಮಾಣ, ನಾಲಾ ಮತ್ತು ಕೆರೆ ಹೂಳೆತ್ತುವಂತಹ ಶ್ರಮ ಪೂರ್ಣ ಕಾರ್ಯಗಳಲ್ಲೂ ಯುವಕರ ಸಮಾನಾಗಿ ಕೆಲಸ ಮಾಡುತ್ತಾರೆ. ಯಾರ ಸಹಾಯವೂ ಇಲ್ಲದೇ ಶ್ರಮವನ್ನಷ್ಟೇ ನಂಬಿ ಬದುಕುತ್ತಿರುವ ಇವರ ಹಠ ಇಂದಿನ ಪೀಳಿಗೆಗೆ ಒಂದು ಜೀವನ ಪಾಠವಾಗಿದೆ. ಐವತ್ತು ಅರವತ್ತು ವಯಸ್ಸಿಗೆ ಜನರು ಆರೋಗ್ಯದ ವಿಚಾರದಲ್ಲಿ ಹೆಚ್ಚು ಹೈರಾಣಾಗುವ ಇಂದಿನ ದಿನ ಮಾನಗಳಲ್ಲಿ ಈ ದಂಪತಿಗಳ ಬಳಿ ಯಾವುದೇ ಕಾಯಿಲೆ ಹತ್ತಿರ ಸುಳಿದಿಲ್ಲ. ಕಿವಿಗಳು ಸ್ಪಷ್ಟವಾಗಿ ಕೇಳುತ್ತವೆ. ಕಣ್ಣುಗಳು ನಿಚ್ಚಳವಾಗಿ ಕಾಣಿಸುತ್ತವೆ. ಕೂಲಿ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಆ ಮೂಲಕ ನರೇಗಾ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಇರುವ ಅರ್ಧ ಕೆಲಸ ಪೂರ್ಣ ಕೂಲಿ ಎಂಬ ನಿಯಮವನ್ನು ಸದುಪಯೋಗ ಪಡಿಸಿ ಕೊಂಡಿದ್ದಾರೆ. ಯುವಕರು ನಾಚುವಂತೆ ಕಷ್ಟಪಟ್ಟು ಕೆಲಸ ನಿರ್ವಹಿಸಿ ಕೂಲಿ ಮೊತ್ತದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಹಿರಿಯ ನರೇಗಾ ಕೂಲಿ ಕಾರ್ಮಿಕ ದಂಪತಿ ಈ ದಿನ. ಕಾಮ್ ಜೊತೆಗೆ ಮಾತನಾಡಿ, “ಬ್ಯಾಸಗಿಯೊಳಗ ನಾವು ತಪ್ಪದ ಮನರೇಗಾ ಕಾಮಗಾರಿ ಯೊಳಗ ಭಾಗವಹಿಸ್ತೀವಿ. ಇದು ನಮ್ಮ ದುಡಿತಕ್ಕ ಭಾಳಾ ಅನುಕೂಲ ಆಗೈದ. ಸುಮಾರು ಹತ್ತ ವರ್ಷ ಆಗಿರ ಬೇಕ್‌ರಿ ನಾವು ಹಿಂಗ ದುಡಕೋತ ಬಂದು. ನರೇಗಾ ಕೆಲಸ ಇಲ್ದಾಗ ನಮ್ಮ ಹಾಗೂ ಮಂದಿ ಹೊಲ್ದಾಗ ಜೊತಿಯಾಗಿ ದುಡಿತಿ’ ಎಂದು ಪ್ರತಿಕ್ರಿಯೆ ನೀಡಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button