ಸಿ.ಎಂ ಡಿ.ಸಿ.ಎಂ ಆಗಮನಕ್ಕೆ ಪೂರ್ವ ಸಿದ್ಧತಾ ಪರೀಶೀಲನೆ.
ಕೂಡ್ಲಿಗಿ ಏಪ್ರಿಲ್.27

ಬಳ್ಳಾರಿ ಲೋಕ ಸಭಾ ಚುನಾವಣಾ ಕಾಂಗ್ರೇಸ್ ಅಭ್ಯರ್ಥಿ ಈ ತುಕಾರಾಂ ಪರ ಮತ ಯಾಚನೆ ಪ್ರಚಾರ ಸಭೆಗೆ ನಾಡಿದ್ದು . ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹೆಲಿಕ್ಯಾಪ್ಟರ್ ಮೂಲಕ ಕೂಡ್ಲಿಗಿಗೆ ಆಗಮಿಸಲಿದ್ದು ಶಾಸಕರ ಜನ ಸಂಪರ್ಕ ಕಚೇರಿ ಮುಂದಿನ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದ್ದು ಪ್ರಚಾರದ ಸಭೆಯ ವೇದಿಕೆಯನ್ನು ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಸಮಾರಂಭ ವೇದಿಕೆ ಸಿದ್ದಗೊಳ್ಳುತ್ತಿದ್ದೂ ಎರಡು ಸ್ಥಳಗಳಲ್ಲಿ ಹಾಗೂ ಬಂದೋಗುವ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆಗೆ ಕೂಡ್ಲಿಗಿ ಶಾಸಕ ಡಾ. ಎನ್. ಟಿ.ಶ್ರೀನಿವಾಸ ಹಾಗೂ ಕೂಡ್ಲಿಗಿ ಡಿವೈ ಎಸ್ ಪಿ, ಸಿಪಿಐ ಹಾಗೂ ಪಿಎಸ್ಐ ಸ್ಥಳ ಪರಿಶೀಲನೆ ನಡೆಸಿ ಇಂದಿನಿಂದಲೇ ವೀಕ್ಷಣೆ ಮಾಡುತ್ತಿದ್ದಾರೆ. ಕೂಡ್ಲಿಗಿ ಪಟ್ಟಣದಲ್ಲಿ ಏಪ್ರಿಲ್ 29 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಜೂನಿಯರ ಕಾಲೇಜ್ ಆವರಣದಲ್ಲಿ ಬೃಹತ್ ವೇದಿಕೆಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ ಅವರು ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ಪರ ಪ್ರಚಾರ ಮಾಡಲು ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿರುವ ಹಿನ್ನೆಲೆಯಲ್ಲಿ ಇಬ್ಬರು ರಾಜ್ಯ ನಾಯಕರಿಗೆ ಬಿಗಿ ಬಂದೋಬಸ್ತ್ ಏರ್ಪಡಿಸುವ ನಿಟ್ಟಿನಲ್ಲಿ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಮುಂದಿನ ಆವರಣದಲ್ಲಿ ಏರ್ಪಡಿಸ ಲಾಗಿರುವ ಹೆಲಿಪ್ಯಾಡ್ ನ ಸ್ಥಳವನ್ನು ಪೊಲೀಸ್ ಅಧಿಕಾರಿಗಳೊಂದಿಗೆ ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ ಸ್ಥಳ ಪರಿಶೀಲನೆ ನಡೆಸಿದರು. ಮತ್ತು ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ವೇದಿಕೆ ಸಮಾರಂಭದ ಸಿದ್ಧತಾ ಕಾರ್ಯ ಹಾಗೂ ಮಹಾತ್ಮ ಗಾಂಧೀಜಿ ಚಿತಾಭಸ್ಮ ಆವರಣ ಮತ್ತು ಗುಡೇಕೋಟೆ ರಸ್ತೆಯಲ್ಲಿ ಸೂಕ್ತ ರೀತಿಯ ಬಂದೋಬಸ್ತ್ ವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಶಾಸಕ ಡಾ. ಎನ್. ಟಿ.ಶ್ರೀನಿವಾಸ ಚರ್ಚೆ ನಡೆಸಿದರು ಮತ್ತು ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಸಮಾರಂಭಕ್ಕೆ ಕಾರ್ಯಕರ್ತರ ಆಗಮನ ಮತ್ತು ಬಿಸಿಲಲ್ಲಿ ಜನರಿಗೆ ಕುಡಿಯುವ ನೀರು ಕಲ್ಪಿಸುವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಮತ್ತು ನಾಳೆ ಪಟ್ಟಣಕ್ಕೆ ವಿಜಯನಗರ ಉಸ್ತುವಾರಿ ಸಚಿವರು ಝೆಡ್. ಜಮೀರ್ ಅಹಮದ್ ಹಾಗೂ ಇತರೆ ಸಚಿವರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ನಾಡಿದ್ದು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸುವ ಬಗ್ಗೆ ಪೂರ್ವ ತಯಾರಿ ನಡೆಸಲಿದ್ದಾರೆ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್ ಕಾನಾ ಹೊಸಹಳ್ಳಿ.